ವರ್ತಕರ ವಿಶ್ವಾಸವನ್ನು ಗಳಿಸುವುದು ಅತ್ಯಂತ ಮುಖ್ಯ. ಅದೇ ವಿತರಕರ ದೊಡ್ಡ ಬಂಡವಾಳ ಆಗಿರುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ಎಂ.ಸಿ. ದೇವರಾಜ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವರ್ತಕರ ವಿಶ್ವಾಸವನ್ನು ಗಳಿಸುವುದು ಅತ್ಯಂತ ಮುಖ್ಯ. ಅದೇ ವಿತರಕರ ದೊಡ್ಡ ಬಂಡವಾಳ ಆಗಿರುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ಎಂ.ಸಿ. ದೇವರಾಜ್ ಹೇಳಿದರು.ಜಿಲ್ಲಾ ವಿತರಕರ ಸಂಘದ ಮೂರನೇ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಇಂದಿನ ವ್ಯಾಪಾರ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದ್ದು, ಡಿಜಿಟಲ್ ವ್ಯಾಪಾರ, ಆನ್ಲೈನ್ ಸ್ಪರ್ಧೆ, ಬೆಲೆ ಏರಿಳಿತ, ಹೊಸ ಸರ್ಕಾರಿ ನಿಯಮಗಳು ಹಾಗೂ ಮಾರುಕಟ್ಟೆಯ ಅನಿಶ್ಚಿತತೆಗಳ ನಡುವೆ ವಿತರಕರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸಂಘ ಇನ್ನಷ್ಟು ಬಲಿಷ್ಠವಾಗಿ ಕೆಲಸ ಮಾಡಬೇಕು ಎಂದರು.ವ್ಯಾಪಾರದಲ್ಲಿ ಪ್ರಾಮಾಣಿಕತೆ, ವರ್ತಕರ ವಿಶ್ವಾಸ ಗಳಿಸುವುದು ದೊಡ್ಡ ಬಂಡವಾಳ ಆಗಿದೆ. ನಿಷ್ಠೆ, ಗುಣಮಟ್ಟ ಮತ್ತು ಸಮಯ ಪಾಲನೆಯಿಂದ ವ್ಯವಹಾರ ನಡೆಸಿದರೆ ವ್ಯಾಪಾರದಲ್ಲಿ ಯಶಸ್ಸು ಗಳಿಸಬಹುದು. ಸಂಘದ ಗೌರವವು ಹೆಚ್ಚುತ್ತದೆ ಎಂದು ತಿಳಿಸಿದರು.ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ, ವಿತರಕರ ಸಂಘದ ಗೌರವಾಧ್ಯಕ್ಷ ಬಿ. ಗೋಪಿನಾಥ್ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿತರಕರ ದಿನಾಚರಣೆಯನ್ನು ಶಿವಮೊಗ್ಗದಲ್ಲೇ ಮೊದಲ ಆಚರಿಸಲು ಆರಂಭಿಸಿದ್ದು. ಎರಡು ವರ್ಷದಿಂದ ವಿತರಕರ ಸಂಘದಿಂದ ವಿತರಕರ ದಿನಾಚರಣೆ, ರಕ್ತದಾನ ಶಿಬಿರ, ಪ್ರತಿಭಾ ಪುರಸ್ಕಾರ, ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ, ಮಾಜಿ ಅಧ್ಯಕ್ಷರಿಗೆ ಗೌರವ ಸಮರ್ಪಣೆ, ದೇಣಿಗೆ ನೀಡಿದಂತಹ ಸದಸ್ಯರಿಗೆ ಗೌರವ ಸಮರ್ಪಣೆ ಹೀಗೆ ಹಲವಾರು ವಿನೂತನ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಯೋಜಿತ ಸಂಘಗಳಲ್ಲಿ ಮುಂಚೂಣಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಶಂಶಿಸಿದರು.ಮಾಜಿ ಅಧ್ಯಕ್ಷರಾದ ನಟರಾಜ್, ಹಾಜಿ ಇಕ್ಬಾಲ್ ಶೆಟ್, ಎ.ಎನ್.ಪ್ರಕಾಶ್ ಹಾಗೂ ನಿಕಟಪೂರ್ವ ಅಧ್ಯಕ್ಷ ಶಿವರಾಜ್ ಉಡುಗಣಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.ವಿತರಕರ ಸಂಘದ ಉಪಾಧ್ಯಕ್ಷ ಬದರಿನಾಥ್ ಬಿ ಆರ್, ಕಾರ್ಯದರ್ಶಿ ಗಿರೀಶ್ ಒಡೆಯರ್, ಗೌರವ ಕಾರ್ಯದರ್ಶಿ ಶ್ರೀನಿವಾಸ್ ಕೆ ಎಸ್, ಖಜಾಂಚಿ ಚಂದ್ರಶೇಖರ್ ಕೆ ಕೆ, ನಿಕಟಪೂರ್ವ ಅಧ್ಯಕ ಶಿವರಾಜ್ ಉಡುಗಣಿ, ವಿಶೇಷ ಅಹ್ವಾನಿತರಾದ ಹಾಜಿ ಸುಲೇಮಾನ್, ನಿರ್ದೇಶಕರಾದ ಮೋಹನ್, ನವೀನ್ ಜವಳಿ, ಮಹಾರುದ್ರಪ್ಪ, ಕುಮಾರ್, ಮೊಹಮ್ಮದ್ ಇಕ್ಬಾಲ್, ಸುರೇಂದ್ರನಾಥ್, ರಾಘವೇಂದ್ರ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.---------
ಪೊಟೋ: 06ಎಸ್ಎಂಜಿಕೆಪಿ08