ಕನ್ಯಾ ರಾಶಿಗೆ ಖರ್ಚು ಹೆಚ್ಚು, ವೃಶ್ಚಿಕಕ್ಕೆ ಶುಭ ಫಲ, ನಿಮ್ಮ ರಾಶಿ ಭವಿಷ್ಯ ಹೇಗಿದೆ?

| Published : Jan 05 2025, 01:32 AM IST / Updated: Jan 05 2025, 06:40 AM IST

Weekly Horoscope

ಸಾರಾಂಶ

ವಿವಿಧ ರಾಶಿಗಳ ಗೋಚಾರ ಫಲ.

(05.01.25 ರಿಂದ 11.01.25)

ಮೇಷರಾಶಿ:

ಸಂಗಾತಿಯೊಂದಿಗೆ ತಪ್ಪು ತಿಳುವಳಿಕೆ ಅಥವಾ ಮನಸ್ತಾಪ ಉಂಟಾಗಿದ್ದರೆ ಪ್ರೀತಿಯಿಂದ ಅವರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಿ. ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುವುದು. ವಿವಿಧ ಗ್ರಹಗತಿಗಳಿಂದ ನಿಮ್ಮ ಜೀವನದಲ್ಲಿ ಭಾರಿ ಬದಲಾವಣೆ ಉಂಟಾಗಲಿದೆ. ಇದುವರೆಗೂ ನೀವು ಕಾಯುತ್ತಿದ್ದ ಕಾಲ ಈಗ ಕೂಡಿಬಂದಿದೆ. ಒಂಬತ್ತನೇ ಮನೆಯಲ್ಲಿ ಸೂರ್ಯ ಬುಧ ಬೆಂಬಲವಾಗಿ‌ ಇದ್ದಾರೆ. ಕೇತು, ಗುರು ಧನಲಾಭವನ್ನು ಕೊಟ್ಟು ಹಿಡಿದ ಕೆಲಸಗಳನ್ನು ಸುಲಭ ಆಗುವಂತೆ ಮಾಡುತ್ತಾರೆ.

ವೃಷಭರಾಶಿ: ಅನಗತ್ಯ ವಸ್ತುಗಳ ಮೇಲೆ ಹೆಚ್ಚಿನ ಖರ್ಚು ಮಾಡಬೇಡಿ. ಮಾಡಿದರೆ ನಿಮಗೆ ಹಣ ಮತ್ತು ಗೌರವ ಎರಡರಲ್ಲಿಯೂ ನಷ್ಟವಾಗಬಹುದು. ಪ್ರೀತಿ ಪಾತ್ರರ ಆಗಮನದಿಂದಾಗಿ ನಿಮ್ಮ ಮನಸ್ಸು ಸಂತಸದಿಂದಿರುವುದು. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ. ರಾಹು, ಕುಜ ನಿಮ್ಮ ಶಕ್ತಿಯನ್ನು ಹೆಚ್ಚು ಮಾಡುತ್ತಾರೆ. ಮನಸ್ಸಿಗೆ ಮುದ ನೀಡುವಂಥಾ ಘಟನೆಗಳು ನಡೆಯಲಿವೆ. ಮುಂದಿನ ದಿನಗಳು ನಿಮಗೆ ಶುಭದಾಯಕವಾಗಿ ಇರುವುದರಿಂದ ಹೊಸ ಯೋಜನೆಗಳನ್ನು ಹಾಕಿಕೊಳ್ಳಬಹುದು.

ಮಿಥುನರಾಶಿ:ಸೂರ್ಯ ಬುಧ ಒಟ್ಟಿಗೆ ಇರುವುದು ಬುಧಾದಿತ್ಯ ಯೋಗ. ಅಂದರೆ ಮಾತಿನಿಂದ ಲಾಭ ಇದೆ. ರಾಜಕಾರಣಿಗಳು, ಜಾಹಿರಾತು, ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಲಾಭ ಇದೆ. ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ವಿರೋಧಿಗಳಿಗೆ ಸರಿಯಾದ ಉತ್ತರವನ್ನು ನೀಡುವಲ್ಲಿ ಯಶಸ್ಸು ಗಳಿಸುವಿರಿ. ನೀವಂದುಕೊಂಡಂತಹ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವುದು. ವ್ಯಾಪಾರವನ್ನು ಜನರು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಉತ್ತಮ ಅವಕಾಶವನ್ನು ಪಡೆಯುವರು. ಶುಭ ಫಲ ಇದೆ. 

