ಕನ್ನಡಪ್ರಭ ವಾರ್ತೆ ಉಡುಪಿಜಿಲ್ಲೆಯ 43 ಮಂದಿ ಸಾಧಕರು ಮತ್ತು 7 ಸಂಘಸಂಸ್ಥೆಗಳಿಗೆ ಈ ಬಾರಿಯ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.ಅವುಗಳಲ್ಲಿ ಉಡುಪಿ ತಾಲೂಕಿಗೆ 13, ಕುಂದಾಪುರ ತಾಲೂಕಿಗೆ 9, ಕಾಪು ತಾಲೂಕಿಗೆ 8, ಬ್ರಹ್ಮಾವರ ತಾಲೂಕಿಗೆ ಮತ್ತು ಕಾರ್ಕಳ ತಾಲೂಕಿಗೆ ತಲಾ 7, ಹೆಬ್ರಿ ಮತ್ತು ಬೈಂದೂರಿಗೆ ತಲಾ 2 ಪ್ರಶಸ್ತಿಗಳು ಲಭಿಸಿವೆ.ಸಮಾಜಸೇವಾ ಕ್ಷೇತ್ರಕ್ಕೆ 10 ಪ್ರಶಸ್ತಿಗಳು ಲಭಿಸಿದ್ದರೆ, ನಾಟಕ - ರಂಗಭೂಮಿಗೆ 5, ಯಕ್ಷಗಾನಕ್ಕೆ 4, ದೈವಾರಾಧನೆ, ಕೃಷಿ - ಹೈನುಗಾರಿಕೆ, ಸಾಹಿತ್ಯ, ಸಂಗೀತಕ್ಕೆ ತಲಾ 3, ಚಿತ್ರಕಲೆ - ಶಿಲ್ಪಕಲೆ ಮತ್ತು ಕ್ರೀಡೆಗೆ ತಲಾ 2, ಧಾರ್ಮಿಕ, ವೈದ್ಯಕೀಯ, ಶಿಕ್ಷಣ ಮತ್ತು ಸಂಕೀರ್ಣ ಕ್ಷೇತ್ರಗಳಿಗೆ ತಲಾ 1 ಹಾಗೂ ಒಬ್ಬ ಬಾಲಪ್ರತಿಭೆಗೆ ಪ್ರಶಸ್ತಿ ನೀಡಲಾಗಿದೆ.ಪ್ರಶಸ್ತಿ ಪುರಸ್ಕೃತರು: ಕೊರ್ಗಿ ವಿಠಲ ಶೆಟ್ಟಿ ಕುಂದಾಪುರ (ಸಮಾಜ ಸೇವೆ), ಶ್ರೀನಿವಾಸ ತಂತ್ರಿ ಕಾಪು (ಧಾರ್ಮಿಕ ಕ್ಷೇತ್ರ), ರಾಘು ಪೂಜಾರಿ ಕಾಪು (ದೈವಾರಾಧನೆ), ಕೆ. ತಾರಾನಾಥ ಹೊಳ್ಳ ಬ್ರಹ್ಮಾವರ (ಸಮಾಜ ಸೇವೆ), ಸುಬ್ರಹ್ಮಣ್ಯ ಬೈಪಡಿತ್ತಾಯ ಕಾರ್ಕಳ (ಸಂಕೀರ್ಣ), ಕೆ. ಜಗನ್ನಾಥ ಪೂಜಾರಿ ಕುಂದಾಪುರ (ಹೈನುಗಾರಿಕೆ), ಶೇಖರ ಹೆಜ್ಮಾಡಿ ಕಾಪು (ಸಮಾಜಸೇವೆ), ಸಂಜೀವ ಶೆಟ್ಟಿ ಬೈಂದೂರು (ಯಕ್ಷಗಾನ), ಶಂಕರ ಯು. ಮಂಜೇಶ್ವರ ಬ್ರಹ್ಮಾವರ (ಸಾಹಿತ್ಯ), ಜಯಕರ ಮಣಿಪಾಲ್ ಉಡುಪಿ (ನಾಟಕ), ಬೇಳೂರು ವಿಷ್ಣುಮೂರ್ತಿ ನಾಯಕ್ ಕುಂದಾಪುರ (ಯಕ್ಷಗಾನ), ಬಾಸುಮ ಕೊಡಗು ಕಾಪು (ರಂಗಭೂಮಿ ), ಉದಯ ಆರ್. ಆಚಾರ್ ಕುಂದಾಪುರ (ಸಮಾಜಸೇವೆ), ಅಶೋಕ್ ಸೇರಿಗಾರ್ ಉಡುಪಿ (ಸ್ಯಾಕ್ಸೋಫೋನ್), ಪ್ರಭಾಕರ ಆಚಾರ್ಯ ಕುಂದಾಪುರ (ಪತ್ರಕರ್ತರು), ಮುಂಬಾರು ದಿನಕರ ಶೆಟ್ಟಿ ಕುಂದಾಪುರ (ಕೃಷಿ), ಡಾ. ರಾಜಲಕ್ಷ್ಮೀ ಉಡುಪಿ (ವೈದ್ಯಕೀಯ), ಸುನಿಲ್ ದೇವಾಡಿಗ ಕಾರ್ಕಳ (ಸ್ಯಾಕ್ಸೋಫೋನ್), ಎಚ್. ಜನಾರ್ದನ್ ಹೆಬ್ರಿ (ಸಮಾಜಸೇವೆ), ಉದಯಕುಮಾರ್ ಕುಂದಾಪುರ (ಸಮಾಜಸೇವೆ), ಕೆ. ಮಹೇಶ್ ಶೆಣೈ ಕಾಪು (ಕೃಷಿ - ಸಮಾಜಸೇವೆ), ಹರೀಶ್ ಶೆಟ್ಟಿ ಕಾರ್ಕಳ (ರಂಗಭೂಮಿ - ಸಾಹಿತ್ಯ), ಮುಷ್ತಾಕ್ ಹೆನ್ನಾಬೈಲ್ ಕುಂದಾಪುರ (ಸಾಹಿತ್ಯ), ಜೋಸೆಫ್ ಲೋಬೋ ಕಾಪು (ಕೃಷಿ), ಡಾ.