ಸಾರಾಂಶ
ಸೋಮವಾರ ರಾತ್ರಿ 11.30ರ ಸಮಯದಲ್ಲಿ ಮನೆಯಲ್ಲಿ ಎಲ್ಲರು ಮಲಗಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಮನೆ ಬಳಿ ಆಗಮಿಸಿ ಕಿಟಿಕಿ ಗ್ಲಾಸ್ಗೆ ಕಲ್ಲು ತೂರಿದ್ದಾರೆ. ಇದರಿಂದ ಕಿಟಕಿಯ ಗ್ಲಾಸ್ಗಳು ಪುಡಿಪುಡಿಯಾಗಿದೆ. ಮನೆಒಳಗಡೆ ಮಲಗಿದ್ದ ಪುಟಾಣಿ ಮಕ್ಕಳು ಸ್ವಲ್ಪದಲ್ಲಿಯೇ ಅಪಾಯದಿಂದ ಪಾರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಹಳೇ ವೈಷಮ್ಯದಿಂದ ದುಷ್ಕರ್ಮಿಗಳು ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರ ಮನೆ ಕಿಟಕಿ ಗ್ಲಾಸ್ಗೆ ಕಲ್ಲುತೂರಿ ಪರಾರಿಯಾಗಿರುವ ಘಟನೆ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.ಗ್ರಾಪಂ ಸದಸ್ಯ ಈರಾಚಾರಿ ಅವರ ಮನೆ ಕಿಟಕಿ ಗ್ಲಾಸ್ಗೆ ಕಲ್ಲು ತೂರಿ ಪರಾರಿಯಾಗಿದ್ದು, ಮನೆ ಒಳಗಡೆ ಮಲಗಿದ್ದ ಮಕ್ಕಳು ಸ್ವಲ್ಪದಲ್ಲಿಯೇ ಅಪಾಯದಿಂದ ಪಾರಾಗಿದ್ದಾರೆ.ಸೋಮವಾರ ರಾತ್ರಿ 11.30ರ ಸಮಯದಲ್ಲಿ ಮನೆಯಲ್ಲಿ ಎಲ್ಲರು ಮಲಗಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಮನೆ ಬಳಿ ಆಗಮಿಸಿ ಕಿಟಿಕಿ ಗ್ಲಾಸ್ಗೆ ಕಲ್ಲು ತೂರಿದ್ದಾರೆ. ಇದರಿಂದ ಕಿಟಕಿಯ ಗ್ಲಾಸ್ಗಳು ಪುಡಿಪುಡಿಯಾಗಿದೆ. ಮನೆಒಳಗಡೆ ಮಲಗಿದ್ದ ಪುಟಾಣಿ ಮಕ್ಕಳು ಸ್ವಲ್ಪದಲ್ಲಿಯೇ ಅಪಾಯದಿಂದ ಪಾರಾಗಿದ್ದಾರೆ.
ಕಿಟಕಿ ಗ್ಲಾಸ್ಗೆ ಕಲ್ಲು ತೂರಿದ ತಕ್ಷಣವೇ ಮನೆಯವರು ಹೊರಗಡೆ ಓಡಿಬಂದಿದ್ದಾರೆ. ಆದರೆ, ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಳೆ ವೈಷಮ್ಯದಿಂದಲೇ ದುಷ್ಕರ್ಮಿಗಳು ಈ ಕೃತ್ಯ ವೆಸಗಿದ್ದಾರೆ ಎಂದು ಮನೆ ಮಾಲೀಕ ಗ್ರಾಪಂ ಸದಸ್ಯ ಈರಾಚಾರಿ ಆರೋಪಿಸಿದ್ದಾರೆ.ವಿಷಯ ತಿಳಿದ ಪೊಲೀಸರು ಸೋಮವಾರ ರಾತ್ರಿಯೇ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧವಾಗಿ ಗ್ರಾಪಂ ಸದಸ್ಯ ಈರಾಚಾರಿ ಅವರು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.ಡೇರಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಮಂಜುನಾಥ, ನಾರಾಜು ಆಯ್ಕೆ
ಕೆ.ಆರ್ .ಪೇಟೆ: ತಾಲೂಕಿನ ಸಂತೇಬಾಚಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಆರ್.ಮಂಜುನಾಥ ಹಾಗೂ ಉಪಾಧ್ಯಕ್ಷರಾಗಿ ನಾಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಂಘದ ಈ ಹಿಂದಿನ ಅಧ್ಯಕ್ಷ ಕೆಂಪರಾಜು ಹಾಗೂ ಉಪಾಧ್ಯಕ್ಷೆ ಭಾಗ್ಯಮ್ಮರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಮಂಜುನಾಥ ಮತ್ತು ನಾಗರಾಜು ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಜಗದೀಶ್ ಘೋಷಿಸಿದರು.ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನಿರ್ದೇಶಕರಾದ ಎಸ್.ಎಚ್.ಸುರೇಶ್, ದೇವೇಗೌಡ, ಹರೀಶ್, ತೇಜಸ್, ನಾಗೇಶ್, ನಾಗರತ್ನಮ್ಮ, ಕಾರ್ಯದರ್ಶಿ ಯಶವಂತ ಕುಮಾರ ಸೇರಿದಂತೆ ಹಲವರು ಅಭಿನಂದಿಸಿದರು.