ವಸತಿಗೆ ಲಂಚ: ಬಿ.ಆರ್‌.ಪಾಟೀಲ್‌ ಹೇಳಿಕೆ ವಿರುದ್ಧ ಸಚಿವರ ಆಕ್ರೋಶ

| N/A | Published : Jun 22 2025, 01:18 AM IST / Updated: Jun 22 2025, 04:27 AM IST

Congress MLA BR Patil
ವಸತಿಗೆ ಲಂಚ: ಬಿ.ಆರ್‌.ಪಾಟೀಲ್‌ ಹೇಳಿಕೆ ವಿರುದ್ಧ ಸಚಿವರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಲಂಚ ನೀಡಿದವರಿಗಷ್ಟೇ ವಸತಿ ಹಂಚಿಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿರುವ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್‌ ವಿರುದ್ಧ ರಾಜ್ಯ ಸರ್ಕಾರದ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಬೆಂಗಳೂರು :  ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಲಂಚ ನೀಡಿದವರಿಗಷ್ಟೇ ವಸತಿ ಹಂಚಿಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿರುವ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್‌ ವಿರುದ್ಧ ರಾಜ್ಯ ಸರ್ಕಾರದ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌, ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರವಿದೆ ಎಂಬ ಅರ್ಥ ಬರುವಂತೆ ನೀಡಿರುವ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಈ ವಿಚಾರ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು, ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ವಸತಿ ಹಂಚಿಕೆಯಾಗುವಾಗ ಸ್ಥಳೀಯ ಪಂಚಾಯತಿ, ಸಂಸ್ಥೆಗಳು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತದೆ. ಹೀಗಿರುವಾಗ ಫಲಾನುಭವಿಗಳು ಹಣ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬಿ.ಆರ್‌.ಪಾಟೀಲ್‌ ಯಾವ ಉದ್ದೇಶದಿಂದ ಹೇಳಿದ್ದಾರೋ ತಿಳಿದಿಲ್ಲ. ಆದರೆ, ಅವರ ಹೇಳಿಕೆ ಸರಿಯಲ್ಲ. ಅದನ್ನು ನಾನು ಖಂಡಿಸುತ್ತೇನೆ. ನಮ್ಮ ಸರ್ಕಾರದಲ್ಲಿ ಅಂತಹ ವಿಚಾರಗಳಿಲ್ಲ. ಈ ವಿಚಾರವಾಗಿ ನಾನು ಮತ್ತು ಮುಖ್ಯಮಂತ್ರಿ ಅವರು ಬಿ.ಆರ್‌.ಪಾಟೀಲ್‌ ಅವರೊಂದಿಗೆ ಮಾತನಾಡುತ್ತೇವೆ ಎಂದು ಶಿವಕುಮಾರ್‌ ಹೇಳಿದರು.

ಸುಮ್ಮನೆ ಆರೋಪ ಸರಿಯಲ್ಲ:

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಮಾತನಾಡಿ, ವಸತಿ ಇಲಾಖೆಯಲ್ಲಿ ಹಣ ನೀಡಿದವರಿಗೆ ಮಾತ್ರ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಮಾಡಿರುವ ಶಾಸಕ ಬಿ.ಆರ್‌.ಪಾಟೀಲ್‌ ದಾಖಲೆ ನೀಡಬೇಕು. ಸುಮ್ಮನೇ ಆರೋಪ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಭ್ರಷ್ಟಾಚಾರವಿದೆ. ಎಲ್ಲ ಕಾಲದಲ್ಲೂ ಭ್ರಷ್ಟಾಚಾರವಿತ್ತು. ಅದನ್ನು ಇಲ್ಲ ಎಂದು ಹೇಳಲು ಆಗುವುದಿಲ್ಲ. ಅದನ್ನು ತಡೆಯುವುದು ನಮ್ಮ ಜವಾಬ್ದಾರಿ. ಪಾಟೀಲ್‌ ಅವರ ಆರೋಪಕ್ಕೆ ಸಂಬಂಧಿಸಿ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಜೊತೆ ಚರ್ಚಿಸಲಾಗುವುದು. ಇದಕ್ಕೂ ಮೊದಲು ತಾವು ಮಾಡಿದ ಆರೋಪಕ್ಕೆ ಪಾಟೀಲ್‌ ದಾಖಲೆ ನೀಡಬೇಕು ಎಂದು ಒತ್ತಾಯಿಸಿದರು.

