ಸಾರಾಂಶ
ಹರಪನಹಳ್ಳಿ: ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಹರಪನಹಳ್ಳಿ ತಾಲೂಕು, ಬ್ಲಾಕ್ ಮತ್ತು ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಪಟ್ಟಣದ ಐ.ಬಿ. ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ಕೇಂದ್ರ ಸರ್ಕಾರ ಗ್ಯಾಸ್ ಬೆಲೆ ಏರಿಸಿ ದೇಶದ ಬಡಜನರ ಬದುಕಿಗೆ ಕೊಳ್ಳೆ ಇಟ್ಟಿದ್ದು, ಈ ಮೂಲಕ ಎಲ್ಲ ಕ್ಷೇತ್ರದಲ್ಲೂ ತಮ್ಮಿಚ್ಚೆಯಂತೆ ಬೆಲೆ ಏರಿಕೆ ಮಾಡಿ ದೇಶದ ಬಹುಸಂಖ್ಯಾತ ಕೂಲಿ ಕಾರ್ಮಿಕರು ರೈತಾಪಿ ವರ್ಗ, ದೀನ ದಲಿತ ವರ್ಗದ ಬದುಕಿಗೆ ನೀರು ಎರೆಚಿರುವ ಕೇಂದ್ರ ಸರ್ಕಾರದ ನಡೆ ತೀವ್ರ ಖಂಡನೀಯ ಎಂದು ಕಾರ್ಯಕರ್ತರು ಆರೋಪಿಸಿದರು.
ಈ ಕೂಡಲೆ ಏರಿಕೆ ಮಾಡಿರುವ ಬೆಲೆಯನ್ನು ಇಳಿಕೆ ಮಾಡದೇ ಹೋದರೆ ರಾಜ್ಯದ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಜಿಷಾನ್ ಎಂ.ಡಿ. ತಾಲೂಕಾಧ್ಯಕ್ಷ ಚೌಡಪ್ಪ, ಹರಪನಹಳ್ಳಿ ಬ್ಲಾಕ್ ಅಧ್ಯಕ್ಷ ಎಚ್.ಟಿ. ಹನುಮಂತಪ್ಪ, ಉಪಾಧ್ಯಕ್ಷ ಸಿದ್ದನಗೌಡ್ರು ಕೆ, ಹರಪನಹಳ್ಳಿ ಬ್ಲಾಕ್ ಉಪಾಧ್ಯಕ್ಷ ಮನು ಜಿ ಹಾಗೂ ರಾಜಾಸಾಬ್, ಎನ್. ಮಮತ, ಕಾರ್ಯದರ್ಶಿ ರೇಣುಕಾ, ಎನ್.ಎಸ್. ಯು.ಐ ತಾಲೂಕಾಧ್ಯಕ್ಷ ಅಬ್ಬು ಸಾಲೀಯ ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಸಾಧಿಕ್, ವಾಸೀಮ್, ಸೋಮಣ್ಣ, ಶಿವರಾಜ್, ಶಿವು, ವಿಜಯ್ ಮತ್ತು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.