ಹೂವಿನಹಡಗಲಿ: ಯೋಗದಿಂದ ಆರೋಗ್ಯ ವೃದ್ಧಿಯಾಗುವ ಜತೆಗೆ ದೈಹಿಕ ಸಮತೋಲನ, ಮಾನಸಿಕ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ಮಲ್ಲಿಗೆ ಯೋಗ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ್ ಹೇಳಿದರು.

ಪಟ್ಟಣದ ಜಿಬಿಆರ್ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಮಲ್ಲಿಗೆ ಯೋಗ ಚಾರಿಟೇಬಲ್ ಟ್ರಸ್ಟ್ ಜಿಬಿಆರ್ ಕಾಲೇಜು ಸಹಯೋಗದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ವಿಶ್ವದ ಅನೇಕ ದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ನಿತ್ಯ ಯೋಗ ಮಾಡುವುದರಿಂದ ಉತ್ತಮ ಶಾರೀರಿಕ ದೃಢತೆ ಹಾಗೂ ಆರೋಗ್ಯದ ಹಿತ ಕಾಪಾಡಲು ಸಹಕಾರಿಯಾಗುತ್ತದೆ. ದೈನಂದಿನ ಬದುಕಿನಲ್ಲಿ ಯೋಗ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಸರ್ವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ, ಯೋಗ ಸಾಧಕರಾದ ಲೋಕೇಶ್ ತಿಪ್ಪಾಪುರ, ನಟರಾಜ್ ಬಾದಾಮಿ, ಈಟಿ ಹನುಮೇಶ್, ಡಾ.ಆನಂದ್, ಶಿವಮೂರ್ತೆಪ್ಪ, ಎ.ಗುರುಸಿದ್ದಪ್ಪ, ಗಂಗಪ್ಪ ಇತರರು ಸಾಮೂಹಿಕ

ಯೋಗಾಭ್ಯಾಸ ಪ್ರದರ್ಶನದ ಮೂಲಕ ಶಾಲಾ ಕಾಲೇಜು ಮಕ್ಕಳಿಗೆ ಸಾರ್ವಜನಿಕರಿಗೆ ತರಬೇತಿ ನೀಡಿದರು.


ತಾಲೂಕು ದೈಹಿಕ ಪರಿವೀಕ್ಷಕ ರಫಿ ಅಹಮದ್ ಖವಾಸ್, ಜಿಬಿಆರ್ ಪಿಯು ಕಾಲೇಜು ಪ್ರಾಂಶುಪಾಲ ಅಮರೇಗೌಡ ಪಾಟೀಲ್, ಪಟ್ಟಣ ಸಿ ಆರ್ ಪಿ ವೀರೇಶ್ ಬಗಲಿ, ಸುರೇಶ ಅಂಗಡಿ, ಮಹಮದ್ ರಫಿ, ಶ್ರೀಕಾಂತ್, ಹೇಮಾವತಿ ಜೈನ್, ಎಚ್.ಕಾಂತೇಶ್, ಕೆ.ಬಸವರಾಜ, ದೈಹಿಕ ಶಿಕ್ಷಕ ಸ್ವಾಮಿನಾಥ ರಾಮಸ್ವಾಮಿ, ಯಂಕಾನಾಯ್ಕ, ಲಲಿತಾ, ನಿಂಗಪ್ಪ, ಮಂಜುನಾಥ ಇದ್ದರು.

ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕರು ವಿವಿಧ ಯೋಗಾಸನ ಪ್ರದರ್ಶಿಸಿದರು. ಕೌಶಲ್ಯಬಾಯಿ, ದ್ವಾರಕೀಶ್ ರೆಡ್ಡಿ ಎಸ್ ನಿರ್ವಹಿಸಿದರು.