ಸಾರಾಂಶ
ರಾಮನಗರ: ಬಿಡದಿ ಪಟ್ಟಣದ ಹಲವು ವಾರ್ಡುಗಳಿಗೆ ಭೇಟಿ ನೀಡಿದ ಲೋಕಾಯುಕ್ತ ಎಸ್ಪಿ ಸ್ನೇಹಾ ತ್ಯಾಜ್ಯ ವಿಲೇವಾರಿ ಸಮಸ್ಯೆ ನಿವಾರಣೆಗೆ ಒಂದು ವಾರದ ಗಡುವು ನೀಡಿದರು.
ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್ಪಿ ಸ್ನೇಹಾ, ಪುರಸಭೆ ಅಧ್ಯಕ್ಷ ಹರಿಪ್ರಸಾದ್ ಹಾಗೂ ಅಧಿಕಾರಿಗಳೊಂದಿಗೆ ಬುಧವಾರ ಬೆಳಿಗ್ಗೆ ಹಲವು ವಾರ್ಡುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೆಂಚನಕುಪ್ಪೆ ವಾರ್ಡ್, ಪೊಲೀಸ್ ಕ್ವಾಟ್ರಸ್ ರಸ್ತೆ, ಯೋಗೇಶ್ವರ್ ಲೇಔಟ್, ರೈಲು ನಿಲ್ದಾಣ ರಸ್ತೆ, ಬೆಂಗಳೂರು–ಮೈಸೂರು ರಸ್ತೆ, ಮಾರುಕಟ್ಟೆ ಪ್ರದೇಶ, ಮುಖ್ಯರಸ್ತೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಸ್ನೇಹಾ, ತ್ಯಾಜ್ಯ ಸಮಸ್ಯೆ ಕುರಿತು ಸ್ಥಳೀಯ ನಿವಾಸಿಗಳಿಂದಲೂ ಅಹವಾಲು ಆಲಿಸಿದರು. ಪುರಸಭೆಯ ಕಸ ಸಂಗ್ರಹಣಾ ವಾಹನಗಳು ನಿತ್ಯ ಬಂದು ಕಸ ಸಂಗ್ರಹಿಸುತ್ತಿವೆಯೇ ಎಂದು ಪ್ರಶ್ನಿಸಿ ಉತ್ತರ ಪಡೆದರು.
ಈ ವೇಳೆ ಬಡಾವಣೆ ನಿವಾಸಿಗಳು ನಿತ್ಯ ವಾಹನ ಬರುತ್ತದೆ ಎಂದರೆ, ಉಳಿದವರು, ಎರಡು ದಿನಕ್ಕೊಮ್ಮೆ ಬರುತ್ತದೆ ಎಂದು ಪ್ರತಿಕ್ರಿಯಿಸಿದರು. ಆಗ ಸ್ನೇಹಾ, ವಾಹನ ಸರಿಯಾಗಿ ಬರದಿದ್ದರೆ ಸ್ಥಳೀಯರು ರಸ್ತೆ ಬದಿಗೆ ಅಥವಾ ಖಾಲಿ ನಿವೇಶನಕ್ಕೆ ಕಸ ಎಸೆಯುತ್ತಾರೆ. ಹಾಗಾಗಿ, ಕಸ ಎಸೆಯುವ ವಾಹನಗಳು ನಿತ್ಯ ಬಂದು ಕಸ ಸಂಗ್ರಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ನಿವೇಶನ ಮಾಲೀಕರಿಗೆ ದಂಡ ವಿಧಿಸಿ:
ಪಟ್ಟಣದ ಕೆಲವೆಡೆ ಖಾಲಿ ನಿವೇಶನಗಳು ಕಸದ ತಿಪ್ಪೆಗಳಾಗಿದ್ದು, ಗಿಡಗಂಟಿ ಬೆಳೆದಿರುವುದನ್ನು ಗಮನಿಸಿದ ಸ್ನೇಹಾ, ಪಟ್ಟಣದ ವ್ಯಾಪ್ತಿಯಲ್ಲಿ ಅಂತಹ ಖಾಲಿ ನಿವೇಶನಗಳನ್ನು ಗುರುತಿಸಿ, ಸೂಕ್ತ ನಿರ್ವಹಣೆ ಮಾಡಿಕೊಳ್ಳುವಂತೆ ಮಾಲೀಕರಿಗೆ ನೋಟಿಸ್ ನೀಡಬೇಕು. ಅದಕ್ಕೂ ಬಗ್ಗದಿದ್ದರೆ ದಂಡ ವಿಧಿಸಬೇಕು ಎಂದು ಸೂಚಿಸಿದರು.ಪುರಸಭೆಯ ಪರಿಸರ ಎಂಜಿನಿಯರ್ ನಮಸ್ಮೃತ, ಆರೋಗ್ಯ ನಿರೀಕ್ಷಕಿ ರೂಪಾ ಹಾಗೂ ಕಂದಾಯ ಅಧಿಕಾರಿ ಗೋವಿಂದರಾಜು ಇದ್ದರು.
ಕೋಟ್...........ಪಟ್ಟಣದಲ್ಲಿ ತ್ಯಾಜ್ಯದ ಸಮಸ್ಯೆ ಕುರಿತು ಸಾರ್ವಜನಿಕ ದೂರುಗಳು ಬಂದಿದ್ದರಿಂದ ಸ್ಥಳ ಪರಿಶೀಲನೆ ನಡೆಸಿದೆವು. ಹಲವು ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದಲೂ ಮಾಹಿತಿ ಪಡೆದಿದ್ದೇವೆ. ಸಮಸ್ಯೆ ಬಗೆಹರಿಸಲು ಪುರಸಭೆ ಕ್ರಮ ಕೈಗೊಳ್ಳಲಿದೆ. ಸಮಸ್ಯೆ ಬಗೆಹರಿಸಲು ಮತ್ತಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇನೆ.
-ಸ್ನೇಹಾ, ಲೋಕಾಯುಕ್ತ ಎಸ್ಪಿ15ಕೆಆರ್ ಎಂಎನ್ 7.ಜೆಪಿಜಿ
ಬಿಡದಿ ಪಟ್ಟಣದಲ್ಲಿ ಲೋಕಾಯುಕ್ತ ಎಸ್ಪಿ ಸ್ನೇಹಾ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದರು.