ಕುಣಿಗಲ್ ನಲ್ಲಿ ವೈಕುಂಠ ಏಕಾದಶಿ ವೈಭವ

| Published : Jan 11 2025, 12:48 AM IST

ಸಾರಾಂಶ

ಪಟ್ಟಣದ ದುಡಿಕೆ ವೆಂಕಟರಮಣ ಸ್ವಾಮಿ ದೇವಾಲಯ ಸೇರಿದಂತೆ ರಮಣ ಬ್ಲಾಕ್ ನ ರಾಮ ಮಂದಿರದಲ್ಲಿ ನಡೆದ ವೈಭವದ ಏಕಾದಶಿ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಕುಣಿಗಲ್ ಪಟ್ಟಣದ ದುಡಿಕೆ ವೆಂಕಟರಮಣ ಸ್ವಾಮಿ ದೇವಾಲಯ ಸೇರಿದಂತೆ ರಮಣ ಬ್ಲಾಕ್ ನ ರಾಮ ಮಂದಿರದಲ್ಲಿ ನಡೆದ ವೈಭವದ ಏಕಾದಶಿ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.

ಪಟ್ಟಣದ ಕೋಟೆ ಪ್ರದೇಶದಲ್ಲಿರುವ ತುಡಿಕೆ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಾಂಪ್ರದಾಯಿಕವಾಗಿ ದೇವಾಲಯದಲ್ಲಿ ನಿರ್ಮಿಸಿದ್ದ ಸಪ್ತ ದ್ವಾರಗಳ ಮೂಲಕ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ವಿಶೇಷವಾಗಿ ದೇವಾಲಯ ಸೇರಿದಂತೆ ಹಲವಾರು ದೇವರ ವಿಗ್ರಹಗಳಿಗೆ ವಿವಿಧ ಹೂಗಳಿಂದ ಶೃಂಗರಿಸಲಾಗಿತ್ತು. ಕುಣಿಗಲ್ ಪಟ್ಟಣ ಸೇರಿದಂತೆ ವಿವಿಧ ಭಾಗಗಳಿಂದ ಬಂದ ಸಾವಿರಾರು ಭಕ್ತರು ವೆಂಕಟರಮಣ ಸ್ವಾಮಿಯ ದರ್ಶನ ಪಡೆದರು.ಮುಖಂಡ ನಾಗರಾಜು, ವಾಸು, ಕೇಶವಮೂರ್ತಿ ಸೇರಿದಂತೆ ಹಲವಾರು ಸ್ವಯಂಸೇವಕರು ಕಾರ್ಯನಿರ್ವಹಿಸಿ ಜವಾಬ್ದಾರಿಗಳನ್ನ ನಿಭಾಯಿಸಿದರು.

ಪಟ್ಟಣದ ರಮಣ ಬ್ಲಾಕ್ ನಲ್ಲಿರುವ ಶ್ರೀರಾಮ ಮಂದಿರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಪ್ತದ್ವಾರಗಳನ್ನ ನಿರ್ಮಾಣ ಮಾಡಲಾಗಿದ್ದು ದೇವಾಲಯಕ್ಕೆ ಬಂದ ಹಲವಾರು ಭಕ್ತರು ದ್ವಾರಗಳ ಮುಖಾಂತರ ಪ್ರವೇಶಿಸಿ ಪುನೀತರಾದರು. ರಾಮ ಸೀತೆ ವಿಷ್ಣು ಲಕ್ಷ್ಮಣ ಸೇರಿದಂತೆ ಹಲವಾರು ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಹೂಗಳಿಂದ ಶೃಂಗರಿಸಿ ಪೂಜಿಸಲಾಯಿತು. ತುಮಕೂರಿನ ರಾಮಕೃಷ್ಣ ಮಠದ ಶ್ರೀ ಸ್ವಾಮಿ ವೀರಾನಂದ ಮಹಾರಾಜ್ ಚಿತ್ರದುರ್ಗದ ರಾಮಕೃಷ್ಣ ಮಠದ ಬ್ರಹ್ಮನಿಷ್ಠಾನಂದ ಶ್ರೀ ಮಹಾರಾಜ್ ಸ್ವಾಮೀಜಿಗಳು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಪ್ರವಚನವನ್ನು ನೀಡಿದರು ಈ ಸಂದರ್ಭದಲ್ಲಿ ಆಡಿಟರ್ ಸುರೇಶ್ ಸೇರಿದಂತೆ ಇತರರು ಇದ್ದರು.