ಪಾಟೀಲ್‌ ಹೇಳಿಕೆಯಿಂದ ಪಕ್ಷಕ್ಕೆ ಹಾನಿಯಾಗಿಲ್ಲವೇ ಎಂಬ ಪ್ರಶ್ನೆಗೆ, ಪಾಟೀಲ್‌ ಹೇಳಿಕೆಯಿಂದ ಕಾಂಗ್ರೆಸ್‌ಗೆ ಹಾನಿಯಾಗಿಲ್ಲ. ಕೆಲವು ಕಡೆ ಭ್ರಷ್ಟಾಚಾರವಿದ್ದು ಹೋಗಲಾಡಿಸಬೇಕು. ಕೇಂದ್ರ ಸರ್ಕಾರದಲ್ಲೂ ಭ್ರಷ್ಟಾಚಾರವಿದೆ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದಲ್ಲೂ ಭ್ರಷ್ಟರಿದ್ದಾರೆ. ದಾಳಿ ಮಾಡಿ ಬಳಿಕ ಹಣ ವಸೂಲಿ ಮಾಡುತ್ತಿದ್ದಾರೆ. ಭ್ರಷ್ಟಾಚಾರವನ್ನು ನಿಯಂತ್ರಿಸಬೇಕು ಎಂದು ಹೇಳಿದರು.

 ಗಣಿ ಅಕ್ರಮ ವಿರುದ್ಧ ಕ್ರಮ: ಸಿದ್ದುಗೆ ಎಚ್‌ಕೆಪಿ ಗುದ್ದು

₹1.5 ಲಕ್ಷ ಕೋಟಿ ಸಂಪತ್ತಿನ ಲೂಟಿ ಕೇಸಲ್ಲಿ ಕ್ರಮ ಸಾಲದು

ಸರ್ಕಾರಕ್ಕೆ ಪ್ರಾಮಾಣಿಕತೆ ಇಲ್ಲವೆಂದು ಜನತೆಯ ಆಕ್ರೋಶ

ಪತ್ರದಲ್ಲೇನಿದೆ?ನೀವೇ 320 ಕಿ.ಮೀ ಪಾದಯಾತ್ರೆ ನಡೆಸಿ ಅಂದಿನ ಸರ್ಕಾರಕ್ಕೆ ಸವಾಲು ಹಾಕಿದ ಪ್ರಕರಣವಿದು

ಈ ಕುರಿತು ನನ್ನ ನೇತೃತ್ವದ ಸಂಪುಟ ಉಪ ಸಮಿತಿ 12891 ಗಣಿ ಅಕ್ರಮದ ತನಿಖೆ ನಡೆಸಿದೆಆದರೆ ಈ ಪೈಕಿ ಶೇ.0.02 ಕೇಸಲ್ಲಷ್ಟೇ ತೀರ್ಪು । ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ

ಸರ್ಕಾರದ ಬೊಕ್ಕಸ ವಾಪಸ್ ತರಲು ಕ್ರಮಕೈಗೊಳ್ಳಿ । ಇದಕ್ಕೆ ವಸೂಲಾತಿ ಆಯುಕ್ತರ ನೇಮಿಸಿ

 ಬೆಂಗಳೂರು :  ‘ರಾಜ್ಯದಲ್ಲಿ 2007 ರಿಂದ 20011ರ ನಡುವೆ ಅಕ್ರಮ ಗಣಿಗಾರಿಕೆ ಮೂಲಕ ಸಂಪತ್ತು ಲೂಟಿ ಮಾಡಿದ್ದ ರಾಜಕಾರಣಿಗಳು, ಅಧಿಕಾರಿಶಾಹಿಗಳ ವಿರುದ್ಧ ನಿಮ್ಮ ನೇತೃತ್ವದಲ್ಲಿ 320 ಕಿ.ಮೀ. ಪಾದಯಾತ್ರೆ ನಡೆಸಿ ಸವಾಲು ಹಾಕಲಾಗಿತ್ತು. ಎಸ್‌ಐಟಿ ರಚಿಸಿ 12,891 ಗಣಿ ಅಕ್ರಮಗಳ ತನಿಖೆಗೆ ವಹಿಸಿದ್ದರೂ ಶೇ.0.02ರಷ್ಟು ಪ್ರಕರಣದಲ್ಲಿ ಮಾತ್ರ ತೀರ್ಪು ಬಂದಿದೆ. 1.5 ಲಕ್ಷ ಕೋಟಿ ರು. ಲೂಟಿ ಪ್ರಕರಣದಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮ ಸಾಲದು’ಹೀಗಂತ ಖುದ್ದು ಕಾನೂನು ಸಚಿವ ಎಚ್.ಕೆ.ಪಾಟೀಲ್‌ ಅವರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಕೀಯಕ್ಕಾಗಿ ಪಾದಯಾತ್ರೆ ನಡೆಸಿದ್ದಾರೆಯೇ ಹೊರತು ಲೂಟಿಕೋರರ ವಿರುದ್ಧ ಶಿಕ್ಷೆ ಆಗುವಂತೆ ಮಾಡಲು ಸರ್ಕಾರಕ್ಕೆ ಪ್ರಾಮಾಣಿಕತೆ ಇಲ್ಲ ಎಂದು ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪುಣ್ಯದ ಮೇಲೆ ಪಾಪವು ವಿಜಯ ಸಾಧಿಸುತ್ತಿದೆ. ಸತ್ಯ ಹೂತು ಹೋಗಿ ಸರ್ಕಾರದ ಬೊಕ್ಕಸಕ್ಕೆ ವಾಪಸಾಗಬೇಕಾಗಿದ್ದ 1.5 ಲಕ್ಷ ಕೋಟಿ ರು. ಸಂಪತ್ತು ವಾಪಸಾಗುವ ಸಾಧ್ಯತೆ ಕ್ಷೀಣಿಸುತ್ತಿದೆ. ಹೀಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಕಾನೂನು ದೌರ್ಬಲ್ಯದ ಲಾಭ ಪಡೆದು ಲೂಟಿಕೋರರು ಶಿಕ್ಷೆಯಿಂದ ಪಾರಾಗಬಹುದು. ಆದರೆ ಅಪರಾಧಿಗಳು ಅಕ್ರಮದ ಮೂಲಕ ಗಳಿಸಿದ ಸಂಪತ್ತು ರಾಜ್ಯದ ಖಜಾನೆಗೆ ಮರಳಿ ವಾಪಸ್‌ ತರದಿದ್ದರೆ ಅದು ವ್ಯವಸ್ಥೆಯ ಅಣಕ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮುಟ್ಟುಗೋಲು ಹಾಕಿಕೊಳ್ಳಿ:ಪತ್ರದಲ್ಲಿ ಏನು ಕ್ರಮಕೈಗೊಳ್ಳಬೇಕು ಎಂದೂ ಸೂಚಿಸಿರುವ ಎಚ್.ಕೆ.ಪಾಟೀಲ್‌ ಅವರು, ಸುಗ್ರೀವಾಜ್ಞೆ ಮೂಲಕ ಅಪರಾಧಿಕ ಕಾನೂನು ತಿದ್ದುಪಡಿ ಮಾಡಿ (ಕ್ರಿಮಿನಲ್‌ ಲಾ ಅಮೆಂಡ್‌ಮೆಂಟ್‌ ಆರ್ಡಿನೆನ್ಸ್‌) ನಷ್ಟ ವಸೂಲಾತಿ ಮಾಡಲು ಅಪರಾಧಿಗಳ ಅಥವಾ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಒಬ್ಬ ವಸೂಲಾತಿ ಆಯುಕ್ತರನ್ನು ತಕ್ಷಣ ನೇಮಿಸಿ ಅಗತ್ಯವಾದ ಬಲ ಹಾಗೂ ಬೆಂಬಲ ನೀಡಬೇಕು. ವಸೂಲಾತಿ ಪರಿಣಾಮಕಾರಿಗೊಳಿಸಲು ದೃಢ ಹೆಜ್ಜೆ ಇಡಬೇಕು.

ಈಗ ತನಿಖೆ ಪೂರ್ಣಗೊಂಡು ನ್ಯಾಯಾಲಯದ ವಿಚಾರಣೆ ಹಂತದಲ್ಲಿರುವ ಪ್ರಕರಣಗಳಿಗಿಂತ ಹತ್ತು ಪಟ್ಟು ಹೆಚ್ಚಿನ ಅಕ್ರಮ ಗಣಿಗಾರಿಕೆ ಪ್ರಕರಣಗಳು ತನಿಖೆಗೆ ಒಳಪಡಲೇ ಇಲ್ಲ. ಅಂತಹ ಪ್ರಕರಣಗಳ ತನಿಖೆ ಅಗತ್ಯವಿದೆ. ಅದಕ್ಕಾಗಿ ಇನ್ನೂ ಬಲಯುತವಾದ ವಿಶೇಷ ತನಿಖಾ ತಂಡ ರಚಿಸಿ ಪೊಲೀಸ್‌ ವ್ಯವಸ್ಥೆಯಲ್ಲಿ ರೂಪಿಸಬೇಕು. ಅಕ್ರಮ ಗಣಿಗಾರಿಕೆ ಪ್ರಕರಣಗಳ ಅಪರಾಧಿ ಉದ್ದೇಶದ ಪ್ರಕರಣಗಳನ್ನು ತನಿಖೆ ಮಾಡಲು ತಕ್ಷಣ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಶೇ.0.02ರಷ್ಟು ಕೇಸಲ್ಲಿ ಮಾತ್ರ ತೀರ್ಪು:

2006ರಿಂದ 2009ರ ಡಿಸೆಂಬರ್‌ವರೆಗೆ 12,891 ಅಕ್ರಮ ಗಣಿಗಾರಿಕೆಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದವು. 2010-11ರಲ್ಲಿ 6,476 ಪರಕರಣ ಬೆಳಕಿಗೆ ಬಂದಿದ್ದವು. ಹೀಗಿದ್ದರೂ ಸಂಪೂರ್ಣ ವ್ಯವಸ್ಥೆ ಪಟ್ಟಭದ್ರ ಆಸಕ್ತ ಮೂಕ ಪ್ರೇಕ್ಷಕನಂತೆ ವರ್ತಿಸಿ ದೇಶದ್ರೋಹ ಎಸಗುತ್ತಿತ್ತು. ಒಟ್ಟು 12,891 ಪ್ರಕರಣಗಳಲ್ಲಿ ಶೇ.7.4 ರಷ್ಟು ಮಾತ್ರ ತನಿಖೆಗೆ ಒಳಪಟ್ಟಿದ್ದು, ತನಿಖೆಗೆ ಒಳಪಟ್ಟ ಶೇ.2 ರಷ್ಟು ಪ್ರಕರಣಗಳಲ್ಲಿ ಅಂದರೆ ಒಟ್ಟಾರೆ ಪ್ರಕರಣಗಳ ಶೇ.0.02 ರಷ್ಟು ಕೇಸಲ್ಲಿ ಮಾತ್ರ ನ್ಯಾಯಾಲಯದ ತೀರ್ಪು ಬಂದಿದೆ.1.5 ಲಕ್ಷ ಕೋಟಿಯಷ್ಟು ಸಂಪತ್ತು ಲೂಟಿಯಾಗಿದೆ. 14 ಕೋಟಿ ಟನ್‌ಗಳಷ್ಟು ಕಬ್ಬಿಣದ ಅದಿರು ಅಕ್ರಮ ಸಾಗಣೆ, 35 ಕೋಟಿ ಟನ್ ಅಕ್ರಮ ಅದಿರು ಲೂಟಿ ಆಗಿದ್ದು, ಈ ಸಂಪತ್ತಿನಿಂದ ಸರ್ಕಾರಗಳೇ ಉರುಳಿದ್ದು ಶಾಸಕರ ಕುದುರೆ ವ್ಯಾಪಾರಕ್ಕೆ ಬಳಕೆಯಾಗಿದೆ. ಮೋಜು, ಮಸ್ತಿ, ಆಡಂಬರಕ್ಕೆ ಬಳಕೆಯಾಗಿದೆ. ಆಡಳಿತದ ಅನಾಸಕ್ತಿ ಅಧಿಕಾರಶಾಹಿ ವ್ಯವಸ್ಥೆಯ ರಾಜ್ಯದ್ರೋಹಿ ಮನೋಭಾವದಿಂದ ಪ್ರಕರಣಗಳ ತನಿಖೆಯಾಗಲಿಲ್ಲ. ವಿಚಾರಣೆಗೂ ಗುರಿಯಾಗಲಿಲ್ಲ.

ತನಿಖೆಗೆ ವಹಿಸಿದ ಕೆಲವೇ ಕೆಲ ಪ್ರಕರಣಗಳಲ್ಲೂ ಎಸ್ಐಟಿ ಯಾವುದೇ ಪ್ರಗತಿ ಸಾಧಿಸಲಿಲ್ಲ. ಅಕ್ರಮದ ಬಗೆಗಿನ ಪುರಾವೆಗಳು ಮರೆಯಾಗುವ ಮೊದಲೇ ಅವುಗಳ ರಕ್ಷಣೆ ಹಾಗೂ ಅಂತಿಮ ನಿರ್ಣಯ ಆಗಬೇಕು. ಅದಕ್ಕಾಗಿ ದೃಢವಾದ ಹೆಜ್ಜೆಗಳನ್ನು ಇಡಬೇಕು ಎಂದು ಆಗ್ರಹಿಸಿದ್ದಾರೆ.---

ಅಕ್ರಮ ಗಣಿಗಾರಿಕೆಯಿಂದ ರಾಜ್ಯದ 1.40 ಲಕ್ಷ ಕೋಟಿ ಹಾನಿಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಎಂಗೆ ಪತ್ರ ಬರೆದಿದ್ದೇನೆ. ನಮ್ಮ ಸರ್ಕಾರಕ್ಕೆ ಒಳ್ಳೆಯ ಹೆಸರು ಬೇಕು ಅನ್ನೋ ಕಾರಣಕ್ಕೆ ಪತ್ರ ಬರೆದಿದ್ದೇನೆ. ಸಿಎಂಗೆ ಈಗಾಗಲೇ ಪತ್ರ ತೋರಿಸಿದ್ದೇನೆ. ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ.- ಎಚ್.ಕೆ. ಪಾಟೀಲ್, ಕಾನೂನು ಸಚಿವ

 ವಸತಿ ಅಕ್ರಮ ಬಗ್ಗೆ ನಾನು ಸತ್ಯ ಹೇಳಿದ್ದೇನೆ: ಬಿ.ಆರ್‌.ಪಾಟೀಲ್‌ಆಡಿಯೋದಲ್ಲಿರೋದು ನನ್ನದೇ ಧ್ವನಿ 

