ಸುರೇಶ ಕನೋಜ ಮಾತನಾಡಿ, ಆರೋಗ್ಯಯುತ ಬದುಕಿಗೆ ಮೊದಲು ಒಳ್ಳೆಯ ಸಕಾರಾತ್ಮಕ ವಿಚಾರಗಳು ಅವಶ್ಯಕವಾಗಿದೆ. ನಾವು ದಿನನಿತ್ಯ ಬಳಸುವ ತರಕಾರಿಗಳು ನಮ್ಮ ಆರೋಗ್ಯಕ್ಕೆ ದಿವ್ಯ ಔಷಧಿಯಾಗಿದೆ ಎಂದರು.

ನರಗುಂದ: ಮನುಷ್ಯ ಸಮಾಜದಲ್ಲಿ ಎಷ್ಟು ದಿನ ಬದುಕಿರುತ್ತಾನೆ ಎಂಬುದು ಯಾರಿಗೂ ತಿಳಿಯದು. ಬದುಕಿರುವಷ್ಟು ದಿನ ಭಗವಂತನ ಸೇವೆ ಮಾಡಬೇಕೆಂದು ಹೆಬಸೂರಿನ ರಾಜಯೋಗಿನಿ ಶರಣಮ್ಮಕ್ಕ ತಿಳಿಸಿದರು.ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ಸೇವಾ ಕೇಂದ್ರದಲ್ಲಿ 90ನೇ ಮಹಾಶಿವರಾತ್ರಿಯ ಪ್ರಯುಕ್ತ ಆರೋಗ್ಯಯುತ ಬದುಕಿಗೆ ಆಯುರ್ವೇದದ ಜತೆಗೆ ಭಗವಂತನ ನಾಮಸ್ಮರಣೆಯ ಶಕ್ತಿ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪರಮಾತ್ಮ ಭವರೋಗ ವೈದ್ಯ. ಅಮೂಲ್ಯವಾದ ಶರೀರ ನಮಗೆ ಸಿಕ್ಕಿದೆ. ಆದರೆ ಅದನ್ನು ಕೆಲವರು ದುಶ್ಚಟಗಳಿಗೆ ದಾಸರಾಗಿ ಹಾಳು ಮಾಡಕೊಳ್ಳುತ್ತಾರೆ. ಶರೀರದ ಒಂದೊಂದು ಅಂಗದ ಬೆಲೆ ಈ ಜಗತ್ತಿನಲ್ಲಿರುವ ಡಾಕ್ಟರ ಹತ್ತಿರ ಹೋದಾಗ ಗೊತ್ತಾಗುತ್ತದೆ. ಪರಮಾತ್ಮ ಕೊಟ್ಟಿರುವ ಈ ಶರೀರದ ಬೆಲೆ ಎಷ್ಟು ಎಂದು ಬೆಲೆ ಕಟ್ಟಲಾಗದು. ಇಂತಹ ಬೆಲೆ ಬಾಳುವ ಶರೀರದಲ್ಲಿ ನಾನಾತ್ಮನು ಅರಿವು ಮಾಡಿಕೊಂಡು ನಿರಂತರ ತಂದೆ ಪರಮಾತ್ಮನ ನೆನಪು ಮಾಡಿಕೊಂಡು ಜೀವನ ನಡೆಸಬೇಕೆಂದು ಎಂದರು.

ಸುರೇಶ ಕನೋಜ ಮಾತನಾಡಿ, ಆರೋಗ್ಯಯುತ ಬದುಕಿಗೆ ಮೊದಲು ಒಳ್ಳೆಯ ಸಕಾರಾತ್ಮಕ ವಿಚಾರಗಳು ಅವಶ್ಯಕವಾಗಿದೆ. ನಾವು ದಿನನಿತ್ಯ ಬಳಸುವ ತರಕಾರಿಗಳು ನಮ್ಮ ಆರೋಗ್ಯಕ್ಕೆ ದಿವ್ಯ ಔಷಧಿಯಾಗಿದೆ ಎಂದರು.

ಡಾ. ಅಮಿತ್ ಬ್ಯಾತನಾಳ ಮಾತನಾಡಿ, ನಾವು ಕೊಡುವ ಔಷಧಿ ಕೆಲಸ ಮಾಡಬೇಕು ಎಂದರೆ ಪರಮಾತ್ಮನ ನಾಮಸ್ಮರಣೆಯ ಅವಶ್ಯಕವಾಗಿದೆ. ನಾವು ಕೇವಲ ಭರವಸೆ ಕೊಡಬಲ್ಲೆವು, ಆದರೆ ಭರವಸೆ ನಿಭಾಯಿಸುವವನು ಪರಮಾತ್ಮ ಎಂದರು.ಈ ಸಂದರ್ಭದಲ್ಲಿ ಈಶ್ವರೀಯ ಸೇವಾ ಕೇಂದ್ರದಿಂದ 150 ಜೋಗಮ್ಮ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ರಾಜಯೋಗಿನಿ ಕು. ಪ್ರಭಕ್ಕನವರು, ಡಾ. ಜಿ.ಎಸ್. ನುಗ್ಗಾನಟ್ಟಿ, ಡಾ. ಸಿ.ಕೆ. ರಾಚನಗೌಡ್ರ, ಡಾ. ಭದ್ರಾಗೌಡರ ಸೇರಿದಂತೆ ಮುಂತಾದವರು ಇದ್ದರು. ವಿ.ಎನ್. ಕೊಳ್ಳಿಯವರ ಸ್ವಾಗತಿಸಿದರು. ಶಿಕ್ಷಕ ಹನುಮಂತಪ್ಪ ಮಾದರ ನಿರೂಪಿಸಿದರು. ಅರವಿಂದ ಮೇಗೂರ ವಂದಿಸಿದರು.