ಸಾರಾಂಶ
-ಲಿಂಗಸುಗೂರಲ್ಲಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಯವರಿಗೆ
---ಕನ್ನಡಪ್ರಭ ವಾರ್ತೆ ಲಿಂಗಸುಗೂರು
ನಾರಾಯಣಪುರ ಬಲದಂಡೆ ನಾಲೆ, ರಾಂಪೂರ ಏತ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ಏಪ್ರಿಲ್ 20ರವರೆಗೆ ನೀರು ಹರಿಸಬೇಕು ಇಲ್ಲದೇ ಹೋದರೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಸೋಮವಾರ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.ಈಗಾಗಲೆ ಕೃಷ್ಣಾನದಿ ಬಲದಂಡೆ ನಾಲೆ, ರಾಂಪೂರ ಏತ ನೀರಾವರಿ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬೇಸಿಗೆ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ, ಬಿತ್ತನೆ ಮಾಡಿದ ಬೆಳೆಗಳು ಕೈಗೆ ಬರಲು ವಾರಬಂದಿಯ ಪ್ರಕಾರ ಏಪ್ರಿಲ್ 20ರ ವರೆಗೆ ನೀರು ಹರಿಸುವ ಕುರಿತು ಮಾರ್ಚ 7ರ ಒಳಗಾಗಿ ಲಿಖಿತ ಭರವಸೆ ನೀಡಬೇಕು. ಇಲ್ಲದೇ ಹೋದರೆ ಗುರುಗುಂಟಾದ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ 9ರಂದು ಗುರುಗುಂಟಾ ಬಸ್ ನಿಲ್ದಾಣದಿಂದ ಬಸವಣ್ಣನ ದೇವಸ್ಥಾನದ ವರೆಗೆ ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಲಾಗುವುದು. ಇದಕ್ಕೂ ಭರವಸೆ ಈಡೇರಿಸದಿದ್ದರೆ 10ರಂದು ಗುರುಗುಂಟಾದಿಂದ ಲಿಂಗಸುಗೂರು ಸಹಾಯಕ ಆಯುಕ್ತರ ಕಚೇರಿಯ ವರೆಗೂ 100 ಟ್ಯಾçಕ್ಟರ್ಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು, ಬೆಳೆಗಳು ನೀರು ಹರಿಸದೇ ಹೋದರೆ 11ರಂದು ಗುರುಗುಂಟಾದ ರಾಷ್ಟ್ರೀಯ ಹೆದ್ದಾರಿ 150(ಎ) ಸಂಪೂರ್ಣ ಬಂದ್ ಮಾಡಿ ಹೋರಾಟ ಮಾಡಲಾಗುವುದು. ಆಡಳಿತ ರೈತರ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಅಮರಣಾಂತ ಉಪವಾಸ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಈ ವೇಳೆ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಜಾಗೀರನಂದಿಹಾಳ, ತಾಲೂಕ ಅಧ್ಯಕ್ಷ ದುರ್ಗಾಪ್ರಸಾದ, ಪ್ರಧಾನ ಕಾರ್ಯದರ್ಶಿ ಬಸವರಾಜ ಅಂಗಡಿ, ಈರನಗೌಡ, ರಾಮಪ್ಪ, ಬಸಣ್ಣ ಕೋಠಾ, ಮಹ್ಮದ್ ಗೌಸ್, ಆದಪ್ಪ ರಾಯದುರ್ಗ, ಲಚಮಪ್ಪ, ಭಾಷಾಸಾಬ, ತಿಪ್ಪಣ್ಣ ಹವಾಲ್ದಾರ, ಇಮಾಮ ಹುಸೇನ್, ಬಸವ ಗೌಡೂರು, ಹನುಮಂತ ಯರಜಂತಿ, ಹೊಳೆಯಪ್ಪ. ಮಲ್ಲಪ್ಪ, ನಾಗಪ್ಪ ಕರಡಿ ಸೇರದಂತೆ ಇದ್ದರು.------------------
03ಕೆಪಿಎಲ್ಎನ್ಜಿ03 : ಲಿಂಗಸುಗೂರಲ್ಲಿ ರೈತರು ಏಪ್ರಿಲ್ 20ರ ವರೆಗೆ ಬಲದಂಡೆ ನಾಲೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಆಗ್ರಹಿಸಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಯವರಿಗೆ ಮನವಿ ಸಲ್ಲಿಸಿದರು.