ಸರ್ಕಾರದ ಸಾಕಷ್ಟು ಯೋಜನೆಗಳನ್ನು ಭಾರತೀಯ ಅಂಚೆ ಇಲಾಖೆ ಮನೆ ಬಾಗಿಲಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿದೆ‌. ಸಾರ್ವಜನಿಕರು ಸಹಕಾರ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆಗಳನ್ನು ನೀಡಲು ಸಾಧ್ಯವಾಗುತ್ತದೆ ‌ಎಂದು ವಿಜಯಪುರ ಜಿಲ್ಲೆಯ ಅಂಚೆ ಅಧೀಕ್ಷಕ‌ ಮಹಾಂತೇಶ ತೋಗರಿ‌ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಸರ್ಕಾರದ ಸಾಕಷ್ಟು ಯೋಜನೆಗಳನ್ನು ಭಾರತೀಯ ಅಂಚೆ ಇಲಾಖೆ ಮನೆ ಬಾಗಿಲಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿದೆ‌. ಸಾರ್ವಜನಿಕರು ಸಹಕಾರ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆಗಳನ್ನು ನೀಡಲು ಸಾಧ್ಯವಾಗುತ್ತದೆ ‌ಎಂದು ವಿಜಯಪುರ ಜಿಲ್ಲೆಯ ಅಂಚೆ ಅಧೀಕ್ಷಕ‌ ಮಹಾಂತೇಶ ತೋಗರಿ‌ ಹೇಳಿದರು.

ತಾಲೂಕಿನ ಬಮ್ಮನಜೋಗಿ ‌ಗ್ರಾಮದ ಹನುಮಾನ ಮಂದಿರದಲ್ಲಿ ಬುಧವಾರ ನಡೆದ ಅಂಚೆ ಜನಸಂರ್ಪಕ ಅಭಿಯಾನದಲ್ಲಿ ಅವರು ಮಾತನಾಡಿದರು. ಅಂಚೆ ಇಲಾಖೆ ಹಲವು ವರ್ಷಗಳಿಂದ ಕೇವಲ ಸಂವಹನ ಹಾಗೂ ಪತ್ರ ವ್ಯವಹಾರಗಳ ನಿರ್ವಹಣೆಗೆ ಸೀಮಿತವಾಗಿತ್ತು. ಆದರೆ ಇಂದು ಬ್ಯಾಂಕ್‌ಗಳಂತೆ ಕೆಲಸ ಮಾಡುತ್ತಿದ್ದು ಇಲಾಖೆಯಡಿ ದೊರಯುವ ಪಿಎಲ್ಐ ಹಾಗೂ‌ ಆರ್‌ಪಿಎಲ್ಐ, ಅಪಘಾತ ವಿಮೆ, ಆರ್‌.ಡಿ, ಸುಕನ್ಯ ಯೋಜನೆ, ಪಿಪಿಎಫ್, ಉಳಿತಾಯ‌ ಖಾತೆ‌ ಸಹಿತ‌ ಇರುವ‌ ಸೇವೆಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು‌ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಅಂಚೆ ಉಪ‌ ಅಧೀಕ್ಷಕ ಬಿ.ಎಸ.ದಾಸರ, ಬಡವರ ಹಾಗೂ‌ ಕೂಲಿ ಕಾರ್ಮಿಕರ ಅವಶ್ಯಕತೆಗಳು ಅರಿತುಕೊಂಡ ಅಂಚೆ ಇಲಾಖೆಯು ಜನರ ವಯಸ್ಸಿನ ಅನುಗುಣವಾಗಿ ಹಲವಾರು ಸೇವೆಗಳಾದ ಬ್ಯಾಂಕ್ ಸೇವೆ, ಆನ್ ಲೈನ್ ಮೊಬೈಲ್ ಬ್ಯಾಂಕಿಂಗ್, ಸಣ್ಣ ಉಳಿತಾಯ ಮತ್ತು ರೈತರಿಗೆ ಪ್ರಧಾನಮಂತ್ರಿ ಜೀವ ವಿಮಾ ಯೋಜನೆಗಳ ಮೂಲಕ ತನ್ನನ್ನು ತಾನು ಬದಲಾವಣೆ ಮಾಡಿಕೊಳ್ಳುವ ಮೂಲಕ ಮನೆ ಬಾಗಿಲಿಗೆ ಅಂಚೆ ಸೇವೆಗಳು ನಮ್ಮ ಇಲಾಖೆ ತರುತ್ತಿದೆ ಎಂದು ಹೇಳಿದರು.

ಗ್ರಾಮದ ಮುಖಂಡರಾದ ರಾಜಶೇಖರ ಕೊಣಸಿರಸಗಿ ಮಾತನಾಡಿ, ಅಂಚೆ ಇಲಾಖೆಯು ಸಾರ್ವಜನಿಕ ಆರ್ಥಿಕತೆ ವ್ಯವಹಾರಗಳ ಜನಸ್ನೇಹಿ‌ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತದೆ. ಸಿಬ್ಬಂದಿ‌ ಸಹ ಅಷ್ಟೇ ವಿನಯತೆಯಿಂದ ಸಹಕಾರ‌‌ ಸೇವೆ ನೀಡುತ್ತಾರೆ ಎಂದರು.

ಐಪಿಪಿಬಿ ಜಿಲ್ಲಾ ವ್ಯವಸ್ಥಾಪಕರಾದ ವಿಶ್ವನಾಥ, ಗ್ರಾಮ ಪಂಚಾಯತ ಸದಸ್ಯ ಬಸವರಾಜ ಕಡಕೋಳ, ರಾಮನಗೌಡ ಪಾಟೀಲ, ಬಸವರಾಜ ನಂದಗೇರಿ, ಅಂಚೆ ಮೇಲ್ವಿಚಾರಕರಾದ ಬಸವರಾಜ ‌ಇವಣಗಿ, ಅಮರೇಶ ಕಲಶೇಟ್ಟಿ, ಮನೋಹರ ಪೋಳ, ಹಾಗೂ ದೇವರಹಿಪ್ಪರಗಿ ಮತ್ತು‌ ಶಿವಣಗಿ ಅಂಚೆ ಸಿಬ್ಬಂದಿಯಾದ ನಬಿರಸೂಲ ಗಡಗಲಾವ್, ಪ್ರಬು ಬಿಸನಾಳ, ರಾಮನಗೌಡ‌ ಬಿರಾದಾರ, ಪ್ರವೀಣ ಕುಲಕರ್ಣಿ, ರಂಜೀತ ತಳಕೇರಿ, ಎಲ್.ಎಚ್.ನಧಾಫ, ಪ್ರವೀಣ ಮಾಳೆಗಾರ, ಅಂಕುಶ ಯಾಧವ, ಭಾಗ್ಯ‌ ಪುರವಂತಮಠ, ಸುನೀತಾ ನಾಟಿಕಾರ, ಲಕ್ಷ್ಮೀ ಪೂಜಾರಿ, ಸುನಂದಾ ಬಿರಾದಾರ, ಸಂಗ್ರಾಮ‌ಸಿಂಗ್ ಹಜೇರಿ ಹಾಗೂ ಗ್ರಾಮಸ್ಥರು ‌ಇದ್ದರು.