ಉಡುಪಿ ಜಿಲ್ಲಾ ಪತ್ರಕರ್ತರ ಕ್ರಿಕೆಟ್: ಉಡುಪಿ ತಂಡ ಚಾಂಪಿಯನ್‌

| Published : Mar 06 2024, 02:19 AM IST

ಸಾರಾಂಶ

ಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದ ಉಡುಪಿ ತಂಡವು ಬ್ಯಾಟಿಂಗ್ ಆರಿಸಿ ಕೊಂಡಿತು. ಒಟ್ಟು ಐದು ಓವರ್‌ಗಳಲ್ಲಿ 37 ರನ್ ಕಳೆ ಹಾಕಿದ ಉಡುಪಿ ತಂಡವು ಎದುರಾಳಿ ಕುಂದಾಪುರ ತಂಡಕ್ಕೆ 38ರನ್‌ಗಳ ಗುರಿ ನೀಡಿತು. ತೀವ್ರ ಸೆಣಸಾಟದಲ್ಲಿ ಉಡುಪಿ ತಂಡವು ಕುಂದಾಪುರ ತಂಡವನ್ನು ಐದು ರನ್‌ಗಳಿಂದ ಮಣಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಕುಂದಾಪುರ ತಂಡವು ರನ್ನರ್ಸ್‌ ಪ್ರಶಸ್ತಿ ಪಡೆದುಕೊಂಡಿತು.

ಕನ್ನಡಪ್ರಭ ವಾರ್ತೆ ಕಾಪುಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆಯಾಗಿರುವ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ರಜತ ಮಹೋತ್ಸವ ಪ್ರಯುಕ್ತ ಮಂಗಳವಾರ ಹೆಜಮಾಡಿಯ ರಾಜೀವ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಉಡುಪಿ ಜಿಲ್ಲಾಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ, ಕಾಪು, ಕಾರ್ಕಳ, ಕುಂದಾಪುರ ಹಾಗೂ ಬ್ರಹ್ಮಾವರ ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಉಡುಪಿ ಮತ್ತು ಕುಂದಾಪುರ ತಂಡಗಳು ಅತೀ ಹೆಚ್ಚು ಅಂಕಗಳನ್ನು ಗಳಿಸಿ ಫೈನಲ್ ಪ್ರವೇಶಿಸಿದವು.ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಉಡುಪಿ ತಂಡವು ಬ್ಯಾಟಿಂಗ್ ಆರಿಸಿ ಕೊಂಡಿತು. ಒಟ್ಟು ಐದು ಓವರ್‌ಗಳಲ್ಲಿ 37 ರನ್ ಕಳೆ ಹಾಕಿದ ಉಡುಪಿ ತಂಡವು ಎದುರಾಳಿ ಕುಂದಾಪುರ ತಂಡಕ್ಕೆ 38ರನ್‌ಗಳ ಗುರಿ ನೀಡಿತು. ತೀವ್ರ ಸೆಣಸಾಟದಲ್ಲಿ ಉಡುಪಿ ತಂಡವು ಕುಂದಾಪುರ ತಂಡವನ್ನು ಐದು ರನ್‌ಗಳಿಂದ ಮಣಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಕುಂದಾಪುರ ತಂಡವು ರನ್ನರ್ಸ್‌ ಪ್ರಶಸ್ತಿ ಪಡೆದುಕೊಂಡಿತು.ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಉಡುಪಿ ತಂಡದ ಯತೀಶ್ ತಿಂಗಳಾಯ, ಉತ್ತಮ ದಾಂಡಿಗ ಪ್ರಶಸ್ತಿಯನ್ನು ಕುಂದಾಪುರ ತಂಡದ ಸಂತೋಷ್ ಕುಂದೇಶ್ವರ, ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಕುಂದಾಪುರ ತಂಡದ ಹರೀಶ್ ಕುಂದಾಪುರ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಉಡುಪಿ ತಂಡದ ರಾಘವೇಂದ್ರ ಪಡೆದುಕೊಂಡರು.