ಸಾರಾಂಶ
ವಿಶ್ವ ಸಂಸ್ಕೃತಿಗೆ ಕನ್ನಡ ಸಾಹಿತ್ಯ ಕೊಟ್ಟ ಅಮೂಲ್ಯ ಕೊಡುಗೆ ವಚನ ಸಾಹಿತ್ಯ. ಈ ಸಾಹಿತ್ಯದ ಮೌಲ್ಯಗಳು ಕನ್ನಡಿಗರವು ಎಂಬುದು ಹೆಮ್ಮೆಯ ಸಂಗತಿ ಎಂದು ನಾಡೋಜ ಗೊ.ರು. ಚೆನ್ನಬಸಪ್ಪ ಹೇಳಿದರು
ಧಾರವಾಡ: ಬದುಕಿನಲ್ಲಿ ಎಲ್ಲ ರೀತಿಯಲ್ಲೂ ನೆಮ್ಮದಿಯಿಂದ ಬಾಳಬೇಕಾದರೆ ಶಿವಶರಣರ ನಡೆ ನುಡಿಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ನಾಡೋಜ ಗೊ.ರು. ಚೆನ್ನಬಸಪ್ಪ ಹೇಳಿದರು.
ಇಲ್ಲಿಯ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಜಿಲ್ಲಾ ಮತ್ತು ತಾಲೂಕು ಘಟಕಗಳ ನೂತನ ಪದಾಧಿಕಾರಿಗಳ ಸೇವಾ ದೀಕ್ಷಾ ಸ್ವೀಕಾರದಲ್ಲಿ ಮಾತನಾಡಿದ ಅವರು, ವಿಶ್ವ ಸಂಸ್ಕೃತಿಗೆ ಕನ್ನಡ ಸಾಹಿತ್ಯ ಕೊಟ್ಟ ಅಮೂಲ್ಯ ಕೊಡುಗೆ ವಚನ ಸಾಹಿತ್ಯ. ಈ ಸಾಹಿತ್ಯದ ಮೌಲ್ಯಗಳು ಕನ್ನಡಿಗರವು ಎಂಬುದು ಹೆಮ್ಮೆಯ ಸಂಗತಿ ಎಂದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಶೋಧಕ ಡಾ. ವೀರಣ್ಣ ರಾಜೂರ, ಶರಣ ಸಾಹಿತ್ಯದ ಆದರ್ಶಗಳನ್ನು, ಆಚರಣೆಗಳನ್ನು ಅಳವಡಿಸಿಕೊಳ್ಳುವ ಮುಖೇನ ಸರ್ವರಲ್ಲೂ ಸಾಮರಸ್ಯ ಹುಟ್ಟುಹಾಕುವ ಕಾರ್ಯಕ್ಕೆ ಶರಣ ಸಾಹಿತ್ಯ ಪರಿಷತ್ತು ಶ್ರಮಿಸಬೇಕು ಎಂದು ಹೇಳಿದರು.ಗೊರುಚ, ಡಾ. ವೀರಣ್ಣ ರಾಜೂರ ಹಾಗೂ ಡಾ. ರಾಮು ಮೂಲಗಿ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಂಗಮನಾಥ ಲೋಕಾಪುರ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ, ಖಜಾಂಚಿ ಶ್ರೀಶೈಲ ರಾಚಣ್ಣವರ ಇದ್ದರು. ಪೂರ್ಣಿಮಾ ಮುತ್ನಾಳ ಪ್ರಾರ್ಥಿಸಿದರು. ಪ್ರಮೀಳಾ ಜಕ್ಕಣ್ಣವರ ಮತ್ತು ಡಾ. ಲಿಂಗರಾಜ ರಾಮಾಪುರ ಕಾರ್ಯಕ್ರಮ ನಿರೂಪಿಸಿದರು.
ಪ್ರೊ. ಸಿ.ಎಸ್. ಹೊಸಮಠ, ಡಾ. ಬಿ.ವಿ. ಹೊಸಕೇರಿ, ಡಾ. ಡಿ.ಎಂ. ಹಿರೇಮಠ, ಡಾ. ಶಂಬು ಹೆಗಡಾಳ, ಈಶ್ವರಚಂದ್ರ ಹೊಸಮನಿ, ಪಿ.ಎಚ್. ನೀರಲಕೇರಿ, ಡಾ. ಮಹೇಶ ಹೊರಕೇರಿ, ಡಾ. ಮೃತ್ಯುಂಜಯ ಶೆಟ್ಟರ, ಡಾ. ರಾಜಶೇಖರ ಬಸೆಟ್ಟಿ, ಡಾ. ಎ.ಎಲ್. ದೇಸಾಯಿ, ನಬಿಸಾಬ ಯಲಬುರ್ಗಿ, ಎ.ಬಿ. ಕೊಪ್ಪದ, ರವಿ ದಾಸರ, ಗುರುಸಿದ್ಧಪ್ಪ ಬಡಿಗೇರ, ಸಿದ್ರಾಮ ಸುಳ್ಳದ, ಗುರುಲಿಂಗ ಉಣಕಲ್, ಅಶೋಕ ಗೋರ್ಪಡೆ ಇದ್ದರು.