ಭಾರತದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಳ ಕಳವಳಕಾರಿ

| Published : Jun 23 2025, 12:33 AM IST

ಸಾರಾಂಶ

ಭಾರತೀಯ ಸಂಸ್ಕೃತಿ ಮತ್ತು ಪರಂಪರೆ, ಮೌಲ್ಯಗಳು ಬಹಳ ಆಳವಾದುದು. ಉತ್ತಮ ವೈವಿಧ್ಯಮಯತೆಯಿಂದ ಕೂಡಿದೆ. ಸಾವಿರಾರು ವರ್ಷಗಳ ಪ್ರಾಚೀನತೆಯನ್ನು ಹೊಂದಿದೆ. ಆದರೆ ಇತ್ತಿಚ್ಚಿನ ದಿನಗಳಲ್ಲಿ ನಮ್ಮ ಸಂಸ್ಕ್ರತಿ, ಪರಂಪರೆ, ಮೌಲ್ಯಗಳ ಅಧಪತನವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮೀತಿ ಸದಸ್ಯ ಕಾರ್ಯದರ್ಶಿ ಹಾಗೂ ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಸ್.ಜೀತು ಹೇಳಿದರು.

ಶೃಂಗೇರಿ: ಭಾರತೀಯ ಸಂಸ್ಕೃತಿ ಮತ್ತು ಪರಂಪರೆ, ಮೌಲ್ಯಗಳು ಬಹಳ ಆಳವಾದುದು. ಉತ್ತಮ ವೈವಿಧ್ಯಮಯತೆಯಿಂದ ಕೂಡಿದೆ. ಸಾವಿರಾರು ವರ್ಷಗಳ ಪ್ರಾಚೀನತೆಯನ್ನು ಹೊಂದಿದೆ. ಆದರೆ ಇತ್ತಿಚ್ಚಿನ ದಿನಗಳಲ್ಲಿ ನಮ್ಮ ಸಂಸ್ಕ್ರತಿ, ಪರಂಪರೆ, ಮೌಲ್ಯಗಳ ಅಧಪತನವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮೀತಿ ಸದಸ್ಯ ಕಾರ್ಯದರ್ಶಿ ಹಾಗೂ ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಸ್.ಜೀತು ಹೇಳಿದರು.

ತಾಲೂಕಿನ ವಿದ್ಯಾರಣ್ಯಪುರ ಪಂಚಾಯಿತಿ ವಿದ್ಯಾರಣ್ಯಪುರ ದ ಶಾಂತಿನಿಕೇತನ ಹಿರಿಯ ನಾಗರಿಕ ಸೇವಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ವಿಶ್ವಹಿರಿಯರ ಶೋಷಣೆ ಜಾಗೃತ ದಿನ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಮಾಜದಲ್ಲಿ ರೂಢಿಗತ ಕೂಡುಕುಟುಂಬ ವ್ಯವಸ್ಥೆ, ಆಚಾರಣೆಗಳು, ತಂದೆ, ತಾಯಿ, ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು ಹೀಗೆ ಪರಸ್ಪರ ಅನ್ಯೋನತೆಯಿಂದ ಬದುಕುವ ಕಾಲಘಟ್ಟವಿತ್ತು. ಆದರೆ ಸಮಾಜ ಬದಲಾವಣೆಯೊಂದಿಗೆ ಕೌಟುಂಬಿಕ ಅಂತರ, ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳು, ಕುಟುಂಬ ವ್ಯವಸ್ಥೆಯಲ್ಲಿನ ಬದಲಾವಣೆ ಇತ್ಯಾದಿ ಕಾರಣಗಳಿಂದ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಸಮಾಜಕ್ಕೆ ಮಾರಕವಾಗಿದೆ ಎಂದರು.

ಸುಮಾರು ವರ್ಷಗಳ ಹಿಂದೆ ಟಿವಿ ಯೊಂದಿದ್ದರೆ ಸಾಕಿತ್ತು. ಯಾವುದೇ ಸಂಬಂಧಗಳ ಅಗತ್ಯವಿರುತ್ತಿರಲಿಲ್ಲ. ಈಗೆ ಮೊಬೈಲ್ ವೊಂದಿದ್ದರೆ ಸಾಕು. ಅಪ್ಪ, ಅಮ್ಮ, ಅಣ್ಣ ತಮ್ಮ, ಅಕ್ಕತಂಗಿ ಯಾರು ಬೇಡ. ನಮ್ಮ ಯುವಜನತೆ ಗುರು ಹಿರಿಯರ ಬಗ್ಗೆ ಗೌರವ ನೀಡದೆ ನಿರ್ಲಕ್ಷ್ಯ ಮಾಡುತ್ತಿದೆ. ವಿಶ್ವಕ್ಕೆ ಸಂಸ್ಕೃತಿ, ಪರಂಪರೆ ಕಲಿಸಿದ ದೇಶ ಭಾರತ. ಆದರೆ ಭಾರತದಲ್ಲಿಯೇ ವೃದ್ಧಶ್ರಮಗಳ ಸಂಖ್ಯೆ ಹೆಚ್ಚಳವಾಗಿರುವುದು ಕಳವರಿಕಾರಿಯಾಗಿದೆ ಎಂದರು.

ನಮ್ಮ ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ಯೋಚಿಸಬೇಕಿದೆ. ಹಿರಿಯರಲ್ಲಿ ಪ್ರೀತಿ ವಾತ್ಸಲ್ಯ,ಅವರ ಯೋಗಕ್ಷೇಮ, ಉಪಚಾರ, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯುವಜನತೆಗೆ ಮಾರ್ಗದರ್ಶನ, ತಿಳುವಳಿಕೆ ಅಗತ್ಯವಾಗಿದೆ ಎಂದರು.

ಹಿರಿಯ ವಕೀಲ ವಿ.ಆರ್.ನಟಶೇಖರ್, ಹಿರಿಯ ನಾಗರಿಕರ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿ, ಹಿರಿಯ ನಾಗರಿಕರಿಗೆ ತಮ್ಮದೇ ಆದ ಹಕ್ಕುಗಳಿವೆ. ಅವರಿಗೆ ಹಕ್ಕುಗಳ ಅರಿವು ಮೂಡಿಸಬೇಕಿದೆ ಎಂದರು.

ಶಾಂತಿನಿಕೇತನ ಹಿರಿಯ ನಾಗರಿಕ ಸೇವಾ ಕೇಂದ್ರದ ವ್ಯವಸ್ಥಾಪಕ ಕೃಷ್ಣಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.