ಶಾಲಾ ಮಕ್ಕಳಿಗೆ ಗಣಿತ ಪಾಠ ಮಾಡಿದ ಡಿಸಿ!
KannadaprabhaNewsNetwork | Published : Nov 03 2023, 12:30 AM IST
ಶಾಲಾ ಮಕ್ಕಳಿಗೆ ಗಣಿತ ಪಾಠ ಮಾಡಿದ ಡಿಸಿ!
ಸಾರಾಂಶ
ಹಾವೇರಿಯಲ್ಲಿ ಜಿಪಂ ಸಿಇಓ ಆಗಿದ್ದ ಶಿಲ್ಪಾನಾಗ್ ಅವರು ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯ ಕಾಮಗಾರಿ ಪರಿಶೀಲನೆ ವೀಕ್ಷಣೆಗೆ ಹೋಗಿ ಕಾರ್ಮಿಕರ ಜೊತೆಗೆ ಬಾಂಡ್ಲಿಯಲ್ಲಿ ಮಣ್ಣು ಹೊತ್ತು ಗಮನ ಸೆಳೆದಿದ್ದರು. ಇದೀಗ ಚಾಮರಾಜನಗರ ಜಿಲ್ಲೆಯ ಕಾಡಲ್ಲಿರುವ ಗ್ರಾಮ ಕೊಂಬುಡಿಕ್ಕಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದ ವೇಳೆ ಮಕ್ಕಳಿಗೆ ಗಣಿತ ಪಾಠ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ ಹಾವೇರಿಯಲ್ಲಿ ಜಿಪಂ ಸಿಇಓ ಆಗಿದ್ದ ಶಿಲ್ಪಾನಾಗ್ ಅವರು ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯ ಕಾಮಗಾರಿ ಪರಿಶೀಲನೆ ವೀಕ್ಷಣೆಗೆ ಹೋಗಿ ಕಾರ್ಮಿಕರ ಜೊತೆಗೆ ಬಾಂಡ್ಲಿಯಲ್ಲಿ ಮಣ್ಣು ಹೊತ್ತು ಗಮನ ಸೆಳೆದಿದ್ದರು. ಇದೀಗ ಚಾಮರಾಜನಗರ ಜಿಲ್ಲೆಯ ಕಾಡಲ್ಲಿರುವ ಗ್ರಾಮ ಕೊಂಬುಡಿಕ್ಕಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದ ವೇಳೆ ಮಕ್ಕಳಿಗೆ ಗಣಿತ ಪಾಠ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಕಾಡಂಚಿನ ಗ್ರಾಮಗಳ ಜನರ ಸಮಸ್ಯೆ ಅಲಿಸಲು ತೆರಳಿದ್ದ ವೇಳೆ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಗುಣಾಕಾರ, ಭಾಗಾಕಾರ ಹೇಳಿಕೊಟ್ಟರು. ಮಹದೇಶ್ವರ ಬೆಟ್ಟ ವ್ಯಾಪ್ತಿಯ ಕಾಡಿನಲ್ಲಿರುವ ಕೊಂಬುಡಿಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆಯ ಬಗ್ಗೆ ಖುದ್ದು ಅವಲೋಕನ ಮಾಡುವ ಮೂಲಕ ಅವರಲ್ಲಿ ಸ್ಪೂರ್ತಿ ತುಂಬಿದರು. ಶಾಲೆಯ ಅಡುಗೆ ಕೋಣೆಗೂ ಧಾವಿಸಿ ಪರಿಶೀಲನೆ ನಡೆಸಿದ ಅವರು ಅಡುಗೆ ಸಹಾಯಕಿಯರ ಕಷ್ಟ, ಸುಖ ಅಲಿಸಿ ಮಕ್ಕಳಿಗೆ ಶುಚಿ,ರುಚಿಯಾದ ಆಹಾರ ತಯಾರಿಸಿಕೊಡುವಂತೆ ತಿಳಿಸಿದರು. ------------ 2ಸಿಎಚ್ಎನ್14 ಮಹದೇಶ್ವರ ಬೆಟ್ಟದ ಕಾಡೊಳಗಿನ ಗ್ರಾಮ ಕೊಂಬುಡಿಕ್ಕಿ ಶಾಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಮಕ್ಕಳಿಗೆ ಗುಣಾಕಾರ ಭಾಗಾಕಾರ ಲೆಕ್ಕ ಕೊಟ್ಟು ಪಾಠ ಮಾಡಿ ಗಮನ ಸೆಳೆದರು.