ಸಾರಾಂಶ
ಪೇಟೆ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ವಾಸವಿ ಜಯಂತಿಯ ಅಂಗವಾಗಿ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅದ್ಧೂರಿಯಾಗಿ ಆಚರಿಸಿದರು. ಶಾಂತಿ ಮತ್ತು ಸಮೃದ್ಧಿಗಾಗಿ ಗಣಪತಿ ಹೋಮ, ದೇವಿಯ ಧಾರ್ಮಿಕ ಉಪನ್ಯಾಸ ಮತ್ತು ಕೀರ್ತನೆ ದೇವಿ ಸ್ತುತಿ ಹಾಗು ಭಜನೆ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಗುರುವಾರ ಓಕಳಿ ಉತ್ಸವಕ್ಕೆ ಸರ್ವ ಭಕ್ತಾದಿಗಳು ಬಂದು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಪೇಟೆ ಆರ್ಯ ವೈಶ್ಯ ಮಂಡಳಿ ವತಿಯಿಂದ ವಾಸವಿ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಪೇಟೆ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ವಾಸವಿ ಜಯಂತಿಯ ಅಂಗವಾಗಿ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅದ್ಧೂರಿಯಾಗಿ ಆಚರಿಸಿದರು.
ಈ ವೇಳೆ ಮಾತನಾಡಿದ ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಎಚ್ ವಿ ರವೀಂದ್ರನಾಥ್, ಪೇಟೆ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ವಾಸವಿ ಜಯಂತಿ ಆಚರಣೆ ಮಾಡಿ ಅಮ್ಮನವರಿಗೆ ಅಭಿಷೇಕ, ಉತ್ಸವ, ವಿಶೇಷ ಪೂಜೆ, ಪ್ರಾರ್ಥನೆ ಹೂವಿನ ಅಲಂಕಾರ ಸಲ್ಲಿಸಿದ್ದು, ಶಾಂತಿ ಮತ್ತು ಸಮೃದ್ಧಿಗಾಗಿ ಗಣಪತಿ ಹೋಮ, ದೇವಿಯ ಧಾರ್ಮಿಕ ಉಪನ್ಯಾಸ ಮತ್ತು ಕೀರ್ತನೆ ದೇವಿ ಸ್ತುತಿ ಹಾಗು ಭಜನೆ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಗುರುವಾರ ಓಕಳಿ ಉತ್ಸವಕ್ಕೆ ಸರ್ವ ಭಕ್ತಾದಿಗಳು ಬಂದು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.ಕಾರ್ಯದರ್ಶಿ ಬಿ ,ಡಿ ಅಶೋಕ್ ಮಾತನಾಡಿ, ವಿಶ್ವದೆಲ್ಲಡೆ ವಾಸವಿ ಜಯಂತಿ ಪ್ರಯುಕ್ತ ತಾಯಿಯವರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ದೇಶದಲ್ಲಿ ಶಾಂತಿ, ನೆಮ್ಮದಿಯಿಂದ ಜನರು ಬಾಳಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ದೇಶ ಸುಭೀಕ್ಷವಾಗಿರಬೇಕು. ನಮ್ಮ ದೇಶದ ಸೈನಿಕರಿಗೆ ತಾಯಿ ಹೆಚ್ಚಿನ ಶಕ್ತಿ ಕೊಟ್ಟು ದೇಶಕ್ಕಾಗಿ ಹೋರಾಡುವ ಛಲ ಎಲ್ಲರಲ್ಲೂ ಬರಬೇಕು ಹಾಗೂ ಅವರ ಕುಟುಂಬದವರಿಗೆ ಹೆಚ್ಚಿನ ಶಕ್ತಿ ನೀಡಲಿ ಎಂದು ನಮ್ಮ ಸಮಾಜದ ಬಾಂಧವರು ಪ್ರಾರ್ಥಿಸಿದ್ದು, ಆ ತಾಯಿಯ ಕೃಪೆ ಎಲ್ಲರ ಮೇಲಿರಲಿ ಎಂದರು.
ಈ ಸಂದರ್ಭದಲ್ಲಿ ಬಿ ಎನ್ ವಿಶ್ವನಾಥ್ , ನಿರ್ದೇಶಕರಾದ ಬಿ ಎಂ ಸುರೇಶ್, ಬಿ ಜಿ ಪ್ರಶಾಂತ್, ಬಿಕೆ ವೆಂಕಟೇಶ್, ಆನಂದ್ ಸೂರ್ಯನಾರಾಯಣ, ಎನ್ ರಮೇಶ್ ಗುಪ್ತ, ಬಿ ಎಚ್ ಗುರುರಾಜ್, ಬಿಟಿ ಕೃಷ್ಣಕುಮಾರ್, ವಾಸವಿ ವನಿತಾ ಸಂಘದ ಅಧ್ಯಕ್ಷೆ ಜ್ಯೋತಿ ಸುರೇಶ್, ಭಜನಾ ಮಂಡಳಿ ಅಧ್ಯಕ್ಷರಾದ ಮಾಲತಿ ಪ್ರಶಾಂತ್ ಹಾಜರಿದ್ದರು.