ವಿಶ್ವದಲ್ಲೇ ಶ್ರೇಷ್ಠತೆ ಪಡೆದಿರುವ ಸಂವಿಧಾನ ನಮ್ಮದು: ಸಂಜೀವಕುಮಾರ ನೀರಲಗಿ

| Published : Jan 30 2024, 02:03 AM IST

ವಿಶ್ವದಲ್ಲೇ ಶ್ರೇಷ್ಠತೆ ಪಡೆದಿರುವ ಸಂವಿಧಾನ ನಮ್ಮದು: ಸಂಜೀವಕುಮಾರ ನೀರಲಗಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸಿದೆ. ಅದರಡಿ ಬದುಕು ಕಟ್ಟಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ನಗರದ ಹೊರವಲಯದಲ್ಲಿರುವ ವೀರಸೌಧದಲ್ಲಿ ಗಣರಾಜ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವದಲ್ಲೇ ಶ್ರೇಷ್ಠತೆ ಪಡೆದಿರುವ ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸಿದೆ. ಅದರಡಿ ಬದುಕು ಕಟ್ಟಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ. ಜೊತೆಗೆ ಸಂವಿಧಾನ ರಚನೆಗೆ ಶ್ರಮಿಸಿದವರನ್ನು ಮತ್ತು ದೇಶಕ್ಕಾಗಿ ತಮ್ಮ ಜೀವನ ಮುಡಿಪಿಟ್ಟ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕಿದೆ ಎಂದರು.

ಮೈಲಾರ ಮಹಾದೇವಪ್ಪನವರ ಮೊಮ್ಮಗ ಎಚ್.ಎಸ್. ಮಹಾದೇವ, ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟಿ ವಿ.ಎನ್. ತಿಪ್ಪನಗೌಡ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ಪರಮೇಶಪ್ಪ ಮೈಲಾರ, ಎಸ್.ಎನ್. ತಿಪ್ಪನಗೌಡ್ರ, ಮೋಟೆಬೆನ್ನೂರಿನ ಮೈಲಾರ ಮಹಾದೇವ ಪ್ರೌಢಶಾಲೆ ಮತ್ತು ನವೋದಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಇದ್ದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ:

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ೭೫ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಜಿಲ್ಲಾ ಉಪಾಧ್ಯಕ್ಷರಾದ ಸೌಭಾಗ್ಯಮ್ಮ ಹಿರೇಮಠ, ನಗರ ಮಂಡಲದ ಅಧ್ಯಕ್ಷ ಗಿರೀಶ್ ತುಪ್ಪದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ್ ಹೊಸಳ್ಳಿ, ರುದ್ರೇಶ ಚನ್ನಣ್ಣನವರ, ಜಿಲ್ಲಾ ಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಜಿಲ್ಲಾ ಖಜಾಂಜಿ ಬಸವರಾಜ್ ಮಾಸೂರು, ನಂಜುಂಡೇಶ್ವ ಕಳ್ಳೇರ, ಮಂಜುಳಾ ಕರಬಸಮ್ಮನವರ, ಲತಾ ಗುಂಡೇನಹಳ್ಳಿ, ಪುಷ್ಪ ಚಕ್ರಸಾಲಿ, ಪಾರ್ವತಿ ಪಾಟೀಲ್ ಇತರರು ಇದ್ದರು.

ಶ್ರೇಯಸ್ ಪ್ಯಾರಾ ಮೇಡಿಕಲ್ ಕಾಲೇಜ್:

ನಗರದ ಹಾನಗಲ್ಲ ರಸ್ತೆಯಲ್ಲಿರುವ ಶ್ರೇಯಸ್ ಪ್ಯಾರಾ ಮೇಡಿಕಲ್ ಕಾಲೇಜ್ ಮತ್ತು ಶ್ರೇಯಸ್ ಪ್ರಾಥಮಿಕ ಶಾಲೆಯಲ್ಲಿ ೭೫ನೇ ಗಣರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರೆವೇರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಹಿರಿಯ ವಕೀಲ ಎಸ್.ಡಿ. ಮಳಲಿ ಸಂವಿಧಾನದ ಪರಿಚಯ ಜೊತೆಗೆ ಅಂಬೇಡ್ಕರ್‌ ಕೊಡುಗೆಯನ್ನು ತಿಳಿಸಿದರು. ಕಾರ್ಯಾಕ್ರಮದ ಅಧ್ಯಕ್ಷೆಯನ್ನು ಡಾ. ತಿಪ್ಪೇಸ್ವಾಮಿ ಹೊಸಮನಿ ವಹಿಸಿದ್ದರು. ಕಾರ್ಯಕ್ರಮಕ್ಕೆ ಸಂಸ್ಥೆಯ ಆಡಳಿತಾಧಿಕಾರಿ ರೇಣುಕಾಪ್ರಸಾದ ಹೊಸಮನಿ, ಶಿವಪ್ರಸಾದ ಹೊಸಮನಿ, ಶ್ರೇಯಸ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಬಿ.ಎಂ. ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್:

ನಗರದ ಹೊರವಲಯದಲ್ಲಿರುವ ಬಿ.ಎಂ. ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವಣದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಕನಕಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಪ್ರೊ. ಮಾ. ನಾಗರಾಜ ನೆರವೇರಿಸಿದರು.

ಶಾಲೆಯ ಪ್ರಾಂಶುಪಾಲ ಗಣೇಶ ಎಂ. ಮಾತನಾಡಿದರು. ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಭಾಷಣ, ಹಾಡು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶ್ರೀಶಕ್ತಿ ತೆರೆದ ತಂಗುದಾಣದಲ್ಲಿ:

ನಗರದ ಶ್ರೀಶಕ್ತಿ ತೆರೆದ ತಂಗುದಾಣದಲ್ಲಿ ಎಸ್‌ಎಫ್‌ಐ ಜಿಲ್ಲಾ ಘಟಕದ ಆಶ್ರಯದಲ್ಲಿ ೭೫ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಈ ವೇಳೆ ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಪರಿವರ್ತನಾ ಜನಾಂದೋಲನ ಸಂಘಟನೆಯ ಹಸೀನಾ ಹೆಡಿಯಾಲ. ಶ್ರೀಶಕ್ತಿ ತೆರೆದ ತಂಗುದಾಣದ ಮುಖ್ಯಸ್ಥರಾದ ಪುಟ್ಟಪ್ಪ ಹರವಿ, ಎಸ್‌ಎಫ್‌ಐ ಮುಖಂಡ ರಾಹುಲ್ ಕಡೆಮನಿ, ಸಿಬ್ಬಂದಿ ಮಂಗಳಾ ಎಸ್., ಪಾರ್ವತಿ ಲಮಾಣಿ, ಅಶ್ವಿನಿ ಎಚ್., ರೂಪ ಎಸ್., ವಿದ್ಯಾರ್ಥಿಗಳಾದ ಮೋಹನ್ ಹುಂಬಿ, ಜೀವನ್ ಎಸ್.ಎಚ್., ಸುದೀಪ್ ಹೆಳವರ, ಸುರೇಶ್ ದುರ್ಗಮುರ್ಗಿ, ಮುತ್ತು ಎಸ್. ಪಾಲ್ಗೊಂಡಿದ್ದರು.