ಕ್ರೀಡಾ ಚಟುವಟಿಕೆ ಸಮಸ್ಯೆ ನಿಭಾಯಿಸುವ ಶಕ್ತಿ ನೀಡುತ್ತದೆ: ರಾಜೇಶ್ ಎ.ಆರ್.

| Published : Feb 22 2024, 01:47 AM IST

ಕ್ರೀಡಾ ಚಟುವಟಿಕೆ ಸಮಸ್ಯೆ ನಿಭಾಯಿಸುವ ಶಕ್ತಿ ನೀಡುತ್ತದೆ: ರಾಜೇಶ್ ಎ.ಆರ್.
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾಥಿ೯ಗಳು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸುವುದರಿಂದ ದೈನಂದಿನ ಪಾಠಪ್ರವಚನಗಳ ಒತ್ತಡವನ್ನು ನಿವಾರಿಸಿಕೊಳ್ಳಲು ಸಾಧ್ಯ.

ಕನ್ನಡಪ್ರಭ ವಾರ್ತೆ ಉಡುಪಿವಿದ್ಯಾಥಿ೯ಗಳು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸುವುದರಿಂದ ದೈನಂದಿನ ಪಾಠಪ್ರವಚನಗಳ ಒತ್ತಡವನ್ನು ನಿವಾರಿಸಿಕೊಳ್ಳಲು ಸಾಧ್ಯ. ಕ್ರೀಡೆಗಳು ಸೋಲು ಹಾಗೂ ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಕ್ರೀಡಾ ಸ್ಫೂತಿ೯ಯನ್ನು ಕಲಿಸುತ್ತದೆ. ಇದು ಮುಂದೆ ಜೀವನದಲ್ಲಿ ಮತ್ತು ವೃತ್ತಿಯಲ್ಲಿ ಬರುವ ಸಮಸ್ಯೆಗಳನ್ನು ಕ್ರೀಡಾ ಸ್ಪೂರ್ತಿಯಿಂದ ಸ್ವೀಕರಿಸುವ ಮತ್ತು ಅವುಗಳನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮಥ್ಯ೯ ಬರುತ್ತದೆ ಎಂದು ಉಡುಪಿಯ ವಕೀಲರ ಸಂಘದ ಕಾಯ೯ದಶಿ೯ ಮತ್ತು ವಕೀಲ ರಾಜೇಶ್ ಎ. ಆರ್. ಅವರು ಅಭಿಪ್ರಾಯಪಟ್ಟದರು.

ಅವರು ನಗರದ ಕುಂಜಿಬೆಟ್ಟಿನ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಆಯೋಜಿಸಿದ್ದ ವಾಷಿ೯ಕ ಕ್ರೀಡಾ ಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ವಿದ್ಯೆ ಉದ್ಯೋಗವನ್ನು ನೀಡಿದರೆ ಕ್ರೀಡೆ ಆರೋಗ್ಯವನ್ನು ನೀಡುತ್ತದೆ ಎಂದು ಹೇಳಿದರು.ಕಾಲೇಜಿನ ವಿದ್ಯಾಥಿ೯ ಕ್ಷೇಮಾಧಿಕಾರಿ ಮತ್ತು ಕಾನೂನು ವಿಭಾಗದ ಮುಖ್ಯಸ್ಥೆಯಾದ ಸುರೇಖಾ ಕೆ, ಅವರು ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಾ, ವಿದ್ಯಾಥಿ೯ಗಳು ಕಲಿಕೆಯ ಜೊತೆಗೆ ಆರೋಗ್ಯವನ್ನು ಸುಸ್ಥಿರವಾಗಿ ಇಟ್ಟುಕೊಳ್ಳುವುದು ಅಗತ್ಯಗತ್ಯ. ಅದಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾಥಿ೯ಗಳಿಗೆ ಕರೆ ನೀಡಿದರು. ಕಾಯ೯ಕ್ರಮದಲ್ಲಿ ಕಾಲೇಜಿನ ಕ್ರೀಡಾ ವಿಭಾಗದ ಕಾಯ೯ದಶಿ೯ಯಾದ ವಿದ್ಯಾಥಿ೯ ಲಕ್ಷ್ಮೀಕಾಂತ್, ಕ್ರೀಡಾ ಪಟುಗಳಿಗೆ ಪ್ರತಿಜ್ಞಾ ವಿಧಿ ನಡೆಸಿಕೊಟ್ಟರು. ಕಾಯ೯ಕ್ರಮದಲ್ಲಿ ಉಡುಪಿ ಜಿಲ್ಲಾ ವಕೀಲರ ಸಂಘದ ಕ್ರೀಡಾ ಕಾಯ೯ದಶಿ೯ಯಾದ ಹಾಗೂ ವಕೀಲರಾದ ಸುಮಿತ್ ಹೆಗ್ಡೆ, ಕಾಲೇಜಿನ ದೈಹಿಕ ಶಿಕ್ಷಣ ನಿದೇ೯ಶಕರಾದ ಪ್ರಕಾಶ್ ರಾವ್ ಡಿ. ಮತ್ತು ವಿದ್ಯಾಥಿ೯ ಕಾಯ೯ದಶಿ೯ ಆದಿತ್ಯ ಹಾಜರಿದ್ದರು. ವಿದ್ಯಾಥಿ೯ಗಳಾದ ಶ್ವೇತಾ ಅತಿಥಿಗಳನ್ನು ಸ್ವಾಗತಿಸಿದರು. ವಿವೇಕ್ ವಂದನಾಪ೯ಣೆ ಸಲ್ಲಿಸಿದರು, ರಂಜಿತಾ ನಿರೂಪಿಸಿದರು.