ಸುಗ್ಗನಹಳ್ಳಿಗೆ ವೈಟಲ್ ಸ್ಟಾಟರ್ಜಿ ನಿಯೋಗ ಭೇಟಿ

| Published : Nov 23 2024, 01:16 AM IST

ಸಾರಾಂಶ

ರಾಮನಗರ: ವೈಟಲ್ ಸ್ಟಾಟರ್ಜಿ ದೆಹಲಿ ನಿಯೋಗದ ತಂಡ ತಾಲೂಕಿನ ಸುಗ್ಗನಹಳ್ಳಿ ಗ್ರಾಮದ ಆಸ್ಪತ್ರೆ, ಕಾಲೇಜು, ಶಾಲೆ, ಅಂಗಡಿಗಳಿಗೆ ಭೇಟಿ ನೀಡಿ ತಂಬಾಕು ಮುಕ್ತ ಕಾರ್ಯಕ್ರಮದ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಿತು.

ರಾಮನಗರ: ವೈಟಲ್ ಸ್ಟಾಟರ್ಜಿ ದೆಹಲಿ ನಿಯೋಗದ ತಂಡ ತಾಲೂಕಿನ ಸುಗ್ಗನಹಳ್ಳಿ ಗ್ರಾಮದ ಆಸ್ಪತ್ರೆ, ಕಾಲೇಜು, ಶಾಲೆ, ಅಂಗಡಿಗಳಿಗೆ ಭೇಟಿ ನೀಡಿ ತಂಬಾಕು ಮುಕ್ತ ಕಾರ್ಯಕ್ರಮದ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಿತು.

ವೈಟಲ್ಸ್ ಸ್ಟಾರ್ಟಜೀಸ್ ದೆಹಲಿ ನಿಯೋಗದ ಮುಖ್ಯಸ್ಥರಾದ ನ್ಯೂಯಾರ್ಕ್ ಪ್ರತಿನಿಧಿ ಡಾ.ಆಶೀಶ್ ಕುಮಾರ್ ಪಾಂಡೆ, ಡಾ.ಅಮಿತ್, ಡಾ.ಪುನೀತ್ ಅವರಿದ್ದ ನಿಯೋಗ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿಗೆ ಆಗಮಿಸಿತು. ಬಳಿಕ ಆಸ್ಪತ್ರೆ, ಶಾಲಾ ಕಾಲೇಜು ಹಾಗೂ ಅಂಗಡಿಗಳಿಗೆ ಭೇಟಿ ನೀಡಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕ ಪ್ರಭಾಕರ್, ಮನೋತಜ್ಞರಾದ ಚಂದ್ರಶೇಖರ್, ಫಯಾಜ್, ರಾಮನಗರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತಾ, ರೋಟರಿ ಸಿಟಿ ಅಧ್ಯಕ್ಷರಾದ ಶ್ರೀಧರ್, ಗ್ರಾಪಂ ಅಧ್ಯಕ್ಷೆ ಅರ್ಪಿತಾ, ಉಪಾಧ್ಯಕ್ಷ ಚಿಕ್ಕಸ್ವಾಮಿ, ಕಾರ್ಯದರ್ಶಿ ಲಕ್ಷ್ಮಿದೇವಮ್ಮ, ಸದಸ್ಯರಾದ ಮುನಿರತ್ನ, ಗುರುಲಿಂಗಯ್ಯ, ಪ್ರೇಮ, ಮಲ್ಲೇಶ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸುಗ್ಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಸಿಬ್ಬಂದಿ ಹಾಜರಿದ್ದರು.

22ಕೆಆರ್ ಎಂಎನ್ 6.ಜೆಪಿಜಿ

ರಾಮನಗರ ತಾಲೂಕಿನ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ವೈಟಲ್ ಸ್ಟಾಟರ್ಜಿ ದೆಹಲಿ ನಿಯೋಗದ ತಂಡ ಭೇಟಿ ನೀಡಿತ್ತು.