ದೇಶ ಮುಂದುವರಿಕೆಯಲ್ಲಿ ಶಿಕ್ಷಣದ ಪಾತ್ರ ಅಗಾಧ

| Published : Jan 07 2025, 12:31 AM IST

ಸಾರಾಂಶ

ಮಾನಸ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಾಧನೆಯನ್ನು ಕಳೆದ ಎರಡು ದಶಕಗಳಿಂದ ವೀಕ್ಷಿಸಿದ್ದೆನೆ, ಮಾನಸ ಸಂಸ್ಥೆ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇಂತಹ ಸಂಸ್ಥೆ ಮೈಸೂರಿನಲ್ಲೂ ಶಾಖೆ ಪ್ರಾರಂಭವಾಗಬೇಕು, ಆಮೂಲಕ ಅಲ್ಲಿನ ವಿದ್ಯಾಥಿ೯ಗಳು ಗುಣಮಟ್ಟದ ಶಿಕ್ಷಣಕ್ಕೆ ಇಲ್ಲಿನ ಪದಾಧಿಕಾರಿಗಳು ಮುಂದಾಗಬೇಕು.

ಕನ್ನಡಪ್ರಭ ವಾತೆ೯ ಕೊಳ್ಳೇಗಾಲ

ಒಂದು ದೇಶ ಮುಂದುವರೆಯಲು ಶಿಕ್ಷಣ ಎಂಬುದು ಅತೀ ಮುಖ್ಯವಾಗಿದೆ. ವಿಜ್ಞಾನ, ತಂತ್ರಜ್ಞಾನ ವಿದ್ಯೆ ಯಾವುದೇ ದೇಶಕ್ಕೆ ಹೋದರು ಇಂದು ಪರಿಣಾಮಕಾರಿಯಾಗಿ ಕೆಲಸ ನಿವ೯ಹಿಸಲಿದೆ, ಈನಿಟ್ಟಿನಲ್ಲಿ ಮಾನಸ ಸಂಸ್ಥೆ ವಿದ್ಯಾರ್ಥಿಗಳನ್ನು ಬುದ್ಧಿವಂತರನ್ನಾಗಿ ಮಾಡಲು ಪಣತೊಟ್ಟಿರುವುದು ಹೆಮ್ಮೆಯ ಸಂಗತಿ ಎಂದು ಮೈಸೂರು ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.

ಅವರು ಮಾನಸ ಸಮಾರೋಪ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿ, ಈಸಂಸ್ಥೆ ಬೋಧಕರಿಗೆ ಇನ್‌ಸ್ಪೈರಿಂಗ್ ಅವಾರ್ಡ್ ನೀಡುವುದು ನನಗೆ ಇಷ್ಟವಾಯ್ತಿ. ಸರ್ಕಾರ ಉಚಿತ ಸೌಲಭ್ಯಗಳನ್ನು ಪ್ರಸ್ತುತ ನಿಲ್ಲಿಸಿ ಉಚಿತ ಶಿಕ್ಷಣ ಉಚಿತ ಆರೋಗ್ಯ ಸೌಲಭ್ಯಗಳನ್ನು ನೀಡಿದಲ್ಲಿ ದೇಶ ಖಂಡಿತ ಅಭಿವೃದ್ಧಿಯತ್ತ ಸಾಗಲಿದೆ. ನಮ್ಮ ದೇಶದ ಮಕ್ಕಳ ಬುದ್ಧಿವಂತಿಕೆ ಸಂಸ್ಕೃತಿ ನಾನು ಸುತ್ತಿದ 25 ದೇಶಗಳಲ್ಲೂ ಕಂಡಿಲ್ಲ, ಪ್ರಸ್ತುತ 30 ವರ್ಷಗಳಲ್ಲಿ ತಂತ್ರಜ್ಞಾನ ಎಷ್ಟು ಬೆಳೆದಿದೆ ಎಂದರೆ ಪ್ರಪಂಚದ ಮೂಲೆ ಮೂಲೆಯಲ್ಲಿ ಯಾರ ಮನೆಯನ್ನು ಯಾವ ಸಮಸ್ಯೆಯನ್ನು ಬೇಕಾದರೂ ಹುಡುಕಬಹುದು, ಚೈನಾದೇಶ ತನ್ನ ಬುದ್ಧಿ ಕೌಶಲ್ಯದಿಂದ ಜಗತ್ತಿಗೆ ಮುಂದುವರಿದ ದೇಶವಾಗಿದೆ. ಇಂದು ನೊಬೆಲ್

