ಟಿಪ್ಪರ್‌ಗೆ ಕಾರು ಡಿಕ್ಕಿ‌ಯಾಗಿ ಇಬ್ಬರು ಸಾವು

| Published : Oct 26 2025, 02:00 AM IST

ಸಾರಾಂಶ

ಕೇರಳ‌ ಮೂಲದ ಕಾರು ಹಾಗೂ ಟಿಪ್ಪರ್ ಮುಖಾ ಮುಖಿ ಡಿಕ್ಕಿ‌ ಹೊಡೆದು ಕೇರಳ‌ ಮೂಲದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರವಾಗಿ ಗಾಯವಾದ ಘಟನೆ ತಾಲೂಕಿನ ಬೇಗೂರು ಪೊಲೀಸ್ ಠಾಣಾ ಸರಹದ್ದಿನ ಮಾದಾಪಟ್ಟಣ ಗೇಟ್ ಬಳಿ ಶನಿವಾರ ನಡೆದಿದೆ.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಕೇರಳ‌ ಮೂಲದ ಕಾರು ಹಾಗೂ ಟಿಪ್ಪರ್ ಮುಖಾ ಮುಖಿ ಡಿಕ್ಕಿ‌ ಹೊಡೆದು ಕೇರಳ‌ ಮೂಲದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರವಾಗಿ ಗಾಯವಾದ ಘಟನೆ ತಾಲೂಕಿನ ಬೇಗೂರು ಪೊಲೀಸ್ ಠಾಣಾ ಸರಹದ್ದಿನ ಮಾದಾಪಟ್ಟಣ ಗೇಟ್ ಬಳಿ ಶನಿವಾರ ನಡೆದಿದೆ.

ಕೇರಳ ರಾಜ್ಯದ ಕಲ್ಪೆಟ್ಟ ಜಿಲ್ಲೆಯ ಕಂಬಳಕಾಡಿನ ಬಶೀರ್ (೫೩), ನಸೀಮಾ ಬಸೀರ್(೪೩) ಮೃತ ದುರ್ದೈವಿಗಳು.

ಮೈಸೂರು ಕಡೆಯಿಂದ ಬಂದ ಕೇರಳ ಮೂಲದ ಕಾರು ಹಾಗೂ ಗುಂಡ್ಲುಪೇಟೆ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಡಿಕ್ಕಿಯಾಗಿವೆ.

ಕಾರಲ್ಲಿದ್ದ ಮಹಮ್ಮದ್ ಶಫಿ(೩೨), ಜಶೀರ(೨೮), ಅಜೀಂ(3) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಬೇಗೂರು ಸರ್ಕಲ್ ಇನ್ಸ್ ಪೆಕ್ಟರ್ ಮೋಹಿತ್ ಸಹದೇವ್ ತಿಳಿಸಿದ್ದಾರೆ.

ಘಟನೆ ವಿವರ?:

ಮೈಸೂರು ಕಡೆಯಿಂದ ಬರುತ್ತಿದ್ದ ಕಾರು ಮತ್ತೊಂದು ವಾಹನ ಓವರ್ ಟೇಕ್ ಮಾಡಲು ಯತ್ನಿಸುತ್ತಿದ್ದು, ಎದುರು ಬರುತ್ತಿದ್ದ ಟಿಪ್ಪರ್ ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು, ಟಿಪ್ಪರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದಾರೆ.