ಸಾರಾಂಶ
ನರಸಿಂಹರಾಜಪುರ, ವಿವಿಧತೆಯಲ್ಲಿ ಏಕತೆ ಸಾಧಿಸಿದ ದೇಶ ಭಾರತ. ಪ್ರತಿಯೊಬ್ಬ ಮಕ್ಕಳೂ ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ತಿಳಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಾಯಕ್ರಮ
ಕನ್ನಡಪ್ರಭವಾರ್ತೆ, ನರಸಿಂಹರಾಜಪುರವಿವಿಧತೆಯಲ್ಲಿ ಏಕತೆ ಸಾಧಿಸಿದ ದೇಶ ಭಾರತ. ಪ್ರತಿಯೊಬ್ಬ ಮಕ್ಕಳೂ ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ತಿಳಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 5 ಹಾಗೂ 6 ನೇ ತರಗತಿ ಮಕ್ಕಳಿಗಾಗಿ ನಡೆಸಿದ ಪೀಸ್ ಪೋಸ್ಟರ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಸರ್ವತೋಮುಖ ಬೆಳವಣಿಗೆ ಹೊಂದಲು ಮಕ್ಕಳು ಆರೋಗ್ಯ ವಂತರಾಗಿರಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು. ಭಾಷೆ ಬೆಳವಣಿಗೆ ಆಗಬೇಕು. ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿರದೆ ಎಲ್ಲರೊಂದಿಗೆ ಹೊಂದಿಕೊಂಡು ಸಾಮರಸ್ಯ ದಿಂದ ಬಾಳ ಬೇಕು. ಮಕ್ಕಳ ಭಾವನೆ ಕೆರಳಿಸುವ ಕೆಲಸ ದ ಬದಲಿಗೆ ಭಾವನೆ ಅರಳಿಸುವ ಕೆಲಸ ಆಗಬೇಕಾಗಿದೆ. ಮಕ್ಕಳ ಮನಸ್ಸಿನಲ್ಲಿ ಸಾಮರಸ್ಯದ ಕಲ್ಪನೆ ಚಿತ್ರವಾಗಿ ಹೊರಬರಬೇಕು ಎಂದು ಕರೆ ನೀಡಿದರು.ಲಯನ್ಸ್ ಕ್ಲಬ್ ರೀಸನ್ 15 ರ ರೀಜನಲ್ ಛೇರ್ಮನ್ ಸಿಜು ಮಾತನಾಡಿ, ಲಯನ್ಸ್ ಕ್ಲಬ್ ಇಂದು 200 ದೇಶಗಳಲ್ಲಿ ಸಕ್ರಿಯವಾಗಿದೆ. ಮಕ್ಕಳ ಪ್ರತಿಭೆ ಹೊರ ತರುವ ಉದ್ದೇಶದಿಂದ ಪ್ರತಿವರ್ಷ ಒಂದು ಥೀಮ್ ನೀಡಲಾಗುತ್ತದೆ. ಈ ವರ್ಷ ನಾವೆಲ್ಲರೂ ಒಗ್ಗೂಡಿ ಬಾಳೋಣ ಎಂಬ ವಿಷಯ ನೀಡಲಾಗಿದೆ.
ಈ ವಿಷಯ ಇಟ್ಟುಕೊಂಡು ಮಕ್ಕಳು ಚಿತ್ರ ಬರೆಯಬೇಕಾಗಿದೆ. ಆಯಾ ದೇಶದ ಲಯನ್ಸ್ ಕ್ಲಬ್ ಸ್ಥಳೀಯ ಶಾಲೆಗಳ 5,6,7 ನೇ ತರಗತಿ ಮಕ್ಕಳಿಗೆ ಚಿತ್ರ ಕಲೆಸ್ಪರ್ಧೆ ನಡೆಸುತ್ತದೆ. ನಮ್ಮ ದೇಶ, ರಾಜ್ಯ, ನಾವೆಲ್ಲರೂ ಒಂದು ಎಂಬುದು ಪೀಸ್ ಪೋಸ್ಟರ್ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.ಸಭೆಯಲ್ಲಿ ಲಯನ್ಸ್ ಕ್ಲಬ್ ನ ರೀಜನ್- 15 ರ ಪ್ರಾಂತೀಯ ರಾಯಬಾರಿ ಎಂಪಿ ಸನ್ನಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ.ಟಿ.ಎಲ್ದೋ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಭಾರಿ ಪ್ರಾಂಶುಪಾಲ ವಿಶ್ವನಾಥ್, ಡ್ರಾಯಿಂಗ್ ಟೀಚರ್ ಜ್ಯೋತಿ ಇದ್ದರು. ಸಹ ಶಿಕ್ಷಕಿ ಸುಹಾಸಿನಿ ಸ್ವಾಗತಿಸಿದರು. ಸಹ ಶಿಕ್ಷಕಿ ಭಾನು ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))