ಕಟಕರಾಶಿ:ಕೆಲವೇ ದಿನಗಳಲ್ಲಿ ಅಷ್ಟಮ ಶನಿಯ ಪ್ರಭಾವ ಮುಗಿದು ನಿರಾಳ ಆಗುತ್ತೀರಿ. ಹೊಸ ಅವಕಾಶಗಳು ದೊರೆಯಲಿದೆ. ಕೇತುವಿನಿಂದ ನಿಮಗೆ ಧನಲಾಭ ಇದೆ. ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ನಿಮ್ಮ ಕೆಲಸಗಳಲ್ಲಿ ಯಶಸ್ಸು ಲಭಿಸುವುದು. ಬೇರೆಯವರನ್ನು ನಂಬಿ ಕೆಲಸ ಮಾಡುವುದಕ್ಕಿಂತ ನೀವು ನಿಮ್ಮ ಕೆಲಸದ ಮೇಲೆ ಹೆಚ್ಚಿನ ವಿಶ್ವಾಸವನ್ನು ಹೊಂದುವುದು ಉತ್ತಮ. ನಿಮಗೆ ಸರ್ಕಾರದಿಂದ ಲಾಭ ಸಿಗುತ್ತದೆ. ಸರ್ಕಾರಿ ಕೆಲಸಗಳು ಸುಲಭ ಆಗುತ್ತದೆ. ಶುಕ್ರನಿಂದ ಶುಭಫಲ ಇದೆ.

ಸಿಂಹರಾಶಿ: ಧೈರ್ಯಕ್ಕೆ ಹೆಸರಾದ ನೀವು ಈ ವಾರ ಕಳೆಗುಂದಬೇಕಾಗುತ್ತದೆ. ಮನೆಯಲ್ಲಿ ಆಫೀಸಿನಲ್ಲಿ ಬೇಕಾದ ಸ್ಥಾನಮಾನ ಸಿಗುವುದಿಲ್ಲ. ಓರಿಗೆಯವರು ನಿಮ್ಮ ಬಗ್ಗೆ ತಾತ್ಸಾರದ ನಿಲುವನ್ನು ತಾಳಬಹುದು. ಸರಾಗವಾಗಿ ನಡೆಯುವ ಕಾಲುಗಳಿಗೆ ಎಡರು ತೊಡರು ಎದುರಾಗುತ್ತದೆ. ಎಲ್ಲ ಕೆಲಸಗಳು ಅರ್ಧರ್ಧ ಕ್ಕೇ ನಿಂತುಬಿಡುತ್ತದೆ. ಒತ್ತಡಗಳು ಹೆಚ್ಚಾಗುತ್ತದೆ. ಯಾವುದೂ ಏನೂ ಆಗದಂಥ ಪರಿಸ್ಥಿತಿ. ತಲೆ ಖಾಲಿ ಆದಂತೆ, ಬುದ್ಧಿ ಓಡದಂತೆ ಸಪ್ಪೆಯಾಗುತ್ತೀರಿ. ದರ್ಪವನ್ನು ನಿಗ್ರಹಿಸಲೇ ಬೇಕು. 

ಕನ್ಯಾರಾಶಿ: ಪ್ರಗತಿ ಮತ್ತು ಲಾಭವನ್ನು ಗಳಿಸಲು ಯೋಚನೆಯನ್ನು ರೂಪಿಸಲು ಅನುಕೂಲಕರ ಸಮಯ. ಜೊತೆಗೆ ನಿಮ್ಮ ಸುಖ ಸಮೃದ್ಧಿಗಾಗಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗಿ ಬರಬಹುದು. ವಾರದ ಮಧ್ಯದಲ್ಲಿ ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಯಾರೊಂದಿಗೂ ಕಠೋರವಾಗಿ ಮಾತನಾಡಬೇಡಿ. ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತದೆ.‌ ಕೆಲವೇ ದಿನಗಳಲ್ಲಿ ಶುಭಫಲಗಳು ಸಿಗುತ್ತದೆ. ಸ್ನೇಹಿತರ ಜೊತೆ ವಾದ ನಡೆಯುವುದನ್ನು ತಪ್ಪಿಸಿ. 

