ನೀರುಪಾಲಾಗುತ್ತಿದ್ದ ಬಾಲಕನನ್ನು ರಕ್ಷಿಸಿದ ಬಾಲಕ!

| Published : May 01 2024, 01:17 AM IST

ನೀರುಪಾಲಾಗುತ್ತಿದ್ದ ಬಾಲಕನನ್ನು ರಕ್ಷಿಸಿದ ಬಾಲಕ!
Share this Article
  • FB
  • TW
  • Linkdin
  • Email

ಸಾರಾಂಶ

7ನೇ ತರಗತಿ ವಿದ್ಯಾರ್ಥಿ ಶ್ರೀಕರ್ ಪುರಂದರ ಖಾರ್ವಿ ಅಪಾಯಕ್ಕೆ ಸಿಲುಕಿದ್ದ ಧ್ರುವ ಖಾರ್ವಿಯನ್ನು ತನ್ನ ಪ್ರಾಣದ ಹಂಗು ತೊರೆದು ರಕ್ಷಿಸಿ ದಡಕ್ಕೆ ತರುವಲ್ಲಿ ಯಶಸ್ವಿ ಆಗಿದ್ದಾನೆ.

ಭಟ್ಕಳ: ಸಮುದ್ರಕ್ಕೆ ಈಜಲು ಹೋಗಿ ಅಲೆಯ ರಭಸಕ್ಕೆ ನೀರು ಪಾಲಾಗುತ್ತಿದ್ದ 10ನೇ ತರಗತಿ ವಿದ್ಯಾರ್ಥಿಯೋರ್ವನನ್ನು 7ನೇ ತರಗತಿಯ ಬಾಲಕನೋರ್ವ ಜೀವದ ಹಂಗು ತೊರೆದು ಪ್ರಾಣ ರಕ್ಷಿಸಿದ ಘಟನೆ ತಾಲೂಕಿನ ಮಾವಿನಕುರ್ವೆಯ ತಲಗೋಡಿನಲ್ಲಿ ನಡೆದಿದೆ.

ಶಾಲೆಯ ರಜಾ ಸಮಯವನ್ನು ಅಜ್ಜಿ ಮನೆಯಲ್ಲಿ ಕಳೆಯಲು ಗಂಗೊಳ್ಳಿಯ 10ನೇ ತರಗತಿ ವಿದ್ಯಾರ್ಥಿ ಧ್ರುವ ಲಕ್ಷ್ಮಣ ಖಾರ್ವಿ ಎಂಬಾತ ಭಟ್ಕಳದ ಮಾವಿನಕುರ್ವೆ ಬಂದರಿನ ತಲಗೋಡಿಗೆ ಬಂದಿದ್ದ. ಈತ ಮಂಗಳವಾರ ಮಧ್ಯಾಹ್ನ ಯಾರೂ ಇಲ್ಲದ ಸಮಯದಲ್ಲಿ ಈಜಲು ಸಮುದ್ರಕ್ಕೆ ಇಳಿದಿದ್ದಾನೆ.

ಈ ಸಂದರ್ಭದಲ್ಲಿ ಅಲೆಗಳ ರಭಸಕ್ಕೆ ಈತ ಸಮುದ್ರದ ಆಳಕ್ಕೆ ಹೋಗಿದ್ದು, ಪ್ರಾಣರಕ್ಷಣೆಗಾಗಿ ಕೂಗಿಕೊಂಡಿದ್ದಾನೆ. ಇದೇ ಸಮಯಕ್ಕೆ ಗೆಳೆಯರೊಂದಿಗೆ ಆಟ ಆಡಲು ಬಂದ 7ನೇ ತರಗತಿ ವಿದ್ಯಾರ್ಥಿ ಶ್ರೀಕರ್ ಪುರಂದರ ಖಾರ್ವಿ ಅಪಾಯಕ್ಕೆ ಸಿಲುಕಿದ್ದ ಧ್ರುವ ಖಾರ್ವಿಯನ್ನು ತನ್ನ ಪ್ರಾಣದ ಹಂಗು ತೊರೆದು ರಕ್ಷಿಸಿ ದಡಕ್ಕೆ ತರುವಲ್ಲಿ ಯಶಸ್ವಿ ಆಗಿದ್ದಾನೆ. ಬಾಲಕ ಶ್ರೀಕರನ ಕಾರ್ಯಕ್ಕೆ ಧ್ರವ ಪಾಲಕರು ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.