ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್ 1’ 500 ಕೋಟಿ ಕ್ಲಬ್ ಸಮೀಪಿಸುತ್ತಿದೆ. ರಿಲೀಸ್ ಆದ ವಾರದೊಳಗೆ ಅತಿಮಾನುಷ ಕಥನವೊಂದು ಅದ್ದೂರಿ ಗಳಿಕೆ ಮಾಡಿದ್ದಕ್ಕೆ 8 ಮುಖ್ಯ ಕಾರಣಗಳು ಇಲ್ಲಿವೆ.
ಬಾಲಿವುಡ್ನಲ್ಲಿ ಸೆಲೆಬ್ರಿಟಿಗಳ ಉಡುಗೆಗಳ ಜೊತೆಗೆ ಹ್ಯಾಂಡ್ಬ್ಯಾಗ್ಗಳು ಸಖತ್ ಸೌಂಡ್ ಮಾಡ್ತಿವೆ. ಮೊದಲೆಲ್ಲ ಹೆಚ್ಚಿನ ತಾರೆಯರು ಕೈಯಲ್ಲಿ ಕಡುಗಪ್ಪು ಅಥವಾ ಬಿಳಿ ಬಣ್ಣದ ದುಬಾರಿ ಬ್ಯಾಗ್ ಹಿಡಿದು ಓಡಾಡುತ್ತಿದ್ದರು. ಆದರೆ ಈ ಗಾಢ ಬಣ್ಣಗಳ ಬೋಲ್ಡ್ ಲುಕ್ನ ಬ್ಯಾಗ್ ಟ್ರೆಂಡಿ ಆಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ನವೆಂಬರ್ ಕ್ರಾಂತಿ ಮುನ್ಸೂಚನೆ ದೊರೆತ ಬೆನ್ನಲ್ಲೇ ಸಚಿವರಾದ ಡಾ.ಜಿ.ಪರಮೇಶ್ವರ್, ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ ಅವರು ಪ್ರತ್ಯೇಕ ಸಭೆ ನಡೆಸಿದ್ದು, ದಲಿತ ಸಚಿವರ ನಡೆ ತೀವ್ರ ಕುತೂಹಲ ಮೂಡಿಸಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ವರ್ಷದ ‘ಗೌರವ ಪ್ರಶಸ್ತಿ’ ಮತ್ತು ವರ್ಷದ ’ಸಾಹಿತ್ಯಶ್ರೀ’ ಪ್ರಶಸ್ತಿ ಪ್ರಕಟಿಸಿದ್ದು, ಶೂದ್ರ ಶ್ರೀನಿವಾಸ್, ಪ್ರತಿಭಾ ನಂದಕುಮಾರ್ ಸೇರಿ ಐವರು ವರ್ಷದ ಗೌರವ ಪ್ರಶಸ್ತಿಗೆ ಆಯ್ಕೆ
ಕೆರೆಗಳ ಸಂರಕ್ಷಣೆ ಸರ್ಕಾರ ಹಾಗೂ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಹಾಗಾಗಿ ರಾಜ್ಯದಲ್ಲಿ ಕೆರೆಗಳ ಜಾಗ ಒತ್ತುವರಿ ಮಾಡಿಕೊಂಡಿರುವವರು ತಾವಾಗಿಯೇ ಆ ಜಾಗ ಬಿಟ್ಟುಕೊಟ್ಟರೆ ಒಳಿತು. ತಪ್ಪಿದರೆ ಅಧಿಕಾರಿಗಳು ಮುಲಾಜಿಲ್ಲದೆ ಅಂಥ ಒತ್ತುವರಿ ತೆರವು ಮಾಡಬೇಕು
ಅಹಮದಾಬಾದ್ ಟೆಸ್ಟ್ನಲ್ಲಿ ಕೇವಲ ಎರಡೂವರೆ ದಿನಗಳಲ್ಲೇ ವೆಸ್ಟ್ಇಂಡೀಸ್ನ ಬಗ್ಗುಬಡಿದಿದ್ದ ಭಾರತ ತಂಡ, ಪ್ರವಾಸಿ ತಂಡದ ವಿರುದ್ಧ ಶುಕ್ರವಾರದಿಂದ 2ನೇ ಟೆಸ್ಟ್ನಲ್ಲಿ ಕಣಕ್ಕಿಳಿಯಲಿದೆ.
ಮಹಿಳಾ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಆಘಾತ ಎದುರಾಗಿದೆ. ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 3 ವಿಕೆಟ್ಗಳಿಂದ ಪರಾಭವಗೊಂಡಿತು. ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಗಿದ್ದ ಭಾರತವನ್ನು ರಿಚಾ ತಮ್ಮ ಹೋರಾಟದ ಮೂಲಕ ಮೇಲೆತ್ತಿದರೂ ಗೆಲುವು ಸಿಗಲಿಲ್ಲ.
ಪ್ರಸಕ್ತ ಸಾಲಿನ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಹಂಗೇರಿಯ ಲೇಖಕ ಲಾಸ್ಜ್ಲೋ ಕ್ರಾಸ್ಜ್ನಾಹೋರ್ಕೈ(71) ಆಯ್ಕೆಯಾಗಿದ್ದಾರೆ. ತತ್ವಾಧಾರಿತ ಹಾಗೂ ಹಾಸ್ಯಮಯ ಕಾದಂಬರಿಗೆ ಖ್ಯಾತರಾಗಿರುವ ಲಾಸ್ಜ್ಲೋ ಅವರ ಪ್ರಭಾವಶಾಲಿ ಮತ್ತು ದೂರದೃಷ್ಟಿಯ ಕೃತಿಗಳಿಗಾಗಿ ಪ್ರಶಸ್ತಿ ಒಲಿದುಬಂದಿದೆ.
ತಮಿಳುನಾಡಿನ ಶ್ರೀಶನ್ ಫಾರ್ಮಾಸ್ಯುಟಿಕಲ್ ಕಂಪನಿ ತಯಾರಿಸಿದ ಮಾರಕ ಕೋಲ್ಡ್ರಿಫ್ ಕೆಮ್ಮಿನೌಷಧ ಸೇವಿಸಿ ಮಧ್ಯಪ್ರದೇಶದ 22 ಹಾಗೂ ರಾಜಸ್ಥಾನದ 2 ಮಕ್ಕಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಕಂಪನಿಯ ಮಾಲೀಕ ಸೆರೆ
ಆಪರೇಷನ್ ಸಿಂದೂರದ ವೇಳೆ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟಿದ್ದ ಭಾರತೀಯ ವಾಯಪಡೆ, ಇದೀಗ ದಾಳಿಯಲ್ಲಿ ತಾನು ಧ್ವಂಸಗೊಳಿಸಿದ್ದ ವಾಯುನೆಲೆ, ಸೇನಾ ನೆಲೆ, ಉಗ್ರರ ಕಚೇರಿಗಳ ಪ್ರದೇಶಗಳ ಹೆಸರನ್ನು ತನ್ನ ಔತಣದ ಕೂಟದ ಮೆನುವಿಗೆ ಇಟ್ಟು ಪಾಕಿಸ್ತಾನವನ್ನು ಮತ್ತಷ್ಟು ಅಣಕವಾಡಿದೆ.