ದಿನಕರ ಕೆಂಜೂರು ಬ್ರಹ್ಮಾವರ (ಶಿಕ್ಷಣ), ಉದಯಕುಮಾರ್ ಹೊಸಾಳ ಬ್ರಹ್ಮಾವರ (ಯಕ್ಷಗಾನ), ಮಹೇಶ್ ಪೂಜಾರಿ ಉಡುಪಿ (ಸಮಾಜ ಸೇವೆ), ಮಹೇಶ್ ಚೆಂಡ್ಕಳ ಉಡುಪಿ (ಚಿತ್ರಕಲೆ), ಪ್ರದೀಪ್ ಕುಮಾರ್ ಕುಂದಾಪುರ (ಸಮಾಸೇವೆ), ವಿನೋದ್ ಮಂಚಿ ಉಡುಪಿ (ನಾಟಕ), ಪ್ರದೀಪ್ ಡಿ.ಎಂ. ಬ್ರಹ್ಮಾವರ (ಸಾಹಿತ್ಯ), ಪ್ರಶಾಂತ ಆಚಾರ್ಯ ಬೈಂದೂರು (ಶಿಲ್ಪಕಲೆ), ಸಚಿತ್ ಪೂಜಾರಿ ಕಾರ್ಕಳ (ಸಂಗೀತ), ಸಂತೋಷ್ ಕುಮಾರ್ ಹೆಬ್ರಿ (ದೈವಾರಾಧನೆ), ಪಿ.ವಿ. ಆನಂದ ಬ್ರಹ್ಮಾವರ (ಯಕ್ಷಗಾನ), ಸಂಜೀವ ಪರವ ಕಾರ್ಕಳ (ಭೂತಾರಾಧನೆ), ಹರೀಶ್ ಕಾರ್ಕಳ (ರಂಗಭೂಮಿ), ಸುರೇಶ್ ಉಡುಪಿ (ಕ್ರೀಡೆ), ರಾಜಶೇಖರ ಎ. ಶಾಮ ರಾವ್ ಉಡುಪಿ (ಕ್ರೀಡೆ), ಅಭಿನಂದನ ಎ.ಶೆಟ್ಟಿ ಕುಂದಾಪುರ (ಸಮಾಜ ಸೇವೆ), ಸಮೃದ್ಧಿ ಎಸ್.ಮೊಗವೀರ ಬ್ರಹ್ಮಾವರ (ಬಾಲಪ್ರತಿಭೆ), ಗೋವರ್ಧನ ಬಂಗೇರ (ಕ್ರೀಡೆ), ಸದಾಶಿವ ಶೆಟ್ಟಿ (ರಂಗಭೂಮಿ).ಸಂಘ- ಸಂಸ್ಥೆಗಳು: ಶಿರ್ವ ಮಹಿಳಾ ಮಂಡಲ ಕಾಪು (ಸಂಘ ಸಂಸ್ಥೆ), ವಿಷ್ಣುಮೂರ್ತಿ ಫ್ರೆಂಡ್ಸ್ ಉಡುಪಿ (ಸಂಘ ಸಂಸ್ಥೆ), ಯೂತ್ ಸ್ಪೋರ್ಟ್ಸ್ ಆ್ಯಂಡ್ ಕಲ್ಟರಲ್ ಕ್ಲಬ್ ಅಂಬಲಪಾಡಿ ಉಡುಪಿ (ಸಂಘ ಸಂಸ್ಥೆ), ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್ ಕುಂದಾಪುರ (ಸಂಘ ಸಂಸ್ಥೆ), ವಿಜಯ ಯುವಕ ಮಂಡಲ ಹಾಗೂ ಖುಷಿ ಮಹಿಳಾ ಮಂಡಲ ಕಾರ್ಕಳ (ಸಂಘ ಸಂಸ್ಥೆ), ಶ್ರೀ ಗಜಾನನ ಯಕ್ಷಗಾನ ಕಲಾಸಂಘ ಉಡುಪಿ (ಸಂಘ ಸಂಸ್ಥೆ), ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಉಡುಪಿ (ಸಂಘ ಸಂಸ್ಥೆ).
ಉಡುಪಿ: ಪತ್ರಕರ್ತರ ಸಂಘವೂ ಸೇರಿ 50 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಉಡುಪಿ ಜಿಲ್ಲೆಯ 43 ಮಂದಿ ಸಾಧಕರು ಮತ್ತು 7 ಸಂಘಸಂಸ್ಥೆಗಳಿಗೆ ಈ ಬಾರಿಯ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.