ಸಾರಾಂಶ
ಭಾರತದ ಸಂವಿಧಾನಕ್ಕೆ ಇಡೀ ವಿಶ್ವವೇ ತಲೆಬಾಗುತ್ತದೆ. ಇಲ್ಲಿನ ಪ್ರಜೆಗಳು ಎಲ್ಲರೂ ಸಮಾನರು. ಪ್ರತಿಯೊಬ್ಬರು ಅಂಬೇಡ್ಕರ್ ಅವರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು.
ಕುಕನೂರು:
ಡಾ. ಬಿ.ಆರ್. ಅಂಬೇಡ್ಕರ್ ಭಾರತವನ್ನು ಇಡೀ ವಿಶ್ವದಲ್ಲಿ ಹೊಳೆಯುವಂತೆ ಮಾಡಿದ ವಜ್ರ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಬಣ್ಣಿಸಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಮಾಲಾರ್ಪಣೆ ಮಾಡಿದ ಅವರು, ಭಾರತದ ಸಂವಿಧಾನಕ್ಕೆ ಇಡೀ ವಿಶ್ವವೇ ತಲೆಬಾಗುತ್ತದೆ. ಇಲ್ಲಿನ ಪ್ರಜೆಗಳು ಎಲ್ಲರೂ ಸಮಾನರು. ಪ್ರತಿಯೊಬ್ಬರು ಅಂಬೇಡ್ಕರ್ ಅವರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು. ಕಷ್ಟದ ದಿನಗಳಲ್ಲಿ ಬೆಳೆದ ಅಂಬೇಡ್ಕರ್ ಅವರು ದೇಶಕ್ಕೆ ಹಾಗೂ ಜನರಿಗೆ ಬೆಳಕು ನೀಡಬೇಕು ಎಂದು ನಿರ್ಧರಿಸಿ ಹಲವಾರು ರಾಷ್ಟ್ರಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಬೆಳಕಾಗುವ ಸಂವಿಧಾನ ನೀಡಿದರು. ಅವರ ಕೊಡುಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಸಮಾನತೆ ಆಶಯ, ಶೈಕ್ಷಣಿಕ ಪ್ರಗತಿಯ ಚಿಂತನೆ ನಿಜಕ್ಕೂ ಬಾಲಿಗೆ ಬೆಳಕು ನೀಡಿವೆ ಎಂದರು.
ಯಲಬುರ್ಗಾ ಬಿಜೆಪಿ ಮಂಡಳ ಅಧ್ಯಕ್ಷ ಮಾರುತಿ ಗಾವರಾಳ, ವಕ್ತಾರ ವೀರಣ್ಣ ಹುಬ್ಬಳ್ಳಿ, ಬಸವರಾಜ ಹಾಳಕೇರಿ, ವಕೀಲ ಬಸವರಾಜ ಜಂಗ್ಲಿ, ಕರಬಸಯ್ಯ ಬಿನ್ನಾಳ,ಲಕ್ಷ್ಮಣ ಕಾಳಿ, ಪಪಂ ಸದಸ್ಯ ಬಾಲರಾಜ ಗಾಳಿ, ಹನುಮಂತಪ್ಪ ಹಂಪನಾಳ, ನಾಗಪ್ಪ ಕಲ್ಮನಿ, ಶರಣಪ್ಪ ಛಲವಾದಿ, ಶ್ರೀಕಾಂತ ಛಲವಾದಿ, ರಮೇಶ ಇದ್ದರು.ಯಲಬುರ್ಗಾದಲ್ಲಿ ಮಾಲಾರ್ಪಣೆ:
ಯಲಬುರ್ಗಾದ ಅಂಬೇಡ್ಕರ್ ವೃತ್ತದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ ಅಂಬೇಡ್ಕರ್ ದಿನಾಚರಣೆ ಪ್ರಯುಕ್ತ ಮಾಲಾರ್ಪಣೆ ಮಾಡಿದರು. ಅಲ್ಲದೆ ತಾಲೂಕಾಡಳಿತದಿಂದ ಜರುಗಿದ ಅಂಬೇಡ್ಕರ್ ದಿನಾಚರಣೆಯ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗಿಯಾಗಿ ಅಂಬೇಡ್ಕರ್ ಹಾಗೂ ಮಾಜಿ ಪ್ರಧಾನಿ. ಡಾ. ಬಾಬು ಜಗಜ್ಜೀವನರಾಮ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.