ಯೋಧರ ಸೇವೆ ಸ್ಮರಣೀಯ: ಸುಧೀರಸಿಂಹ

| Published : Jul 27 2025, 12:01 AM IST

ಸಾರಾಂಶ

ಭಾರತೀಯ ಸೈನಿಕರು ವೀರರೂ ಶೂರರೂ ಆಗಿದ್ದು ಅವರೆಲ್ಲರಿಗೂ ನಾವು ಬೆಂಬಲ ಧೈರ್ಯವನ್ನು ನೀಡಬೇಕಿದೆ.

ಗದಗ: ಭಾರತೀಯ ಯೋಧರು ವೀರರಾಗಿದ್ದು ದೇಶವನ್ನು ಸಂರಕ್ಷಿಸುವ, ಕಟ್ಟುವ ಕಾರ್ಯದಲ್ಲಿ ತೊಡಗಿದವರು ಮಳೆ, ಗಾಳಿ, ಬಿಸಿಲು, ಚಳಿ ಎನ್ನದೇ ದೇಶವನ್ನು ಕಾಯುವ ಕಾಯಕದಲ್ಲಿ ನಿರತರಾಗಿದ್ದು ಇವರ ಸೇವೆ ಸ್ಮರಣೀಯ ಎಂದು ಜಿಲ್ಲಾ ಮಾಜಿ ಸೈನಿಕರ ಸಂಘದ ಸಂಚಾಲಕ ಸುಧೀರಸಿಂಹ ಘೋರ್ಪಡೆ ಹೇಳಿದರು.

ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಶನಿವಾರ ಜಿಲ್ಲಾ ಮಾಜಿ ಸೈನಿಕರ ಸಂಘ, ಮಾಜಿ ಹಾಗೂ ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘ ಹಾಗೂ ವೀರನಾರಿಯರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ 26ನೇ ಕಾರ್ಗಿಲ್ ವಿಜಯೋತ್ಸವದಲ್ಲಿಅವರು ಮಾತನಾಡಿದರು.

ಭಾರತೀಯ ಸೈನಿಕರು ವೀರರೂ ಶೂರರೂ ಆಗಿದ್ದು ಅವರೆಲ್ಲರಿಗೂ ನಾವು ಬೆಂಬಲ ಧೈರ್ಯವನ್ನು ನೀಡಬೇಕಿದೆ. ಕಾರ್ಗಿಲ್ ಯುದ್ದದಲ್ಲಿ ವೀರಮರಣ ಹೊಂದಿದ ಯೋಧರಿಗೆ ನಮನ ಸಲ್ಲಿಸಿದರು.

ಹಾಲಿ ಮತ್ತು ಮಾಜಿ ಪ್ಯಾರಾ ಮಿಲಿಟರಿ ಯೋಧರ ಸಂಘದ ಅಧ್ಯಕ್ಷ ನಾಗರಾಜ ಕುಂದರಗಿ ಮಾತನಾಡಿ, ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶ ರಕ್ಷಣೆ, ಗಡಿ ಕಾಯುವ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡವರು. ಕಾರ್ಗಿಲ್ ವಿಜಯೋತ್ಸವ ಹಾಗೂ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ನೀಡಿದ ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸುವ ಕಾರ್ಯ ಸರ್ಕಾರ, ಜಿಲ್ಲಾಡಳಿತದಿಂದ ಆಗಬೇಕು ಆದರೆ ಮಾಜಿ ಸೈನಿಕರ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿ ಅಧಿಕಾರಿಗಳನ್ನು ಆಮಂತ್ರಿಸುವದು ಎಷ್ಟು ಸಮಂಜಸ ಎಂದರು.

ಕಾರ್ಗಿಲ್ ಯುದ್ಧದ ಘಟನಾವಳಿಗಳನ್ನು ಎಸ್.ಎಸ್.ಪೆಂಟಾ ವಿವರಿಸಿದರು. ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೂಳಯ್ಯ ಮಾಲಗಿತ್ತಿಮಠ ಮಾತನಾಡಿದರು.

