ಸಾರಾಂಶ
ಮಾನ್ವಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಯೋಧ್ಯೆ ಶ್ರೀ ರಾಮೋತ್ಸವ ಸೇವಾ ಸಮಿತಿಯ ವತಿಯಿಂದ ಶ್ರೀರಾಮ ದೇವರ ಪಲ್ಲಕ್ಕಿ ಉತ್ಸವ ಹಾಗೂ ಭಾವಚಿತ್ರ ಮೆರವಣಿಗೆ ನಡೆಯಿತು. ವಿವಿಧ ಕಲಾತಂಡದವರು ರಾಮಾಯಣ ಕಥಾ ಪ್ರಸಂಗದ ಸನ್ನಿವೇಶಗಳನ್ನು ಪ್ರದರ್ಶಿಸಿದರು.
ಕನ್ನಡಪ್ರಭ ವಾರ್ತೆ ಮಾನ್ವಿ
ಪಟ್ಟಣದಲ್ಲಿನ ಉದ್ಭವ ಶ್ರೀ ಆಂಜನೇಯ್ಯ ಸ್ವಾಮಿ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀ ರಾಮೋತ್ಸವ ಸೇವಾ ಸಮಿತಿಯ ವತಿಯಿಂದ ಅಯೋಧ್ಯೆ ಶ್ರೀರಾಮ ಮಂದಿರ ಪುನರ್ ಪ್ರತಿಷ್ಠಾಪನೆ ನೆರವೇರಿದ ಸಂದರ್ಭವಾಗಿ ಹಮ್ಮಿಕೊಂಡ ಶ್ರೀರಾಮ ವಿಜಯೋತ್ಸವ ಕಾರ್ಯಕ್ರಮ, ಉದ್ಭವ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷವಾದ ಪೂಜೆ ಸಲ್ಲಿಸಿ ಸೇವ ಸಮಿತಿಯ ಅಧ್ಯಕ್ಷರಾದ ಆರ್. ಮುತ್ತುರಾಜ್ ಶೆಟ್ಟಿ ಚಾಲನೆ ನೀಡಿದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ, ವಾಲ್ಮೀಕಿ ವೃತ್ತದಲ್ಲಿ ಪುತ್ಥಳಿಗೆ ಪೂಜೆ ಸಲ್ಲಿಸಿ, ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಟಿಎಪಿಸಿಎಂಎಸ್ ಆವರಣದವರೆಗೆ ಶ್ರೀರಾಮ ದೇವರ ಪಲ್ಲಕ್ಕಿ ಉತ್ಸವ ಹಾಗೂ ಭಾವಚಿತ್ರ ಮೆರವಣಿಗೆ ನಡೆಯಿತು. ಕಂಚಿ ಮೇಳ, ಡೊಳ್ಳು ಕುಣಿತ, ಹಾಗೂ ಮಹಿಳಾ ಚಂಡಿವಾದ್ಯಾ ತಂಡ , ಮಹಿಳೆಯರ ಕೋಲಾಟ ತಂಡ ಸೇರಿದಂತೆ ಪಟ್ಟಣದ ಅಲೆಮಾರಿ ಬುಡಗ ಸಮುದಾಯದ ಹಗಲುವೇಶ ಕಲಾ ತಂಡದವರು ಶ್ರೀರಾಮ ಸೀತಾ, ಶ್ರೀ ಆಂಜನೇಯಸ್ವಾಮಿಯ ವೇಷವನ್ನು ಹಾಕಿ ಕೊಂಡು ಶ್ರೀರಾಮಯಣ ಕಥಾ ಪ್ರಸಂಗಗಳನ್ನು ಪ್ರದರ್ಶಿಸಿದರು.
ನಾಡಿನ ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದವು.ಮೆರವಣಿಗೆಯಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ, ಆರ್ಎಸ್ಎಸ್, ಪ್ರಮುಖರು, ನಗರ ಆರ್ಯವೈಶ್ಯ ಸಮಾಜದವರು, ವಿಪ್ರ ಸಮಾಜದವರು, ರಾಜಸ್ಥಾನ ಸಮುದಾಯದವರು, ಕಮ್ಮ ಸಮುದಾಯದವರು ಸೇರಿದಂತೆ ವಿವಿಧ ಸಮುದಾಯದವರು ಮಹಿಳೆಯರು ಮಕ್ಕಳು ಭಾಗವಹಿಸಿದರು.
ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ಜನರು ಶ್ರೀರಾಮನ ವಿಜಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದರು.