ಮೊದಲು ಎಚ್-1ಬಿ ವೀಸಾ ದರವನ್ನು ಹೆಚ್ಚಿಸುವ ಮೂಲಕ ಅಮೆರಿಕದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿದ್ದ ಭಾರತೀಯರ ಪಾಲಿಗೆ ಅದನ್ನು ದುಃಸ್ವಪ್ನವಾಗಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಅಮೆರಿಕದ ಕಾಲೇಜುಗಳಲ್ಲಿ ಜ್ಞಾನಾರ್ಜನೆಯ ಆಸೆ ಹೊತ್ತಿರುವವರಿಗೆ ಶಾಕ್ ನೀಡಿದ್ದಾರೆ.
ಬಿಹಾರ ವಿಧಾನಸಭೆಯ 243 ಕ್ಷೇತ್ರಗಳ ಸೀಟು ಹಂಚಿಕೆ ಸಂಬಂಧ ಮಿತ್ರಪಕ್ಷಗಳಲ್ಲಿ ಉಂಟಾಗಿದ್ದ ಅಸಮಾಧಾನ ಬಗೆಹರಿಸುವಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಯಶಸ್ವಿಯಾಗಿದೆ
ಅತ್ತ ಮಧ್ಯಾಹ್ನವೂ ಅಲ್ಲ, ಇತ್ತ ಬೆಳಗ್ಗೆಯೂ ಅಲ್ಲ ಎಂಬ ಹೊತ್ತಲ್ಲಿ ಆ ಮುದುಕ ಮುಂಬೈನ ಜುಹೂ ಬೀಚ್ ಸಮೀಪದ ರೆಸ್ಟೊರೆಂಟ್ಗೆ ಬರುತ್ತಿದ್ದ. ಸಿಡುಕು ಮುಖ, ನಿದ್ದೆಗೆಟ್ಟ ಕಣ್ಣು, ಸ್ಥೂಲ ಶರೀರದ ಆ ಆಸಾಮಿ ಬಂದ ಕೂಡಲೆ ಹೊಟೇಲಿನ ವಾತಾವರಣದಲ್ಲಿ ಅಸ್ಪಷ್ಟ ಪ್ರಕ್ಷುಬ್ಧತೆ ಆವರಿಸುತ್ತಿತ್ತು.
ಹ್ಯಾಂಡ್ಶೇಕ್ ಎಂಬುದು ಸ್ನೇಹ ಬೆಳೆಸುವುದಕ್ಕೆ, ಬಾಂಧವ್ಯ ವೃದ್ಧಿಸುವುದಕ್ಕೆ ಮೀಸಲಾಗಬೇಕಿಲ್ಲ. ಹ್ಯಾಂಡ್ಶೇಕ್ ಮಾಡದೆ ಅದನ್ನು ಒಂದು ಅಸ್ತವಾಗಿ ಕೂಡ ಬಳಸಬಹುದು, ಸೊಕ್ಕು ಮೆರೆವ ಶತ್ರು ದೇಶದ ಆಟಗಾರರಿಗೆ ತಕ್ಕ ಪಾಠ ಕಲಿಸುವ ಸಾಧನ ಕೂಡ ಮಾಡಿಕೊಳ್ಳಬಹುದು.
ನಾನು ಆಧುನಿಕರು ಕತ್ತಲನ್ನು ಕಾಣದವರು. ಆದರೆ ಆ ವಾಟರ್ ಮಿಲ್ ಊರಿನ ಮುದುಕನ ಹಾಗೆ ಬದುಕು ಸವೆಸಿದ ಮಹಾನ್ ಜೀವ ಡಾ ಹೇಮಾ ಸಾನೆ. ಇವರನ್ನು ಸಸ್ಯಶಾಸ್ತ್ರದ ಎನ್ಸೈಕ್ಲೋಪೀಡಿಯಾ ಅಂತ ಕರೆಯುತ್ತಾರೆ. ಕಳೆದ ತಿಂಗಳು ತನ್ನ 85 ವರ್ಷದ ತುಂಬು ಜೀವನಕ್ಕೆ ಕೊನೆ ಹಾಡಿದರು.
‘ರಾಜ್ಯದಲ್ಲಿ ದುಡಿಯುವ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ರಜೆ ನೀಡುವ ನೀತಿಯನ್ನು ಪ್ರತಿಯೊಂದು ಕಂಪೆನಿಯೂ ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಎಚ್ಚರಿಕೆ ನೀಡಿದ್ದಾರೆ.
ಪ್ರಿಯತಮನೊಂದಿಗೆ ಮಗಳು ಓಡಿ ಹೋಗಿದ್ದರಿಂದ ಆಕ್ರೋಶಗೊಂಡ ತಂದೆ, ಮಗಳ ತಿಥಿ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಅರ್ಭಟ ಮುಂದುವರೆದಿದ್ದು, ಮುಂದಿನ ಮೂರ್ನಾಲ್ಕು ದಿನ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಟ್ಯಾಕ್ಸಿ ಚಾಲಕನಿಗೆ ಮೊಬೈಲ್ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿ ನಿಂದನೆ ಮಾಡಿದ ಆರೋಪದ ಮೇಲೆ ಮಲೆಯಾಳಂ ಹಿರಿಯ ನಟ ಜಯಕೃಷ್ಣನ್ ಅವರನ್ನು ಉರ್ವ ಪೊಲೀಸರು ಶನಿವಾರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ
ಸುರಂಗ ರಸ್ತೆ ಯೋಜನೆಯಿಂದ ಲಾಲ್ಬಾಗ್ಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಿ, ಕಟ್ಟಡ ನಿರ್ಮಾಣ ಪರವಾನಗಿ, ಸ್ವಾಧೀನಾನುಭವ ಪ್ರಮಾಣ ಪತ್ರದ ಸಮಸ್ಯೆ ಪರಿಹರಿಸಿ, ಕಸ ಸಂಗ್ರಹ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