ಪ್ರಾರಂಭದಲ್ಲಿ ಮಹಾತ್ಮಾ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಹುತಾತ್ಮ ಯೋಧರ ಗೌರವಾರ್ಥವಾಗಿ ಮೌನ ಆಚರಿಸಲಾಯಿತು.

ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಕಾರ್ಯದರ್ಶಿ ಸಿ.ಜಿ.ಸೊನ್ನದ, ಮಹೇಶ ಆಶಿ, ಈರಣ್ಣ ತಳ್ಳಿಕೇರಿ, ವಿ.ಬಿ.ಬಿಂಗಿ, ಶರಣಪ್ಪ ಸರ್ವಿ, ಕೆ.ಎಸ್.ಹಿರೇಮಠ, ಜಿ.ಬಿ.ಅರವಟಗಿಮಠ, ಎ.ಎಂ.ತಹಶೀಲ್ದಾರ್, ಯಲ್ಲಪ್ಪಗೌಡ ಹುಲ್ಲೂರ, ಶಂಕರಗೌಡ ಪಾಟೀಲ, ಶರೀಫ ಹಿರೇಹಾಳ, ಮಮ್ಮದ್‌ಹನೀಫ್ ಶೇಕಬಾಯಿ, ಬಸನಗೌಡ ಪಾಟೀಲ, ಶಂಕರ ಹಾದಿಮನಿ, ಎಸ್.ಎಸ್.ಪಾಟೀಲ, ಎಂ.ಎಸ್.ಗುಜ್ಜಲ, ಎನ್.ಎಚ್.ಕಂಬಳಿ, ವೀರಯ್ಯ ಮಾಲಗಿತ್ತಿಮಠ, ಶಂಕ್ರಪ್ಪ ಹೆಬ್ಬಳ್ಳಿ, ಸೈಯದ್ ಎಂ.ಹುಕ್, ಮೆಹಬೂಬ ತೆಕ್ಕೆದ, ನಾಗಯ್ಯ ಸಾವಳಗಿಮಠ, ವಾಸಪ್ಪ ಶೆಟವಾಜಿ, ವೀರನಾರಿಯರಾದ ಶಿವಲೀಲಾ ಬಾವಿಕಟ್ಟಿ, ಲಲಿತಾ ಕುರಹಟ್ಟಿ, ರೇಣುಕಾ ಮರಡಿ, ಮೀನಾಕ್ಷಿ ಬದಿ, ಶಾಂತದೇವಿ ಸಾವಳಗಿಮಠ, ವಿ.ಎಸ್.ಅಕ್ಕಿ, ನಾಗರಾಜ ಕುಂದರಗಿ, ಸುರೇಶ ಮುಂಡವಾಡ, ಉಮೇಶ ಕರಿಗಣ್ಣವರ, ಮಲ್ಲಿಕಾರ್ಜುನ ಮೇವುಂಡಿ, ಬಸಯ್ಯ ಹಿರೇಮಠ, ಮಹಾಂತೇಶ ಲಕ್ಕುಂಡಿ, ಮಲ್ಲಯ್ಯ ಕರವೀರಮಠ, ಗೌಸ್‌ಮೋಹದಿನ ನದಾಫ, ರವಿ ಕುಲಕರ್ಣಿ, ಮುತ್ತಣ್ಣ ಸಿಂಗಟಾಲಕೆರೆ, ಈಶ್ವರಪ್ಪ ಕರ್ಕಿಕಟ್ಟಿ, ಸುಭಾಷ ಹಾದಿಮನಿ, ಸೋಮನಗೌಡ ಪಾಟೀಲ, ಅಶೋಕ ನಾಯಕ, ಯಲ್ಲಪ್ಪ ಬೆನಕೊಪ್ಪ, ರಾಮಪ್ಪ ನೀರಲಗಿ, ಕರುಣಾಕರಣ, ಅಣ್ಣಪ್ಪ ಗಾಣಿಗೇರ ಸೇರಿದಂತೆ ಇತರರು ಇದ್ದರು.