ಕೋಳಘಟ್ಟ ಪಿಎಸಿಎಸ್‌ ಅಧ್ಯಕ್ಷರಾಗಿ ವಿ.ವೀರೇಂದ್ರ ಪಾಟೀಲ್‌ ಆಯ್ಕೆ

| Published : Jun 18 2025, 01:23 AM IST

ಕೋಳಘಟ್ಟ ಪಿಎಸಿಎಸ್‌ ಅಧ್ಯಕ್ಷರಾಗಿ ವಿ.ವೀರೇಂದ್ರ ಪಾಟೀಲ್‌ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ತುರುವೇಕೆರೆ: ತಾಲೂಕಿನ ಕೋಳಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿ.ವೀರೇಂದ್ರಪಾಟೀಲ್, ಉಪಾಧ್ಯಕ್ಷರಾಗಿ ಗೌರಮ್ಮ ಬ್ಯಾಟರಂಗಪ್ಪ ಅವಿರೋಧವಾಗಿ ಆಯ್ಕೆಯಾದರು.

ತುರುವೇಕೆರೆ: ತಾಲೂಕಿನ ಕೋಳಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿ.ವೀರೇಂದ್ರಪಾಟೀಲ್, ಉಪಾಧ್ಯಕ್ಷರಾಗಿ ಗೌರಮ್ಮ ಬ್ಯಾಟರಂಗಪ್ಪ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ವೆಂಕಟಾಪುರದ ಸದಸ್ಯ ವಿ.ವೀರೇಂದ್ರಪಾಟೀಲ್, ಉಪಾಧ್ಯಕ್ಷ ಸ್ಥಾನಕ್ಕೆ ಗೌರಮ್ಮ ಬ್ಯಾಟರಂಗಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಚುನಾವಣಾಧಿಕಾರಿಗಳಾಗಿ ಆಗಮಿಸಿದ್ದ ಸಿ.ಎನ್.ಹಳ್ಳಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಟಿ. ಶ್ರೀನಿವಾಸಪ್ಪ ಅಧ್ಯಕ್ಷ, ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ನೂತನ ಅದ್ಯಕ್ಷ ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಡಿಸಿಸಿ ಬ್ಯಾಂಕಿನ ನಿರ್ದೇಶಕ ಸಿದ್ದಲಿಂಗಪ್ಪ, ಸಂಘದ ನಿರ್ದೇಶಕರಾದ ಕುಮಾರಸ್ವಾಮಿ, ರವಿಕುಮಾರ್, ಕಾಂತರಾಜು, ಶಶಿಧರ್, ಕೋಮಲ, ಗಿರಿಯಪ್ಪ, ಕೆ.ಯೋಗಾನಂದ, ಲಕ್ಷ್ಮಣಕುಮಾರ, ಎಚ್.ಎಸ್.ವೆಂಕಟರಾಮಯ್ಯ, ಲೋಕಮ್ಮನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್, ಪಂಚಾಯತಿ ಸದಸ್ಯ ದುಂಡ ನವೀನ್, ಕೋಳಘಟ್ಟ ರಾಜೀವ್, ಮಾವಿನಹಳ್ಳಿ ನವೀನ್, ವಕೀಲ ಡಿ.ಟಿ.ರಾಜಶೇಖರ್, ತೆಂಗು ಅಡಿಕೆ ಬೆಳೆಗಾರ ಸಂಘದ ಕಾರ್ಯದರ್ಶಿ ಕಾಂತರಾಜು, ಮುಖಂಡರಾದ ಮಲ್ಲಾಘಟ್ಟ ರವಿ, ಆನಂದ್, ಲೋಕಮ್ಮನಹಳ್ಳಿ ಶಂಕರಪ್ಪ, ತಾಳಕೆರೆ ಅನಂತ, ಹುಚ್ಚೇಗೌಡ, ಸೊಪ್ಪಿನಹಳ್ಳಿ ರಂಗನಾಥ್, ಮಾವಿನಹಳ್ಳಿ ಕುಮಾರಣ್ಣ, ನಿಜಗುಣ, ಸಿಇಒ ರಾಕೇಶ್ ಸೇರಿದಂತೆ ಅನೇಕ ಮುಖಂಡರು ಅಭಿನಂದಿಸಿದರು.