ಪ್ರಶಸ್ತಿ ಪಡೆದಿರುವ ಸಾಧಕರು ಕೂಡ ಬಹಳ ಕಡು ಬಡತನದಿಂದ ಬಂದವರಾಗಿದ್ದಾರೆ ವಿದ್ಯೆ ಬುದ್ಧಿವಂತರ ಸ್ವತ್ತು. ಅಂತಹ ವಿದ್ಯೆ ಸಂಸ್ಕಾರವನ್ನು ಮಾನಸ ಶಿಕ್ಷಣ ಸಂಸ್ಥೆ ನೀಡುತ್ತಿದೆ ಎಂದರು.

ಕನ್ನಡಪ್ರಭ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಹಿರಿಯ ಪತ್ರಕತ೯ರೂ ಆದ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ,

ಮಾನಸ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಾಧನೆಯನ್ನು ಕಳೆದ ಎರಡು ದಶಕಗಳಿಂದ ವೀಕ್ಷಿಸಿದ್ದೆನೆ, ಮಾನಸ ಸಂಸ್ಥೆ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇಂತಹ ಸಂಸ್ಥೆ ಮೈಸೂರಿನಲ್ಲೂ ಶಾಖೆ ಪ್ರಾರಂಭವಾಗಬೇಕು, ಆಮೂಲಕ ಅಲ್ಲಿನ ವಿದ್ಯಾಥಿ೯ಗಳು ಗುಣಮಟ್ಟದ ಶಿಕ್ಷಣಕ್ಕೆ ಇಲ್ಲಿನ ಪದಾಧಿಕಾರಿಗಳು ಮುಂದಾಗಬೇಕು ಎಂದರು.

ನಾಡಿನ ಹೆಸರಾಂತ ಸಾಧಕರಿಗೆ ಮಾನಸ ಶಿಕ್ಷಣ ಸಂಸ್ಥೆ ಮಾನಸ ಪ್ರಶಸ್ತಿ ನೀಡಿ ಈ ಸಂಸ್ಥೆಯ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ

ಪ್ರೋತ್ಸಾಹದಾಯಕ ಕಾಯ೯ಕ್ರಮವಾಗಿ ಮಾನಸೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಯುವ ಪೀಳಿಗ ಪತ್ರಿಕೆಗಳನ್ನು ಹೆಚ್ಚಿನ ರೀತಿ ಓದುವಂತಾಗಬೇಕು,ಗ್ರಂಥಾಲಯಗಳಿಗೆ ತೆರಳಿ ಅಲ್ಲಿರುವ ಸಂಗ್ರಹಕವಾಗಿರುವ ಪುಸ್ತಕಗಳನ್ನು ವೀಕ್ಷಿಸಿ ಜ್ಞಾನ ಹೆಚ್ಚಿಸಿಕೊಳ್ಳಬೇಕು, ಪೈಪೋಟಿ ಯುಗದಲ್ಲೂ ಇಲ್ಲಿನ ವಿದ್ಯಾಥಿ೯ಗಳು ಕಠಿಣ ಪರಿಶ್ರಮದ ಮೂಲಕ ಸಾಧನೆಗೈಯುವಂತಾಗಬೇಕು ಎಂದು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಿ.ಮಂಜುನಾಥ ಪ್ರಸನ್ನರವರು ಮಾತನಾಡಿ, ಆಧುನಿಕ ಯುಗದಲ್ಲಿ ವಿದ್ಯಾಥಿ೯ಗಳ ಜ್ಞಾನದ ವೇಗ ಹೆಚ್ಚಬೇಕು, ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಮಾನಸ ಶಿಕ್ಷಣ ಸಂಸ್ಥೆ ಜಿಲ್ಲಾದ್ಯಂತ ತನ್ನ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚು ಒತ್ತುನೀಡಬೇಕು, ತಂತ್ರಜ್ಞಾನ ಮುಂದುವರೆಯುತ್ತಿರುವ ಹಿನ್ನೆಲೆ ಯುವ ಪೀಳಿಗೆಯೂ ಇದಕ್ಕೆ ಒಗ್ಗಿಕೊಳ್ಳಬೇಕು, ಶಿಕ್ಷಣ ಹುಲಿ ಹಾಲಿದ್ದಂತೆ ಎಂದು ಬಾಬ ಸಾಹೇಬರು ಉಲ್ಲೀಖಿಸಿದ್ದಾರೆ, ಅದರಂತೆ ಉನ್ನತ ಶಿಕ್ಷಣ ಪಡೆಯುವ ಮೂಲಕ ಪೈಪೋಟಿ ಯುಗದಲ್ಲಿ ವಿದ್ಯಾಥಿ೯ಗಳು ಸಾಧಕರಾಗಬೇಕು ಎಂದರು.

