ವಿಶ್ವಕರ್ಮ ಸಮಾಜದ ಸಮಗ್ರ ಸಾಹಿತ್ಯ ಸಂಪುಟದ ಅವಶ್ಯಕತೆ ಇದೆ

| Published : Oct 09 2024, 01:35 AM IST

ವಿಶ್ವಕರ್ಮ ಸಮಾಜದ ಸಮಗ್ರ ಸಾಹಿತ್ಯ ಸಂಪುಟದ ಅವಶ್ಯಕತೆ ಇದೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಕರ್ಮ ಸಮಾಜದ ಬಗ್ಗೆ ಸಾಕಷ್ಟು ಸಾಹಿತ್ಯ ಭಂಡಾರವಿದ್ದು, ಅದು ಸಮಗ್ರ ಸಾಹಿತ್ಯ ಸಂಪುಟದ ಅವಶ್ಯಕತೆ ಇದೆ ಎಂದು ವಿದ್ಯಾಗಿರಿಯ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ವಿ.ಎನ್.ಕಮ್ಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿಶ್ವಕರ್ಮ ಸಮಾಜದ ಬಗ್ಗೆ ಸಾಕಷ್ಟು ಸಾಹಿತ್ಯ ಭಂಡಾರವಿದ್ದು, ಅದು ಸಮಗ್ರ ಸಾಹಿತ್ಯ ಸಂಪುಟದ ಅವಶ್ಯಕತೆ ಇದೆ ಎಂದು ವಿದ್ಯಾಗಿರಿಯ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ವಿ.ಎನ್.ಕಮ್ಮಾರ ಹೇಳಿದರು.ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ, ವಿಶ್ವಕರ್ಮ ಸಮಾಜ ಸಂಘ ಬಾಗಲಕೋಟೆ ಸಹಯೋಗದಲ್ಲಿ ವಿಶ್ವಕರ್ಮ ಸಾಹಿತ್ಯ ಪ್ರಚಾರ ಸಮಿತಿ ರಜತಮಹೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಗ್ರಂಥ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ವಿಶ್ವಕರ್ಮ ಸಾಹಿತ್ಯ ಕುರಿತಂತೆ ಹುಬ್ಬಳ್ಳಿಯ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಸಂಚಾಲಕ ಬೀಮಶೇನ್ ಬಡಿಗೇರ ನೇತೃತದಲ್ಲಿ ಸಮಾಜದ ಕುರಿತು, ಸಮುದಾಯದ ಸಾಧಕರ ಕುರಿತು ಮತ್ತು ಸಮಾಜದ ಸಂಸ್ಕೃತಿ ಆಚಾರ ವಿಚಾರಗಳು ಕುರಿತಂತೆ ಸಾಕಷ್ಟು ಗ್ರಂಥಗಳನ್ನು ಹೊರತಂದಿರುವುದು ಶ್ಲಾಘನೀಯವಾಗಿದೆ. ಆ ನಿಟ್ಟಿನಲ್ಲಿ ಸಮುದಾಯದ ನಡೆದು ಬಂದ ಪರಂಪರೆ, ಸಾಧಕರ ಜೀವನ ಗಾಥೆ, ವಿಶ್ವಕರ್ಮ ಮತ್ತು ವಿಶ್ವಕರ್ಮ ತತ್ವದ ಬಗ್ಗೆ ಸಾಕಷ್ಟ ಸಾಹಿತ್ಯ ಭಂಡಾರವಿದೆ. ಇದು ಎಲ್ಲವೂ ಒಂದು ವಿಶ್ವಕರ್ಮ ಸಮಗ್ರ ಸಾಹಿತ್ಯ ಸಂಪೂಟವಾಗಿ ಹೊರ ಬರಬೇಕಾಗಿದೆ ಎಂದರು. ಡಾ.ಶೀಲಾಕಾಂತ ಪತ್ತಾರ ರಚನೆಯಲ್ಲಿ ಮುಡಿಬಂದ ಅಕ್ಕಸಾಲಿಕೆ ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡಿದ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಎಂ.ಅಗಳತಕಟ್ಟಿ ವಿಶ್ವಕರ್ಮ ಸಮಾಜ ಪಂಚ ವೃತಿಯ ಕರಿತು ಈ ಗ್ರಂಥ ಬೇಳಕು ಚೆಲ್ಲಲಿದೆ ಎಂದರು. ಬೀಮಶೇನ್ ಬಡಿಗೇರ ಸಂಪಾದಕಿಯಲ್ಲಿ ಬಂದ ಬೆಳ್ಳಿ ಬೇಡಗು ಗ್ರಂಥವನ್ನು ಸಾಹಿತಿ ಆನಂದ ಮಸಳಿ ಅವರು ಬಿಡುಗಡೆ ಮಾಡಿ ಮಾತನಾಡಿ, ಸಮಾಜದ ಸಾಧಕರ ಪರಿಚಯ ಮತ್ತು ಪರಂಪರೆ ಕುರಿತು ಅನೇಕ ವಿಷಯಗಳ ಬಗ್ಗೆ ಜ್ಞಾನ ಬೀರುತ್ತದೆ ಎಂದರು.

ಬಾಗಲಕೋಟೆ ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಮೌನೇಶ ಪತ್ತಾರ ಕೆರೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಕೃತಿಗಳ ಭಂಡಾರವೇ ವಿಶ್ವಕರ್ಮ ಸಮಾಜವಾಗಿದ್ದು, ಎಲ್ಲರನ್ನು ಪ್ರೀತಿಸುತ್ತ ಎಲ್ಲವನ್ನು ಪ್ರಿತಿಸುತ್ತ ನಮ್ಮ ಕಲೆ,ಸಂಸ್ಕೃತಿಗಳನ್ನು ಉಳಿಸಿ ಬೆಳಿಸುವ ಕರ್ತವ್ಯ ನಮ್ಮೆಲರದಾಗಿದೆ ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಸಂಚಾಲಕ ಬೀಮಶೇನ್ ಬಡಿಗೇರ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವಿ.ಎಸ್.ಪತ್ತಾರ, ವಿ.ವಿ.ಪತ್ತಾರ ಐಹೊಳೆ, ನಾಗರಾಜ ಕಮ್ಮಾರ, ಎಸ್.ಎನ್.ಪತ್ತಾರ, ಎ.ಎಲ್.ಬಡಿಗೇರ, ಪ್ರಕಾಶ ಪತ್ತಾರ ಸೇರಿದಂತೆ ಅನೇಕರು ಇದ್ದರು.