ಯಕ್ಷಗಾನ ಕಲೆಯನ್ನು ಅರಿತು ಆಸ್ವಾದಿಸುವವರು ಸಂಖ್ಯೆ ವಿರಳ: ಡಾ.ಧನಂಜಯ ಕುಂಬ್ಳೆ

| Published : Apr 16 2025, 12:34 AM IST

ಯಕ್ಷಗಾನ ಕಲೆಯನ್ನು ಅರಿತು ಆಸ್ವಾದಿಸುವವರು ಸಂಖ್ಯೆ ವಿರಳ: ಡಾ.ಧನಂಜಯ ಕುಂಬ್ಳೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ ಹಾಗೂ ಮಂಗಳೂರು ವಿವಿ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಐದು ದಿನಗಳ ‘ಯಕ್ಷಶಿಕ್ಷಣ ಶಿಬಿರ- 2025’ ಸಮಾರೋಪ ಸಮಾರಂಭ ಮಂಗಳವಾರ ನೆರವೇರಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಯಕ್ಷಗಾನ ಕಲೆಯನ್ನು ಅರಿತುಕೊಂಡು ನೈಜವಾಗಿ ಆಸ್ವಾದಿಸುವವರ ಸಂಖ್ಯೆ ಕಡಿಮೆಯಾಗಿದೆ. ಯಕ್ಷಗಾನದ ಹೆಜ್ಜೆಗಾರಿಕೆಯ ಸೌಂದರ್ಯ, ಮುದ್ರೆಗಳು,‌ ಪ್ರಸಂಗ ಸಾಹಿತ್ಯದ ಧ್ವನಿ, ಅರ್ಥಗಾರಿಕೆಯ ಭಾಷಿಕ ಸೊಗಸು ಮೊದಲಾದವುಗಳನ್ನು ತಿಳಿದುಕೊಂಡು ಆಸ್ವಾದಿಸಿದರೆ ಸಿಗುವ ರಸಾನುಭವೇ ವಿಶೇಷವಾದುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಅವರು ಹೇಳಿದ್ದಾರೆ.

ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ ಹಾಗೂ ಮಂಗಳೂರು ವಿವಿ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಂಗಳವಾರ ನಡೆದ ಐದು ದಿನಗಳ ‘ಯಕ್ಷಶಿಕ್ಷಣ ಶಿಬಿರ- 2025’ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಕ್ಷಗಾನವು ರಸಾನುಭವದ ನೆಲೆ. ಸೃಜನಶೀಲ ನೆಲೆ, ಸಂಸ್ಕೃತಿ‌ ನಿಷ್ಠೆ ಎಂಬ ಈ ಮೂರು‌ ನೆಲೆಗಳಲ್ಲಿ ಜೋಡಿಕೊಂಡಿಸಿರುವ ಕಲೆಯಾಗಿದೆ. ಯಕ್ಷಗಾನವನ್ನು ಶೈಕ್ಷಣಿಕವಾಗಿ ಕಲಿಯುವುದಕ್ಕೆ ಅನೇಕ ಆಯಾಮಗಳಿವೆ, ಆವರಣಗಳಿವೆ. ಇಂತಹ ಆವರಣಗಳನ್ನು ಅರಿತು ಕಲಾಸಕ್ತಿಯನ್ನು ಬೆಳೆಸಿ ಉತ್ತಮ ಕಲಾವಿದರನ್ನಾಗಿ ರೂಪಿಸುವುದಕ್ಕೆ ಇಂತಹ ಶಿಬಿರಗಳು ಪೂರಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಂಬುರುಹ ಯಕ್ಷಸದನ ಪ್ರತಿಷ್ಠಾನದ ಅಧ್ಯಕ್ಷ ಶೋಭಾ ಪುರುಷೋತ್ತಮ ಪೂಂಜ, ಉಪಾಧ್ಯಕ್ಷ ರಾಜಾರಾಮ ಹೊಳ್ಳ ಮೊದಲಾದವರು ಭಾಗವಹಿಸಿದ್ದರು. ಅಂಬುರುಹ ಪ್ರತಿಷ್ಠಾನದ ದೀವಿತ್ ಕೋಟ್ಯಾನ್ ಸ್ವಾಗತಿಸಿ,‌ ನಿರೂಪಿಸಿದರು.

ಯಕ್ಷಗಾನ ಶಿಬಿರದಲ್ಲಿ ಭಾಗವಹಿಸಿದ ಯಕ್ಷಮಂಗಳ ತಂಡದ ವಿದ್ಯಾರ್ಥಿಗಳು ಶಿಬಿರದ ಅನುಭವ ಹಂಚಿಕೊಂಡರು.‌