ತುಲಾರಾಶಿ:ವೃತ್ತಿಯಲ್ಲಿ ಯಶಸ್ಸು, ಉನ್ನತಿ, ಎಲ್ಲವೂ ಈಗಲೇ ನಿಮ್ಮ ಅನುಭವಕ್ಕೆ ಬರುತ್ತದೆ. ಧನಾತ್ಮಕ ಗಾಳಿ ಬೀಸಲು ಪ್ರಾರಂಭವಾಗಿದೆ. ಭವಿಷ್ಯಕ್ಕೆ ನಿಮ್ಮ ಯೋಜನೆಗಳನ್ನು ರೂಪಿಸಲು, ಮುಂದುವರಿಯಲು ಇದು ಸಕಾಲ.

ಸದ್ಯದಲ್ಲಿ ಯಾವುದೇ ಗ್ರಹಬಲ ಇಲ್ಲದಿದ್ದರೂ ಕೆಲವೇ ದಿನಗಳಲ್ಲಿ ಶನಿಯ ಬಲವನ್ನು ಪಡೆಯುತ್ತೀರಿ. ಮುಂದಿನ ದಿನಗಳು ನಿಮಗೆ ಒಳ್ಳೆಯ ಫಲಗಳನ್ನು ನೀಡಲಿದೆ. ಹೊಸ ಕೆಲಸ ಸಿಗಬಹುದು ವಿದೇಶ ಪ್ರಯಾಣ ಆಗಬಹುದು. ಖುಷಿಯಾಗಿರಿ.

 ವೃಶ್ಚಿಕ ರಾಶಿ: ಕೆಲಸದ ಸ್ಥಳದಲ್ಲಿ ಯಶಸ್ಸು ಲಭಿಸುವ ಯೋಗವಿದೆ. ಸರಿಯಾಗಿ ಯೋಚಿಸಿದ ನಂತರವೇ ಹೊಸ ಯೋಜನೆಗಳನ್ನು ಪ್ರಾರಂಭಿಸಿ ಅಥವಾ ಈ ಅವಧಿಯಲ್ಲಿ ಯಾವುದೇ ಕೆಲಸವನ್ನು ಶುರು ಮಾಡದೇ ಇರುವುದು ಉತ್ತಮ. ಮನೆ ಅಥವಾ ಕೆಲಸದ ಸ್ಥಳದಲ್ಲಿನ ಸಮಸ್ಯೆಗಳನ್ನು ಒಂದರ ನಂತರ ಇನ್ನೊಂದರಂತೆ ಪರಿಹರಿಸಿ. ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷವಾಗಿ ಗಮನ ನೀಡಿ. ವ್ಯಾಪಾರವನ್ನು ಮಾಡುವ ಜನ ಹೂಡಿಕೆಗೆ ಸಂಬಂಧಿಸಿದಂತೆ ಹೆಚ್ಚು ಎಚ್ಚರಿಕೆಯಿಂದಿರಿ.

ಧನಸ್ಸು ರಾಶಿ:ಕೆಲಸದ ಸ್ಥಳದಲ್ಲಿ ಹೊಸ ಅವಕಾಶಗಳು ದೊರಕುವ ಸಾಧ್ಯತೆ ಇದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಯಶಸ್ಸು ಲಭಿಸುವ ಸಾಧ್ಯತೆ ಇದೆ. ಯಶಸ್ಸನ್ನು ಗಳಿಸಲು ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ. ಕಠಿಣ ಪರಿಶ್ರಮದಿಂದ ಕೆಲಸವನ್ನು ಮಾಡುವುದು ಉತ್ತಮ. ಸದ್ಯ ತ್ರಿಕೋಣಾಧಿಪತಿ ಯೋಗಯಿದೆ. ಇದು ನಿಮಗೆ ಅದೃಷ್ಟವನ್ನು ತರುತ್ತದೆ. ಮೂರನೇ ಮನೆಯಲ್ಲಿ ಶನಿ ಹಣದ ಹರಿವನ್ನು ಉತ್ತಮಪಡಿಸುತ್ತಾನೆ. ಆದರೆ ಆರೋಗ್ಯದಲ್ಲಿ ಏರುಪೇರು ಆಗಬಹುದು.

