ಗುರುಸ್ಪಂದನಾ ಪೆನಲ್‌ನಿಂದ ನಾಮಪತ್ರ ಸಲ್ಲಿಕೆ

| Published : Dec 29 2024, 01:16 AM IST

ಗುರುಸ್ಪಂದನಾ ಪೆನಲ್‌ನಿಂದ ನಾಮಪತ್ರ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಅವಳಿ ಜಿಲ್ಲೆಯ ಪ್ರತಿಷ್ಠಿತ ಜಿಒಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆಗೆ ಗುರುಸ್ಪಂದನಾ ಪೆನಲ್‌ನಿಂದ ಅದ್ಧೂರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲಾಯಿತು. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಭವ್ಯ ಮೆರವಣಿಗೆಯಲ್ಲಿ ಪಾದಯಾತ್ರೆ ಮೂಲಕ ಬ್ಯಾಂಕ್‌ ಕಚೇರಿಗೆ ಸಾಗಿ ನಾಮಪತ್ರವನ್ನು ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ಅವಳಿ ಜಿಲ್ಲೆಯ ಪ್ರತಿಷ್ಠಿತ ಜಿಒಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆಗೆ ಗುರುಸ್ಪಂದನಾ ಪೆನಲ್‌ನಿಂದ ಅದ್ಧೂರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲಾಯಿತು. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಭವ್ಯ ಮೆರವಣಿಗೆಯಲ್ಲಿ ಪಾದಯಾತ್ರೆ ಮೂಲಕ ಬ್ಯಾಂಕ್‌ ಕಚೇರಿಗೆ ಸಾಗಿ ನಾಮಪತ್ರವನ್ನು ಸಲ್ಲಿಸಿದರು.

ಬ್ಯಾಂಕ್‌ ಅಧ್ಯಕ್ಷ ಅರ್ಜುನ ಲಮಾಣಿ ಹಾಗೂ ನಿರ್ದೇಶಕ ಹಣಮಂತ ಕೊಣದಿ ಮಾತನಾಡಿ, 116 ವರ್ಷಗಳ ಇತಿಹಾಸ ಹೊಂದಿರುವ ಬ್ಯಾಂಕು ಪ್ರಗತಿ ಪಥದಲ್ಲಿದೆ. ಈ ಸಲ ₹ 1.75 ಕೋಟಿ ನಿವ್ಹಳ ಲಾಭ ಗಳಿಸಿದ್ದು, ಅವಳಿ ಜಿಲ್ಲೆಯಲ್ಲಿ 12 ಶಾಖೆಗಳನ್ನು ಹೊಂದಿದೆ. ನೌಕರರ ಅನುಕೂಲಕ್ಕಾಗಿ ಬಡ್ಡಿ ದರವನ್ನು ಇಳಿಸಲಾಗಿದ್ದು, ವೈಯಕ್ತಿಕ ಸಾಲ ₹ 12 ಲಕ್ಷದ ವರೆಗೆ ನೀಡಲಾಗುತಿದೆ. ಬ್ಯಾಂಕಿನ ಕಾರ್ಯವ್ಯಾಪ್ತಿ ಕಲಬುರ್ಗಿ, ಬೆಳಗಾವಿ, ಕೊಪ್ಪಳ, ರಾಯಚೂರ, ಗದಗ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ನಮ್ಮ ಗುರು ಸ್ಪಂದನಾ ಪೆನಲ್‌ನ 9 ಅಭ್ಯರ್ಥಿಗಳಿಗೂ ಮತ ನೀಡಿ ಬೆಂಬಲಿಸಿ ಆರ್ಶಿವದಿಸಬೇಕೆಂದು ಮನವಿ ಮಾಡಿದರು.

ಬಾಗಲಕೋಟ ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ಬಸವರಾಜ ಬಾಗೇನ್ನವರ, ಅಲ್ಲಾಭಕ್ಷ ವಾಲಿಕಾರ ಮಾತನಾಡಿ, ಸರ್ಕಾರಿ ನೌಕರರ ಅನುಕೂಲಕ್ಕಾಗಿ ಹಲವಾರು ತಂತ್ರಜ್ಞಾನ ಅಳವಡಿಕೆ ಹಾಗೂ ಹೊಸ ಯೋಜನೆಗಳನ್ನು ತರಲಾಗಿದೆ. ಹೀಗಾಗಿ ನಮ್ಮ ಪೆನಲ್‌ನ 9 ಜನರಿಗೆ ಮತ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಜೆಒಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅಶೋಕ ಚನಬಸಗೊಳ, ಚಂದ್ರಶೇಖರ ಜಿತ್ತಿ, ಮಲ್ಲಿಕಾರ್ಜುನ ಟಕ್ಕಳಕಿ, ಪುಷ್ಪಾ ಗಚ್ಚಿನಮಠ, ಗೀತಾ ಹತ್ತಿ(ಕಳಸಗೊಂಡ), ಪದಾಧಿಕಾರಿಗಳಾದ ಬಿ.ಎಸ್.ಮಠ, ಅಶೋಕ ದಡಕೆ, ಹಣಮಂತ ಕಾಲೆಬಾಗ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.