ವಿಶ್ವಕರ್ಮ ಸಾಲಸೌಲಭ್ಯದ ಪ್ರಯೋಜನ ಪಡೆಯಿರಿ: ಶಾಸಕ ಸಿದ್ದು ಸವದಿ

| Published : Mar 16 2025, 01:51 AM IST

ಸಾರಾಂಶ

ಕುಶಲಕರ್ಮಿಗಳು ಮತ್ತು ವಿವಿಧ ರೀತಿಯ ಸಾಂಪ್ರದಾಯಿಕ ಪದ್ಧತಿ ಕಲಿತವರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಮುನ್ನಡೆಯಲು ಅವಕಾಶ ನೀಡಲಾಗಿದೆ. 10 ಕ್ಕೂ ಹೆಚ್ಚು ಬಗೆಯ ಕುಶಲಕರ್ಮಿಗಳಿಗೆ ವಿಶ್ವಕರ್ಮ ಯೋಜನೆಯಡಿ ಸಾಲಸೌಲಭ್ಯ ದೊರೆಯಲಿದೆ. ಸರ್ಕಾರಗಳು ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡುತ್ತಿದ್ದು, ಮಹಿಳೆಯರು ಯೋಜನೆಯ ಸದುಪಯೋಗಪಡೆಯಬೇಕೆಂದು ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಹೊಲಿಗೆ ಕಸುಬು ಎಂದಿಗೂ ಅವಶ್ಯಕವಾದುದು, ಸ್ವ ಉದ್ಯೋಗದೊಂದಿಗೆ ಇತರರಿಗೂ ಉದ್ಯೋಗ ನೀಡಬಹುದಾದ ಉದ್ಯಮವನ್ನಾಗಿ ಬೆಳೆಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಕುಶಲಕರ್ಮಿಗಳು ಮತ್ತು ವಿವಿಧ ರೀತಿಯ ಸಾಂಪ್ರದಾಯಿಕ ಪದ್ಧತಿ ಕಲಿತವರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಮುನ್ನಡೆಯಲು ಅವಕಾಶ ನೀಡಲಾಗಿದೆ. 10 ಕ್ಕೂ ಹೆಚ್ಚು ಬಗೆಯ ಕುಶಲಕರ್ಮಿಗಳಿಗೆ ವಿಶ್ವಕರ್ಮ ಯೋಜನೆಯಡಿ ಸಾಲಸೌಲಭ್ಯ ದೊರೆಯಲಿದೆ. ಸರ್ಕಾರಗಳು ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡುತ್ತಿದ್ದು, ಮಹಿಳೆಯರು ಯೋಜನೆಯ ಸದುಪಯೋಗಪಡೆಯಬೇಕೆಂದು ಎಂದು ಶಾಸಕ ಸಿದ್ದು ಸವದಿ ಹೇಳಿದರು.

ನಗರಸಭೆ ಸಭಾಭವನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ನಗರಸಭೆ ಸಾಮಾನ್ಯ ನಿಧಿ ಹಾಗೂ ರಾಜ್ಯ ಹಣಕಾಸು ಯೋಜನೆಯಡಿ ೯೭ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ಶನಿವಾರ ವಿತರಿಸಿ ಅವರು ಮಾತನಾಡಿ,

ಹೊಲಿಗೆ ಯಂತ್ರ ಬದಲಿಗೆ ಮುಂದಿನ ದಿನಗಳಲ್ಲಿ ಈ ಭಾಗದ ಮುಖ್ಯ ಕಸಬಾದ ನೇಕಾರರಿಗೆ ಸಂಬಂಧಿಸಿದ ಸಾಮಗ್ರಿಗಳ ಅವಶ್ಯತೆಯಿದೆ. ಮಹಿಳೆಯರು ತಮ್ಮ ಬೇಡಿಕೆ ಸಲ್ಲಿಸಿದಲ್ಲಿ ನಗರಸಭೆಯಿಂದ ಒದಗಿಸುವುದಾಗಿ ಭರವಸೆ ನೀಡಿದರು.

ಕಳೆದೆರಡು ವರ್ಷಗಳಿಂದ ಒಂದೂ ಮನೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ತೇರದಾಳ ಕ್ಷೇತ್ರದ ಜನತೆಗೆ ಮನೆಗಳ ಅವಶ್ಯವಿದೆ. ಇದರ ಬಗ್ಗೆ ಬಜೆಟ್ ಕಲಾಪದಲ್ಲಿ ಸರ್ಕಾರಕ್ಕೆ ಒತ್ತಡ ಹೇರುತ್ತೇನೆ ಎಂದು ಹೇಳಿದರು.

ನಗರಾಧ್ಯಕ್ಷೆ ವಿದ್ಯಾ ದಭಾಡಿ ಮಾತನಾಡಿ, ಪೌರ ಕಾರ್ಮಿಕರ ವೇತನ ನಗರಸಭೆಯಿಂದಲೇ ನೀಡಲಾಗುತ್ತಿದೆ. ಇದರಿಂದ ಆಡಳಿತಾತ್ಮಕ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಹೆಚ್ಚಿನ ಅನುದಾನ ಇಲ್ಲವೆ ಪೌರ ಕಾರ್ಮಿಕರಿಗೆ ನೇರ ವೇತನ ಒದಗಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಸುಮಾರು ೫೦ಕ್ಕೂ ಅಧಿಕ ಪೌರ ಕಾರ್ಮಿಕರಿಗೆ ಕಸ ನಿರ್ವಹಣೆಗೆ ಬೇಕಾಗುವ ಸಾಮಗ್ರಿ ವಿತರಿಸಲಾಯಿತು.

ನಗರಸಭಾಧ್ಯಕ್ಷೆ ವಿದ್ಯಾ ದಭಾಡಿ, ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ, ಸ್ಥಾಯಿ ಸಮಿತಿ ಚೇರಮನ್ ಅರುಣ ಬುದ್ನಿ, ಪೌರಾಯುಕ್ತ ಜಗದೀಶ ಈಟಿ ಸೇರಿದಂತೆ ನಗರಸಭಾ ಸದಸ್ಯರು ಹಾಗು ಫಲಾನುಭವಿಗಳು ಉಪಸ್ಥಿತರಿದ್ದರು.