ಸಾರಾಂಶ
ಕಲರ್ಸ್ ಕನ್ನಡ ವಾಹಿನಿ ಹೊಸ ಧಾರಾವಾಹಿಯನ್ನು ಸದ್ಯದಲ್ಲೇ ಪ್ರಾರಂಭಿಸುತ್ತಿದೆ.
ಕನ್ನಡಪ್ರಭ ಸಿನಿವಾರ್ತೆ
ಜುಗಾರಿ, ಲಾಸ್ಟ್ ಬಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಅವಿನಾಶ್ ಅವರು ಕಿರುತೆರೆಗೆ ಬಂದಿದ್ದಾರೆ. ಇವರಿಗೆ ನಾಯಕಿಯಾಗಿ ಮಯೂರಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿಯನ್ನು ಪ್ರೇಕ್ಷಕರ ಮುಂದೆ ತರುತ್ತಿರುವುದು ‘ನನ್ನ ದೇವ್ರು’ ಧಾರಾವಾಹಿ. ಈ ಧಾರಾವಾಹಿಯನ್ನಿ ನಿರ್ದೇಶಕ, ಖ್ಯಾತ ನಟ ರಮೇಶ್ ಇಂದಿರಾ ನಿರ್ದೇಶನ ಮಾಡುತ್ತಿದ್ದಾರೆ. ಕಿರುತೆರೆಯ ಅದ್ದೂರಿ ನಿರ್ಮಾಪಕಿ ಶ್ರುತಿ ನಾಯ್ಡು ನಿರ್ಮಿಸುತ್ತಿದ್ದಾರೆ.ಈ ಧಾರಾವಾಹಿ ಸದ್ಯದಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲು ಸಜ್ಜಾಗಿದೆ. ವಿ ಮನೋಹರ್, ಮಾಲತಿ ಸುಧೀರ್, ಯಮುನಾ ಶ್ರೀನಿಧಿ, ಪಲ್ಲವಿ, ವಿರಾಟ್ ಪ್ರಮುಖ ಪಾತ್ರಧಾರಿಗಳು.