ಸಾರಾಂಶ
ಕೋಲಾರ : ಕಾಂಗ್ರೆಸ್ ಪಕ್ಷದಲ್ಲಿರುವ ಏನೇ ಗೊಂದಲ, ಭಿನ್ನಮತಗಳಿದ್ದರೂ ಬದಿಗೊತ್ತಿ ಹೈಕಮಾಂಡ್ ಘೋಷಿಸಿರುವ ಅಭ್ಯರ್ಥಿಗಳಿಗೆ ಎಲ್ಲರು ಪ್ರಾಮಾಣಿಕವಾಗಿ ಬದ್ದತೆಯಿಂದ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿ ಕೋಲಾರ ಮೀಸಲು ಕ್ಷೇತ್ರದಲ್ಲಿ ಅಭ್ಯರ್ಥಿ ಗೌತಮ್ರನ್ನು ಜಯಗಳಿಸುವಂತೆ ಮಾಡಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಎಸ್.ಸಿ. ವಿಭಾಗದ ಅಧ್ಯಕ್ಷ ಧರ್ಮಸೇನಾ ಮನವಿ ಮಾಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಎಸ್.ಸಿ. ಘಟಕದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ರಾಜಕಾರಣದಲ್ಲಿ ಏರಿಳಿತಗಳು ಸಹಜವಾದದ್ದು, ಭಿನ್ನ ಮತಗಳು ಅಭಿಪ್ರಾಯಗಳೆಲ್ಲಾವು ಹೈಕಮಾಂಡ್ ಘೋಷಣೆಯ ನಂತರ ಎಲ್ಲವನ್ನು ಬದಿಗೆ ಸರಿಸಿ ಕಾಂಗ್ರೆಸ್ ಮೇಲೆ ನಂಬಿಕೆ ವಿಶ್ವಾಸವಿಟ್ಟು ವ್ಯಕ್ತಿಗಿಂತ ಪಕ್ಷವು ದೊಡ್ಡದು ಎಂಬ ತತ್ವದ ಮೇಲೆ ಕಾರ್ಯ ನಿರ್ವಹಿಸುವಂತಾಗಬೇಕೆಂದು ಕರೆ ನೀಡಿದರು.
ಮುನಿಯಪ್ಪ ಪ್ರಚಾರಕ್ಕೆ ಬರಬೇಕು
ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ಸಂಘಟಿಸಲು ಮತ್ತೆ ಕೆ.ಹೆಚ್.ಮುನಿಯಪ್ಪ ಅವರು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಬರಲೇ ಬೇಕು. ಅವರು ಬಾರದೆ ಕಾಂಗ್ರೇಸ್ ಪಕ್ಷದ ಸಂಘಟನೆ ಪರಿಪೂರ್ಣವಾಗಲು ಅಸಾಧ್ಯ. ಇಂತಹ ಸಂದರ್ಭದಲ್ಲಿ ಕಾಂಗ್ರೇಸ್ ಹೈಕಮಾಂಡ್ ಮಧ್ಯ ಪ್ರವೇಶಿಸಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರು ಆಯ್ಕೆಯಾಗಬೇಕಾದರೆ ಕೆ.ಹೆಚ್.ಮುನಿಯಪ್ಪ ಅವರು ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಕರೆ ತರಲೇ ಬೇಕು. ಅವರು ಬಾರದಿದ್ದಲ್ಲಿ ಸಂಘಟನೆಗೆ ಹೊಡೆತ ಬೀಳುವುದು ಖಚಿತ ಎಂದರು,
ಜಿಲ್ಲಾ ಎಸ್.ಸಿ.ಘಟಕದ ಅಧ್ಯಕ್ಷ ಕೆ.ಜಯದೇವ ಮಾತನಾಡಿ, ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದರೂ ಸಹ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಗೌತಮ್ ಅವರು ಬ್ಲಾಕ್ ಅಧ್ಯಕ್ಷರುಗಳ ಸಭೆ ನಡೆಸಿಲ್ಲ. ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ಸಂಪರ್ಕಿಸುವುದಕ್ಕೆ ಅವಕಾಶ ಮಾಡಿ ಕೊಡ ಬೇಕಾಗಿದೆ ಎಂದು ಸಲಹೆ ನೀಡಿದರು, ಕೋಲಾರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಕೆ.ಹೆಚ್. ಮುನಿಯಪ್ಪ ಅವರನ್ನು ಮುಂದಿಟ್ಟು ಕೊಂಡು ಹೋದರೆ ಮಾತ್ರ ಗೆಲುವು ಸಾಧ್ಯ. ಪ್ರತಿಯೊಬ್ಬರು ತಾವೇ ಕಾಂಗ್ರೇಸ್ ಅಭ್ಯರ್ಥಿಯೆಂದು ಪರಿಗಣಿಸಿ ಚುನಾವಣೆಯಲ್ಲಿ ಹಗಲು ಇರಳು ಶ್ರಮಿಸಿ ಬೂತ್ವಾರು ಸಮಿತಿಗಳನ್ನು ಸಂಘಟಿಸಿ ಕೊಂಡು ಕಾರ್ಯನಿರ್ವಹಿಸ ಬೇಕೆಂದು ಕರೆ ನೀಡಿದರು.
