ಸರ್ಕಾರ ಹಂಪಿ ಮಾದರಿಯಂತೆ ಹೊಯ್ಸಳ ಉತ್ಸವ ನಡೆಸಲಿ

Sep 29 2025, 01:03 AM IST
ಹೊಯ್ಸಳರ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ಹಾಗೂ ಹಂಪಿಯ ಮಾದರಿಯಲ್ಲಿ ಪ್ರತಿವರ್ಷ ಹೊಯ್ಸಳ ಉತ್ಸವವನ್ನು ಜಿಲ್ಲೆಯಲ್ಲಿ ಸರ್ಕಾರದ ಪ್ರೋತ್ಸಾಹದೊಂದಿಗೆ ಆಚರಿಸಬೇಕೆಂದು ಒತ್ತಾಯಿಸಿ ನವಕರ್ನಾಟಕ ಯುವಶಕ್ತಿ ವತಿಯಿಂದ ಭಾನುವಾರ ಹಾಸನದಲ್ಲಿ ಭವ್ಯ ಹೊಯ್ಸಳ ಉತ್ಸವ ಮೆರವಣಿಗೆ ನಡೆಯಿತು. ೧೧ ಶತಮಾನದಿಂದ ೧೬ನೇ ಶತಮಾನದವರೆಗೂ ಕನ್ನಡಿಗರು ಹೆಮ್ಮೆಪಡುವ ರೀತಿಯಲ್ಲಿ ಪಕ್ಕದ ತಮಿಳುನಾಡು ಮತ್ತು ಆಂಧ್ರ ಸೇರಿದಂತೆ ದಕ್ಷಿಣ ಭಾರತದಲ್ಲಿ ನಮ್ಮ ಕನ್ನಡಿಗರ ಹಿರಿಯ ಗರಿಮೆಯನ್ನು ಎತ್ತಿ ಹಿಡಿದಂತಹ ಹೊಯ್ಸಳರು ನಮಗೆ ಅನೇಕ ಕೊಡುಗೆಯನ್ನು ಕೊಟ್ಟು ಹೋಗಿದ್ದಾರೆ, ಕನ್ನಡಿಗರಾದ ನಾವು ಹೆಮ್ಮೆ ಪಡುವಂತಹ ಕೊಡುಗೆ ಹೊಯ್ಸಳರದ್ದು ಎಂದು ಬಣ್ಣಿಸಿದರು.