ಸಾರಾಂಶ
ಪ್ರತಿವರ್ಷ ಕೊಡಮಾಡುವ ಸಾಹಿತ್ಯ ಸರಸ್ವತಿ, ಶಾಂತಾದೇವಿ ಕಥಾ ಹಾಗೂ ಡಾ. ಲತಾ ರಾಜಶೇಖರ ಕಾವ್ಯ ಪ್ರಶಸ್ತಿಗಳನ್ನು ಉತ್ತರ ಕರ್ನಾಟಕ ಲೇಖಕಿಯರ ಸಂಘವು ಪ್ರಕಟಿಸಿದೆ.
ಧಾರವಾಡ: ಪ್ರತಿವರ್ಷ ಕೊಡಮಾಡುವ ಸಾಹಿತ್ಯ ಸರಸ್ವತಿ, ಶಾಂತಾದೇವಿ ಕಥಾ ಹಾಗೂ ಡಾ. ಲತಾ ರಾಜಶೇಖರ ಕಾವ್ಯ ಪ್ರಶಸ್ತಿಗಳನ್ನು ಉತ್ತರ ಕರ್ನಾಟಕ ಲೇಖಕಿಯರ ಸಂಘವು ಪ್ರಕಟಿಸಿದೆ.
ಶಾಂತಾದೇವಿ ಕಣವಿ ಕಥಾ ಪ್ರಶಸ್ತಿ 2023- ಸಿ.ಎನ್. ಮುಕ್ತಾ, 2024- ಫಾತಿಮಾ ರಲಿಯಾ ಅವರಿಗೆ ನೀಡಲಾಗುತ್ತಿದೆ. ಡಾ. ಲತಾ ರಾಜಶೇಖರ ಕಾವ್ಯ ಪ್ರಶಸ್ತಿ 2023- ಡಾ. ಎಚ್.ಎಲ್. ಪುಷ್ಪಾ, 2024-ಸ್ಮಿತಾ ಅಮ್ರತರಾಜ್ ಅವರಿಗೆ ನೀಡಲಾಗುತ್ತಿದೆ. ಸಾಹಿತ್ಯ ಸರಸ್ವತಿ 2023- ಡಾ. ವೈ.ಸಿ. ಭಾನುಮತಿ 2024- ಬಿ.ಕೆ. ಶ್ರೀಮತಿರಾವ್ ಅವರಿಗೆ ನೀಡಲಾಗುತ್ತಿದೆ.ಬರುವ ಜೂನ್ ತಿಂಗಳಿನಲ್ಲಿ ನಡೆಯುವ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದತ್ತಿ ದಾನಿಗಳಾದ ಮತ್ತು ಸಾಹಿತ್ಯ ಸರಸ್ವತಿ ಆಯ್ಕೆ ಸಮಿತಿಯ ಸದಸ್ಯರಾಗಿ ಡಾ. ವೀರಣ್ಣ ರಾಜೂರ, ಡಾ. ವೀಣಾ ಶಾಂತೇಶ್ವರ, ಡಾ. ಶಾಂತಾ ಇಮ್ರಾಪೂರ, ಹ.ವೆಂ. ಕಾಖಂಡಕಿ, ಸವಿತಾ ನಾಗಭೂಷಣ ಮತ್ತು ಡಾ. ಹೇಮಾ ಪಟ್ಟಣಶೆಟ್ಟಿ ಕಾರ್ಯ ಮಾಡಿದ್ದಾರೆ.