ಗುಂಡ್ಲುಪೇಟೆ ತಾಲೂಕಿನ 9 ಗ್ರಾಮಗಳಲ್ಲಿ ಯಾಗಾದಿ ಹಬ್ಬವಿಲ್ಲ!

| Published : Apr 09 2024, 12:48 AM IST

ಗುಂಡ್ಲುಪೇಟೆ ತಾಲೂಕಿನ 9 ಗ್ರಾಮಗಳಲ್ಲಿ ಯಾಗಾದಿ ಹಬ್ಬವಿಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ನೇನೇಕಟ್ಟೆ, ಮಾಡ್ರಹಳ್ಳಿ, ಬೆಂಡಗಳ್ಳಿ, ಬನ್ನಿತಾಳಪುರ,ಮಳವಳ್ಳಿ, ವೀರನಪುರ,ಇಂಗಲವಾಡಿ,ರಂಗೂಪುರ, ಬೆಳಚಲವಾಡಿ ಗ್ರಾಮಗಳಲ್ಲಿ ಈ ಬಾರಿ ಯುಗಾದಿ ಹಬ್ಬ ಆಚರಣೆ ಇಲ್ಲ

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಚಾಂದ್ರಮಾನ ಯುಗಾದಿ ಹಬ್ಬವನ್ನು (ಇಂದು) ಮಾ.೯ ಮಂಗಳವಾರ ದೇಶದಲ್ಲೆಡೆ ಆಚರಣೆಗೆ ಅಣಿಯಾಗಿದ್ದಾರೆ.ಆದರೆ ತಾಲೂಕಿನ 9 ಗ್ರಾಮಗಳಲ್ಲಿ ಮಾತ್ರ ಮಂಗಳವಾರ ಬಂದ ಕಾರಣ ಯುಗಾದಿ ಹಬ್ಬ ಆಚರಣೆ ಮಾಡುತ್ತಿಲ್ಲ!

ಈ ವಿಚಿತ್ರ ಪ್ರಸಂಗ ಎಲ್ಲಂತೀರಾ:

ತಾಲೂಕಿನ ನೇನೇಕಟ್ಟೆ, ಮಾಡ್ರಹಳ್ಳಿ, ಬೆಂಡಗಳ್ಳಿ, ಬನ್ನಿತಾಳಪುರ,ಮಳವಳ್ಳಿ, ವೀರನಪುರ,ಇಂಗಲವಾಡಿ,ರಂಗೂಪುರ, ಬೆಳಚಲವಾಡಿ ಗ್ರಾಮದಲ್ಲಿ ಮಂಗಳವಾರ ಹಬ್ಬ ಬಂದಿರುವ ಕಾರಣ ಯುಗಾದಿ ಹಬ್ಬ ಆಚರಣೆಯೇ ಇಲ್ಲ. ಒಂದು ವೇಳೆ ಯುಗಾದಿ ಹಬ್ಬ ಮಂಗಳವಾರ ದಿನ ಆಚರಿಸಿದರೆ ಗ್ರಾಮಕ್ಕೆ ಅನಾಹುತ ಸಂಭವಿಸಲಿದೆ ಎಂದು ಗ್ರಾಮಸ್ಥರ ನಂಬಿಕೆಯಂತೆ ಹಾಗಾಗಿ ಹಲವಾರು ದಶಕಗಳಿಂದಲೂ ನಡೆದುಕೊಂಡು ಬಂದಿದೆ.

ಮುಂಗಾರು ಆರಂಭವಾಗುವ ಕಾಲದ ವರ್ಷದ ಹೊಸ ಪಂಚಾಗದ ಹೊಸ ಹಬ್ಬವಾಗಿರುವ ಯುಗಾದಿ ಹಬ್ಬ ಮಾತ್ರ ಮೇಲ್ಕಂಡ 9 ಗ್ರಾಮಗಳಿಗೆ ಅನ್ವಯಿಸುವುದಿಲ್ಲ ಹಾಗೂ ಯುಗಾದಿ ಹಬ್ಬದಂದು ಮಳೆ ಬಿದ್ದರೂ ಹೊನ್ನೇರು ಕಟ್ಟುವುದಿಲ್ಲ.

ತಾಲೂಕಿನ ರಂಗೂಪುರ ಗ್ರಾಮದಲ್ಲಿ ಗುರುವಾರ ದಿನದಂದು ಯುಗಾದಿ ಹಬ್ಬ ಬಂದರೆ ಮಾತ್ರ ಸಂಭ್ರಮಮ ಸಡಗರ. ಉದಾಹರಣೆಗೆ ಈ ಸಾಲಿನಲ್ಲಿ ಯುಗಾದಿ ಮಾ.೯ ಮಂಗಳವಾರ ಬಂದಿರುವ ಕಾರಣ ಹಬ್ಬ ಆಚರಣೆ ಇಲ್ಲ.

ತಾಲೂಕಿನ ರಂಗೂಪುರ ಗ್ರಾಮದಲ್ಲಿ ಮಾ.೧೧ ರ ಗುರುವಾರ ಹಬ್ಬ ಆಚರಣೆ ಮಾಡಲಿದ್ದಾರೆ. ಇದು ರಂಗೂಪುರ ಗ್ರಾಮದ ಕಥೆಯಾದರೆ, ಇನ್ನು ನೇನೇಕಟ್ಟೆ, ಮಾಡ್ರಹಳ್ಳಿ, ಬನ್ನಿತಾಳಪುರ, ಮಳವಳ್ಳಿ, ವೀರನಪುರ, ಗ್ರಾಮದಲ್ಲಿ ಬುಧವಾರ ಬರುವ ತನಕ ಹಬ್ಬ ಆಚರಣೆ ಮಾಡುವುದಿಲ್ಲ.

ಇನ್ನು ಬೆಳಚಲವಾಡಿ ಗ್ರಾಮದಲ್ಲಿ ಗುರುವಾರ ವಾಡಿಕೆಯಂತೆ ಯುಗಾದಿ ಹಬ್ಬಬಂದರೆ ಹಬ್ಬ ಮಾಡುವುದಿಲ್ಲ.ಉಳಿದೆಲ್ಲ ದಿನಗಳಲ್ಲಿ ಗುರುವಾರ ಹೊರೆತು ಪಡಿಸಿ ಬಂದರೆ ಹಬ್ಬ ಮಾಡಲಿದ್ದಾರೆ.

ದೇಶದ ನಾಗರೀಕರು ಹೊಸ ಸಂವತ್ಸರದಲ್ಲಿ ಹಿಂದುಗಳ ಹೊಸ ವರ್ಷದ ಹಬ್ಬಗಳ ಆಚರಣೆಗೆ ಹಳೆಯ ನಂಬಿಕೆಯ ರೀತಿಯಲ್ಲಿ ಹಬ್ಬ ಆಚರಣೆ ಮಾಡದೆ ಇರುವುದು ಒಂದೆಡೆ ಯಾದರೆ, ಮಳೆ ಬಿದ್ದರು ಸಹ ಆಯಾಯ ಗ್ರಾಮದ ಹಬ್ಬದ ದಿನದವರೆಗೆ ಬಿತ್ತನೆ ಮಾಡಂಗಿಲ್ಲ ಹಾಗು ಹೊನ್ನೇರು ಕಟ್ಟಂಗಿಲ್ಲ.