ಕೋಲಾರ ಕಾಂಗ್ರೆಸ್ನ ಎರಡು ಶಕ್ತಿಶಾಲಿ ಬಣಗಳ ಜಗಳವು ರಾಜ್ಯ ರಾಜಕಾರಣದ ಪಾಲಿಗೆ ಅನಾಮಿಕರಂತಿದ್ದ ಯುವ ನಾಯಕ ಕೆ.ವಿ.ಗೌತಮ್ಗೆ ಲಾಭ ತಂದುಕೊಟ್ಟಿದೆ.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಹೊರಬಿದ್ದಿದ್ದು, ಬಾಕಿ ಉಳಿದಿದ್ದ ನಾಲ್ಕು ಕ್ಷೇತ್ರಗಳ ಪೈಕಿ ನಿರೀಕ್ಷೆಯಂತೆ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ರಕ್ಷಾ ರಾಮಯ್ಯ, ಬಳ್ಳಾರಿಗೆ ಶಾಸಕ ಇ.ತುಕಾರಾಂ ಮತ್ತು ಚಾಮರಾಜನಗರಕ್ಕೆ ಸುನೀಲ್ ಬೋಸ್ಗೆ ಟಿಕೆಟ್ ದೊರಕಿದೆ.
ಸಶಕ್ತ ಮಹಿಳೆಯರು ದೇಶದ ಹಣೆಬರಹವನ್ನೇ ಬದಲಿಸುವಷ್ಟು ಸಬಲರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲು ಜಾರಿ ಮಾಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ.