ಚೆನ್ನೈ: ‘ಕಳೆದ 5 ವರ್ಷಗಳಲ್ಲಿ ನೀಟ್‌ ಪ್ರಶ್ನೆಪತ್ರಿಕೆ 3 ಬಾರಿ ಸೋರಿಕೆಯಾಗಿದೆ. ಇಷ್ಟಾದರೂ ಸರ್ಕಾರ ಹೊಣೆ ಹೊರಲಿಲ್ಲ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಡುವಂತಾಯಿತು. ಸರ್ಕಾರ ಇನ್ನಾದರೂ ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಬೇಕು’ ಎಂದು ಮಾಜಿ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಸರ್ಕಾರದ ವಿರುದ್ಧ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿ ತೊರೆದು, ವಿ ದ ಲೀಡರ್ಸ್‌ ಆಂದೋಲನ

ಇತ್ತೀಚೆಗಷ್ಟೇ ಬಿಜೆಪಿ ತೊರೆದು, ವಿ ದ ಲೀಡರ್ಸ್‌ ಆಂದೋಲನ ಆರಂಭಿಸಿರುವ ಅವರು, ‘ಪ್ರತಿಭಟನೆಯು ತೀವ್ರ ಸ್ವರೂಪ ಪಡೆದು ನಿರ್ಣಾಯಕ ಹಂತವನ್ನು ತಲುಪುವವರೆಗೂ ಅರ್ಥಪೂರ್ಣ ಸಮಾಲೋಚನೆ ಏಕೆ ವಿಳಂಬವಾಯಿತು? ನಿಮ್ಮನ್ನು ಕಾಯುವಂತೆ ಮಾಡಿದ್ದು ಯಾವುದು?’ ಎಂದು ಟ್ವೀಟ್‌ ಮೂಲಕ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ ನೀಟ್‌ ಪ್ರಶ್ನೆಪತ್ರಿಕೆ 3 ಬಾರಿ ಸೋರಿಕೆ

‘ಕಳೆದ 5 ವರ್ಷಗಳಲ್ಲಿ ನೀಟ್‌ ಪ್ರಶ್ನೆಪತ್ರಿಕೆ 3 ಬಾರಿ ಸೋರಿಕೆಯಾಗಿದೆ. ಇದು ವಿದ್ಯಾರ್ಥಿಗಳ ಮೇಲೆ ಹೇರುವ ಒತ್ತಡವನ್ನು ಊಹಿಸಿ. ಆದರೂ ಅಲ್ಲಿ ಯಾವುದೇ ಹೊಣೆಗಾರಿಕೆ ಇರಲಿಲ್ಲ. ವಿದ್ಯಾರ್ಥಿಗಳು ತಮ್ಮ ಅಂತರಾಳದ ನೋವನ್ನು ಹೊರಹಾಕಲು ಬೀದಿಗಿಳಿಯುವಂತೆ ಮಾಡಿದ್ದು ಅದೇ ಕ್ಷಣ. ಇನ್ನಾದರೂ ಸರ್ಕಾರ ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಬೇಕು ಹಾಗೂ ಅವರ ಕಳವಳಗಳನ್ನು ಪರಿಹರಿಸಲು ಸೂಕ್ತ ರೀತಿಯಲ್ಲಿ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.