 ಬೆಂಗಳೂರು :  ಸರ್ಕಾರದ ಯೋಜನೆಯಡಿ ವಸತಿ ಹಂಚಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಸಂಬಂಧಿಸಿ ಸತ್ಯ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ಈ ವಿಚಾರವಾಗಿ ಮುಖ್ಯಮಂತ್ರಿ ಕರೆದರೆ ಅವರ ಬಳಿ ಹೋಗಿ ಮಾಹಿತಿ ನೀಡುತ್ತೇನೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಹಿರಿಯ ಕಾಂಗ್ರೆಸ್‌ ಶಾಸಕ ಬಿ.ಆರ್‌.ಪಾಟೀಲ್‌ ಪ್ರತಿಕ್ರಿಯಿಸಿದ್ದಾರೆ.ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಹಿರಂಗವಾಗಿರುವ ಆಡಿಯೋದಲ್ಲಿರುವುದು ನನ್ನದೇ ಮಾತು. ನಾವು ಜನಪರ ಆಡಳಿತ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದೇವೆ. ಆದರೆ, ಪರಿಸ್ಥಿತಿ ಹೀಗಾಗಬಾರದಿತ್ತು ಎಂದರು.

5-6 ಪಂಚಾಯತಿಗಳಲ್ಲಿ ದುಡ್ಡು ಕೊಟ್ಟು ಮನೆಗಳನ್ನು ತೆಗೆದುಕೊಂಡಿದ್ದಾರೆ. ನಾನು ಕೊಟ್ಟ ಪತ್ರಗಳನ್ನು ಪರಿಗಣಿಸಿಲ್ಲ. ಬದಲಾಗಿ ನಾನು ಶಿಫಾರಸು ಮಾಡಿದ ಪತ್ರಗಳನ್ನೇ ಪಂಚಾಯಿತಿ ಅಧ್ಯಕ್ಷರು ತೆಗೆದುಕೊಂಡು ಹೋಗಿ ಮನೆಗಳನ್ನು ತಂದಿದ್ದಾರೆ. ನನಗಿಂತ ಪಂಚಾಯಿತಿ ಅಧ್ಯಕ್ಷರೇ ಬಲಿಷ್ಠರಾಗಿದ್ದಾರೆ. ಕ್ಷೇತ್ರಕ್ಕೆ ನಾನು ಎರಡು ಸಾವಿರ ಮನೆ ಕೇಳಿದ್ದೆ. ಆದರೆ ಗ್ರಾಪಂ ಅಧ್ಯಕ್ಷರಿಗೆ 1950 ಮನೆ ನೀಡಲಾಗಿದೆ ಎಂದು ಹೇಳಿದರು.ಈ ವಿಷಯದ ಕುರಿತು ಹೈಕಮಾಂಡ್‌ಗೆ ಯಾಕೆ ನಾನು ಮಾಹಿತಿ ನೀಡಲಿ, ಅಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನಾನಾಗಿಯೇ ಹೋಗುವುದಿಲ್ಲ, ಅವರಾಗಿ ಕರೆದರೆ ಹೋಗಿ ಮಾಹಿತಿ ಕೊಡುತ್ತೇನೆ. ನನಗೆ ಹೊಟ್ಟೆ ಕೆಟ್ಟಿತ್ತು, ಅದಕ್ಕೆ ಔಷಧಿ ತೆಗೆದುಕೊಂಡಿದ್ದೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ವಸತಿ ಸಚಿವರು ತಮ್ಮ ಇಲಾಖೆಯಲ್ಲಿ ನಡೆದಿಲ್ಲ, ಗ್ರಾಪಂ ಮಟ್ಟದಲ್ಲಿ ನಡೆದಿದೆ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಬಿ.ಆರ್‌.ಪಾಟೀಲ್‌ ಈ ಬಗ್ಗೆ ಅವರು ತನಿಖೆ ಮಾಡಿಸಲಿ. ಕೇವಲ ನಮ್ಮ ಕ್ಷೇತ್ರದಲ್ಲಷ್ಟೇ ಈ ರೀತಿ ನಡೆದಿಲ್ಲ. ಎಲ್ಲ ಕ್ಷೇತ್ರದಲ್ಲೂ ನಡೆದಿದೆ. ಎಲ್ಲ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಬಿಜೆಪಿಯವರೇನು ಸಾಚಾಗಳಲ್ಲ. ಅವರೂ ಎಲ್ಲ ಹೊಲಸು ಮಾಡಿ ಹಾಳು ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

Read more Articles on