ಮಕರರಾಶಿ: ಕೆಲವೇ ದಿನಗಳಲ್ಲಿ ಸಾಡೆಸಾತಿ ಶನಿಯಿಂದ ಸಹ ಮುಕ್ತರಾಗುತ್ತೀರಿ. ಇದು ನಿಮಗೆ ಬಹುದೊಡ್ಡ ಬದಲಾವಣೆ ತರಲಿದೆ. ನಿಮ್ಮ ಕಷ್ಟಗಳು ಕಳೆದು ಸುಖ ಹೆಚ್ಚಾಗುತ್ತದೆ. ಧನಾಗಮನ ವೃದ್ಧಿಯಾಗುವುದು. ಸ್ನೇಹಿತರು ಹಾಗೂ ಪ್ರೀತಿ ಪಾತ್ರರ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಮನೆ ಮತ್ತು ಹತ್ತಿರದ ಜನರ ಬಗ್ಗೆ ನಿಮಗೆ ಸಂದೇಹವಿರಲಿದೆ. ಉದ್ಯೋಗಿಗಳು ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದುವರು. ಸಾಕಷ್ಟು ಭಾವುಕರಾಗದಂತೆ ಎಚ್ಚರಿಕೆ ವಹಿಸಿ. 

ಕುಂಭರಾಶಿ: ಕೆಲವೇ ದಿನಗಳಲ್ಲಿ ಸಾಡೆಸಾತಿ ಶನಿಯ ಕೊನೆಯ ಹಂತಕ್ಕೆ ಬರುತ್ತೀರಿ. ಆಮೇಲೆ ನಿಮ್ಮ ದಾರಿ ಸುಗಮವಾಗಲಿದೆ. ಈಗ ಸರ್ಕಾರಿ ಕೆಲಸಗಳು ಸುಲಭವಾಗಿ ನೆರವೇರುತ್ತದೆ. ಬ್ಯಾಂಕಿಂಗ್/ ಮಾರ್ಕೆಟಿಂಗ್ ಕ್ಷೇತ್ರದವರಿಗೆ ಲಾಭ ಇದೆ. ನಿಮ್ಮ ರಾಶಿಯಲ್ಲೇ ಶುಕ್ರ ಇರುವುದೂ ಸಹ ನಿಮಗೆ ಶುಭವನ್ನು ತರುತ್ತದೆ. ಆರನೇ ಮನೆಯಲ್ಲಿ ಕುಜ ನಿಮ್ಮ ಧೈರ್ಯ ಸಾಹಸ ವನ್ನು ಹೆಚ್ಚಿಸುತ್ತಾನೆ. ಆದರೆ ಭೂಮಿ, ಮನೆ ಮತ್ತು ವಾಹನಕ್ಕೆ ಸಂಬಂಧಿಸಿದಂತಹ ವಿಚಾರಗಳನ್ನು ಮುಂದೂಡುವುದು ಒಳ್ಳೆಯದು.

ಮೀನರಾಶಿ:ಈ ವಾರ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ನಿಮಗೆ ಯಾವ ಕೆಲಸ ಗೊತ್ತಿಲ್ಲವೋ ಆ ಕೆಲಸವನ್ನು ಮಾಡಬೇಡಿ. ಮಾಡಿದರೆ ಅಪಮಾನಕ್ಕೆ ಒಳಗಾಗಬಹುದು. ವಾರದ ಆರಂಭದಲ್ಲಿ ನಿಮಗೆ ದೂರ ಪ್ರಯಾಣದ ಯೋಗವಿದೆ. ಈ ಪ್ರಯಾಣದ ಸಂದರ್ಭದಲ್ಲಿ ನೀವು ನಿಮ್ಮ ಆರೋಗ್ಯ ಮತ್ತು ವಸ್ತುಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ. ಇಲ್ಲದಿದ್ದರೆ ಧನ ಹಾನಿಯಾಗುವ ಸಂಭವವಿದೆ. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಯಾವುದೇ ಹೊಸ ಯೋಜನೆಗಳನ್ನು ಮಾಡಬೇಡಿ. ಹೂಡಿಕೆಗಳೂ ಸದ್ಯಕ್ಕೆ ಬೇಡ.