ಈ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾಥಿ೯ಗಳು ಕಲಿಯುತ್ತಿದ್ದಾರೆ, ಇನ್ನು ದಾಖಲಾತಿ ವೇಗ ಹೆಚ್ಚುತ್ತಿದೆ ಎಂಬುದಕ್ಕೆ ಇಲ್ಲಿನ ಸಂಸ್ಥೆಯ ಸಿಬ್ಬಂದಿಗಳು, ಪದಾಧಿಕಾರಿಗಳು ಒಗ್ಗೂಡಿ ನೀಡುತ್ತಿರುವ ಶಿಕ್ಷಣವೇ ಕಾರಣವಾಗಿದ್ದು ಇಂದಿನ ಮಾನಸೋತ್ಸವದಲ್ಲಿ ಸಾಧಕರ ಅಭಿನಂದನೆ, ವಿದ್ಯಾಥಿ೯ಗಳ ಪುರಸ್ಕಾರ ಮಾಡಿ ಗೌರವಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.

ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಸಂಸ್ಥೆಯ ಅಧ್ಯಕ್ಷರಾದ ನಾಗರಾಜು ಕಾರ್ಯದರ್ಶಿಗಳಾದ ಡಾ.ಎಸ್.ದತ್ತೇಶ್ ಕುಮಾರ್‌ರವರು ಕಳೆದ 30 ವರ್ಷಗಳಿಂದ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅಕ್ಷರದ ಜೊತೆಗೆ ಅನ್ನ ದಾಸೋಹ ಮಾಡುತ್ತಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಸಂಸ್ಥೆ ಬೆಳವಣಿಗೆ ನಿಟ್ಟಿನಲ್ಲಿ ನಾನು ಸಹಾ ಕೈಜೋಡಿಸುವೆ, ಇದೊಂದು ಮೌಲ್ಯಯುತ ಶಿಕ್ಷಣ ಸಂಸ್ಥೆ ಎಂದರು.

ದಿವ್ಯಸಾನಿಧ್ಯ ವಹಿಸಿದ್ದ ಜೇತವನಾದ ಬೌದ್ಧ ಬಿಕ್ಕುಗಳಾದ ಪರಮಪೂಜ್ಯ ಮನೋರಖಿತ ಬಂತೇಜಿ ಮಾತನಾಡಿ., ಮನುಷ್ಯನಿಗೆ ಊಟ, ಬಟ್ಟೆ, ವಸತಿ ಎಷ್ಟು ಮುಖ್ಯವೋ ಶಿಕ್ಷಣವು ಅಷ್ಟೇ ಮುಖ್ಯ, ಮನಸ್ಸಿನ ಪುಸ್ತಕವನ್ನು ನಾವೆಲ್ಲರೂ ಓದಬೇಕು.

ಈ ಸಂಸ್ಥೆಯಲ್ಲಿ ಬೋಧಕ ಬೋಧಕೇತರರನ್ನೆಲ್ಲ ಸ್ವಾಗತಿಸುತ್ತಿರುವುದು ಅಭಿನಂದನಾರ್ಹ, ದ್ಯಾನದ ಮೂಲಕ ನಾವು ಸಕಲವನ್ನು ಗಳಿಸಬಹುದು ಮಾನಸ ಶಿಕ್ಷಣ ಸಂಸ್ಥೆ ವಿದ್ಯೆ, ಅನ್ನ, ಉದ್ಯೋಗ ಎಲ್ಲವನ್ನು ನೀಡುತ್ತಿದೆ ಬಡತನವನ್ನು ನಾವೆಲ್ಲರೂ ಸ್ವೀಕರಿಸಬೇಕು ಸಮ ಸಮಾಜವನ್ನು ನಿರ್ಮಿಸಬೇಕು ಅಶೋಕನ ಶಾಂತಿ ಹೊಂದಬೇಕು, ಬಸವಣ್ಣನವರ ಸಮಾನತೆ ಮೈಗೂಡಿಸಿಕೊಳ್ಳಬೇಕು ಎಂದರು.