ಸಾರಾಂಶ
ಅಷ್ಟೋತ್ತರ, ಪಂಚಾಮೃತ, ವಿಶೇಷ ಅಲಂಕಾರ ಮತ್ತು ವೀರನಾರಾಯಣ ದೇವಸ್ಥಾನದಿಂದ ಮಹಾರಥೋತ್ಸವ ಭಕ್ತರ ಸಂಭ್ರಮದ ಮಧ್ಯೆ ವಿಜೃಂಭಣೆಯಿಂದ ಜರುಗಿತು
ಗದಗ:
ಕಲಿಯುಗದ ಕಾಮಧೇನು ಶ್ರೀಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವದಂಗವಾಗಿ ಗುರುವಾರ ನಗರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಉತ್ತರಾಧನೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿತು. ಬೆಳಗ್ಗೆ ಅಷ್ಟೋತ್ತರ, ಪಂಚಾಮೃತ, ವಿಶೇಷ ಅಲಂಕಾರ ಮತ್ತು ವೀರನಾರಾಯಣ ದೇವಸ್ಥಾನದಿಂದ ಮಹಾರಥೋತ್ಸವ ಭಕ್ತರ ಸಂಭ್ರಮದ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಆರಾಧನೆ ನಿಮಿತ್ತ ಕಳೆದ ಮಂಗಳವಾರದಿಂದ ಮೂರು ದಿನಗಳ ಕಾಲ ಪ್ರಥಮಾರಾಧನೆ, ಮಧ್ಯಾರಾಧನೆ ನಿಮಿತ್ತ ಭಜನೆ,ವಿ ಶೇಷ ಪೂಜೆ, ಪಾರಾಯಣ ಹಾಗೂ ಉಪನ್ಯಾಸ ಜರುಗಿದವು.