ಸಾರಾಂಶ
ಮಹರ್ ಸೈನಿಕರ ವೀರಾವೇಶದ ಹೋರಾಟ ಪ್ರತಿಫಲವಾಗಿ ಭೀಮಾ ಕೋರೆಗಾಂವ್ ವಿಜಯ ಸಾಧ್ಯವಾಯಿತು ಎಂದು ಪ್ರಜಾಪರಿವರ್ತನಾ ವೇದಿಕೆ ರಾಜ್ಯ ಸಂಚಾಲಕ ಎ.ಡಿ. ಈಶ್ವರಪ್ಪ ಹೊನ್ನಾಳಿಯಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮಹರ್ ಸೈನಿಕರ ವೀರಾವೇಶದ ಹೋರಾಟ ಪ್ರತಿಫಲವಾಗಿ ಭೀಮಾ ಕೋರೆಗಾಂವ್ ವಿಜಯ ಸಾಧ್ಯವಾಯಿತು ಎಂದು ಪ್ರಜಾಪರಿವರ್ತನಾ ವೇದಿಕೆ ರಾಜ್ಯ ಸಂಚಾಲಕ ಎ.ಡಿ. ಈಶ್ವರಪ್ಪ ಹೇಳಿದರು.ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬುಧವಾರ ರಾತ್ರಿ ಕೋರೆಗಾಂವ್ ವಿಜಯೋತ್ಸವ ಆಚರಿಸಿದ ಸಂದರ್ಭ ಸಿಹಿ ವಿತರಿಸಿ ಅವರು ಮಾತನಾಡಿದರು. 1818 ರಲ್ಲಿ ಮಹಾರಾಷ್ಟ್ರದ ಭೀಮಾ ತೀರದ ಕೋರೆಗಾಂವ್ನಲ್ಲಿ ಮಹರ್ ಸೈನಿಕರು ಮತ್ತು ಪೇಶ್ವೆಗಳ ನಡುವೆ ಯುದ್ಧ ನಡೆಯಿತು. ಈ ಸಮರ ಶೋಷಿತ ಸಮುದಾಯಕ್ಕೆ ದೊಡ್ಡ ವಿಜಯ ತಂದುಕೊಟ್ಟು ಹೊಸ ದಿಕ್ಕನ್ನು ತೋರಿತು. ಯುದ್ಧ ಗೆದ್ದ ನೆನಪಿಗಾಗಿ ಸೈನಿಕರು ಶಿಕ್ಷಣಕ್ಕೆ ಬೇಡಿಕೆ ಸಲ್ಲಿಸಿದ್ದರು. ಪರಿಣಾಮವಾಗಿ ಶಿಕ್ಷಣ ಪಡೆಯುವ ಅವಕಾಶವೂ ಈ ಸಮುದಾಯಕ್ಕೆ ಸಿಕ್ಕಿತು ಎಂದು ವಿವರಿಸಿದರು.
ಈ ಸಂದರ್ಭ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಕೆರೆ ಕೃಷ್ಣಪ್ಪ, ತಾಲೂಕು ಘಟಕ ಅಧ್ಯಕ್ಷ ಒ. ಹನುಮಂತಪ್ಪ, ಶಿಕ್ಷಕರಾದ ಎ.ಕೆ. ಚನ್ನೇಶ್, ನಿವೃತ್ತ ಶಿಕ್ಷಕ ಕೃಷ್ಣನಾಯ್ಕ, ಬೀದಿಬದಿ ವ್ಯಾಪಾರಿಗಳ ಸಂಘದ ಕಾಂಗ್ರೆಸ್ ಅಧ್ಯಕ್ಷ ನಜೀರ್, ನಾಗರಾಜ್, ರೇಣುಕಮ್ಮ, ನೂರಾರು ಜನರು ಭಾಗಿಯಾಗಿದ್ದರು.- - - -2ಎಚ್.ಎಲ್.ಐ2.ಜೆಪಿಜಿ:
ಹೊನ್ನಾಳಿಯಲ್ಲಿ ಕೋರೆಗಾಂವ್ ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ಎ.ಡಿ. ಈಶ್ವರಪ್ಪ ಮಾತನಾಡಿದರು.