ಸಂವಿಧಾನ ಉಳಿಸಲು ಕಾಂಗ್ರೆಸ್ ಗೆಲ್ಲಿಸಿ
ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ ಮಾತನಾಡಿ, ಲೋಕಸಭಾ ೮ ವಿಧಾನ ಸಭಾ ಕ್ಷೇತ್ರದಲ್ಲೂ ಕಾಂಗ್ರೇಸ್ ವಾತವರಣ ಇದೆ. ಅಂತರಿಕಾ ವಿಚಾರಗಳನ್ನು ಬದಿಗೆ ಸರಿಸಿ ಪಕ್ಷದ ಪರವಾಗಿ ಕಾರ್ಯನಿರ್ವಹಿಸ ಬೇಕಾಗಿದೆ. ಈ ಚುನಾವಣೆಯು ಮಹತ್ವದ್ದಾಗಿದೆ. ಡಾ,ಬಿ.ಆರ್. ಆಂಬೇಡ್ಕರ್ ನೀಡಿರುವಂತ ಸಂವಿಧಾನದ ಅಳಿವು ಉಳಿವು ಪ್ರಶ್ನೆಯಾಗಿದೆ. ಭಾರತದ ದೇಶದ ಸಂರಕ್ಷಣೆಯ ಪ್ರಶ್ನೆಯಾಗಿದೆ ಎಂದರು.
ಕಾಂಗ್ರೇಸ್ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮೀಸಲು ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಸಂವಿಧಾನ ಉಳಿವುಗಾಗಿ ಕಾಂಗ್ರೇಸ್ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಲೇ ಬೇಕಾಗಿದೆ. ಮೀಸಲು ಕ್ಷೇತ್ರದಲ್ಲಿ ಎಸ್.ಸಿ. ಮತ್ತು ಎಸ್.ಟಿ. ಮತಗಳೇ ಪ್ರಧಾನತೆ ಹೊಂದಿದ್ದು ನಿರ್ಣಯಕ ಪಾತ್ರವಹಿಸಲಿದೆ. ಎಲ್ಲರೂ ತಾವೇ ಅಭ್ಯರ್ಥಿಯೆಂದು ಭಾವಿಸಿ ಕೊಂಡು ಕಾಂಗ್ರೇಸ್ನ್ನು ಬಹುಮತದಿಂದ ಆಯ್ಕೆ ಮಾಡ ಬೇಕಾಗಿದೆ ಎಂದು ಕರೆ ನೀಡಿದರು.
ಕಾಂಗ್ರೇಸ್ ಪಕ್ಷದ ಮುಖಂಡರಾದ ಲಾಲ್ ಬಹುದ್ದೂರ್ ಶಾಸ್ರಿ, ಖಾದ್ರಿಪುರ ಬಾಬು, ಗಂಗಮ್ಮಪಾಳ್ಯ ರಾಮಯ್ಯ, ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಕಕ್ಷೆ ರತ್ನಮ್ಮ, ಮಂಜುಳ, ವೀಣಾ, ವಿಜೇಯೇಂದ್ರ, ವೆಂಕಟೇಸ್, ಭರಣಿ, ರಘುನಾಥ್, ಹರೀಶ್ ಬಾಬು ಇದ್ದರು.