ಗಂಗಾವತಿಯ ಆನೆಗೊಂದಿಯಲ್ಲಿ ಫೆಬ್ರವರಿ 8ರಿಂದ ವಿಜಯನಗರ ಉತ್ಸವ

| Published : Feb 08 2024, 01:30 AM IST

ಗಂಗಾವತಿಯ ಆನೆಗೊಂದಿಯಲ್ಲಿ ಫೆಬ್ರವರಿ 8ರಿಂದ ವಿಜಯನಗರ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಧಾರ್ಮಿಕ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವ ಸಮರ್ಪಿತ ಧೈರ್ಯದೊಂದಿಗೆ ಶ್ರೀಕೃಷ್ಣದೇವರಾಯ ಮತ್ತು ರತ್ನಶ್ರೀ ರಾಯರು ಐತಿಹಾಸಿಕ ವಿಜಯನಗರ ಉತ್ಸವ ಆಚರಿಸಲಾಗುತ್ತಿದೆ.

ಗಂಗಾವತಿ: ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಆನೆಗೊಂದಿ ಸಂಸ್ಥಾನದಿಂದ ಫೆ.8ರಿಂದ 18ರವರೆಗೆ ವಿಜಯನಗರ ಉತ್ಸವ ಜರುಗಲಿದೆ ಎಂದು ರಾಜವಂಶಸ್ಥ ಶ್ರೀಕೃಷ್ಣದೇವರಾಯ ಹೇಳಿದರು.ಆನೆಗೊಂದಿಯ ತಮ್ಮನ ನಿವಾಸದಲ್ಲಿ ಉತ್ಸವ ಕುರಿತು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಧಾರ್ಮಿಕ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವ ಸಮರ್ಪಿತ ಧೈರ್ಯದೊಂದಿಗೆ ಶ್ರೀಕೃಷ್ಣದೇವರಾಯ ಮತ್ತು ರತ್ನಶ್ರೀ ರಾಯರು ಐತಿಹಾಸಿಕ ವಿಜಯನಗರ ಉತ್ಸವ ಆಚರಿಸಲಾಗುತ್ತಿದೆ. ಉತ್ಸವದಲ್ಲಿ ಶ್ರೀಕೃಷ್ಣದೇವರಾಯರು ಧರ್ಮ ಉಳಿಸಲು ತೋರಿದ ಬದ್ಧತೆ, ಕಾಳಜಿಗಳ ಜೊತೆಗೆ ವಿಜಯನಗರ ಸಾಮ್ರಾಜ್ಯವು ಭಾರತೀಯ ರಾಜಕೀಯ, ಕಲೆ, ವಾಸ್ತುಶಿಲ್ಪ, ಸಂಗೀತ, ಇತ್ಯಾದಿ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳ ಬಗ್ಗೆ ಗಮನ ಹರಿಸಿ ಸ್ಮರಿಸಲಾಗುತ್ತದೆ ಎಂದರು.ಆನೆಗುಂದಿಯಲ್ಲಿ ಹಿರೇ ದಿವಾನ ದೇವರಾಯರ ಪೂರ್ವಜರ ಮನೆಯನ್ನು ಅತ್ಯಂತ ಶ್ರೀಮಂತವಾಗಿ ಮರುಸ್ಥಾಪಿಸಲಾಗಿದೆ. ನಿವಾಸದಲ್ಲಿ ಗೋಡೆಗಳು ಅತ್ಯಂತ ಆಕರ್ಷಿತವಾಗಿದೆ. ರಾಣಿಯರ ವಸ್ತ್ರ ವಿನ್ಯಾಸಗಳು, ಶಸ್ತ್ರಾಸ್ತ್ರಗಳು, ಪಾತ್ರೆಗಳು, ಛಾಯಾಚಿತ್ರಗಳು, ಬೆಲೆಬಾಳುವ ಕಲಾಕೃತಿಗಳ ವಿಶಿಷ್ಟ ಪ್ರದಶರ್ನ ವೀಕ್ಷಿಸಲು ಜನರಿಗೆ ಅವಕಾಶ ಒದಗಿಸಲಾಗಿದೆ. ಈ ಉತ್ಸವದಲ್ಲಿ ಪಾಲ್ಗೊಳ್ಳವ ಜನರಿಗೆ ವಿಜಯನಗರದ ವೈಭವವನ್ನು ಮತ್ತೊಮ್ಮೆ ಆಸ್ವಾದಿಸಲು ಉತ್ಸವವು ಅವಕಾಶ ಮಾಡಿಕೊಡುತ್ತದೆ ಎಂದರು.ಉತ್ಸವವು ಪ್ರೊ.ವಂಶಿ ಜೂಲೂರಿ, ನಿವೃತ್ತ ನ್ಯಾ.ಚೆಲಮೇಶ್ವರ್, ಶಫಾಲಿ ವೈದ್ಯ, ಚಿತ್ರಾ ಮಾಧವನ್, ಸ್ವಪತಿ ಉಮಾಪತಿ ಆಚಾರ್ಯ ಸೇರಿದಂತೆ ವಿದ್ವಾಂಸರ ಸಂವಾದಗಳ ಸರಣಿ ಒಳಗೊಂಡಿದೆ.ರತ್ನಶ್ರೀ ರಾಯರ ದಕ್ಷ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡ ದೇವರಾಯ ಹೆರಿಟೇಜ್ ವೀಮ್ಸ್ ಉತ್ಸವದಲ್ಲಿ ಅನಾವರಣಗೊಳ್ಳಲಿದೆ ಎಂದರು.ಉತ್ಸವದಲ್ಲಿ ಎರಡು ದಿನ ಸಂಗೀತ ಪಿತಾಮಹ ಪುರಂದರದಾಸರಿಗೆ ನಮನ ಸಲ್ಲಿಸಲಾಗುವುದು. ಫೆ.9, 10ರಂದು ಹಂಪಿಯ ದಸರಾ ಮಂಟಪದಲ್ಲಿ ಅನಾವರಣಗೊಳ್ಳಲಿದೆ. ಸಂಗೀತ ಮಾಂತ್ರಿಕರಿಗೆ ಸಾಮರಸ್ಯದ ಕಾಣಿಕೆ ಅರ್ಪಿಸಲಾಗುತ್ತದೆ. ಫೆ.18ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಈ ಸಂದರ್ಭದಲ್ಲಿ ರತ್ನಶ್ರೀ ರಾಯ ಮಾತನಾಡಿ, 100 ವರ್ಷಗಳ ಹಳೆಯ ರೇಷ್ಮೆ ಸೀರೆಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ಕಾಂಜಿವರಂ, ಗದ್ವಾಲ್ ಸೇರಿದಂತೆ ಪ್ರಸಿದ್ಧ ರೇಷ್ಮೆ ಸೀರೆಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ ಎಂದರು.