ಇಡಿ ವಿಚಾರಣೆಗೆ ಹಾಜರಿತಡವಾಗಬಹುದು: ರೈ

| Published : Dec 05 2023, 01:30 AM IST

ಸಾರಾಂಶ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಾವು ಮಂಗಳವಾರ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಬಹುದು ಎಂದು ಬಹುಭಾಷಾ ನಟ ಪ್ರಕಾಶ್‌ ರೈ ತಿಳಿಸಿದ್ದಾರೆ

ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಾವು ಮಂಗಳವಾರ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಬಹುದು ಎಂದು ಬಹುಭಾಷಾ ನಟ ಪ್ರಕಾಶ್‌ ರೈ ತಿಳಿಸಿದ್ದಾರೆ. ಚೆನ್ನೈನಲ್ಲಿ ಚಂಡಮಾರುತದಿಂದ ಭಾರೀ ಮಳೆಯಾಗುತ್ತಿದೆ. ಹೀಗಾಗಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ತಾನು ವಿಚಾರಣೆಗೆ ಬರುವುದು ವಿಳಂಬವಾಗಬಹುದು, ಇ.ಡಿ. ಅಧಿಕಾರಿಗಳು ಕಾಯಬೇಕಾಗಿ ಬರಬಹುದು ಎಂದು ರೈ ಟ್ವೀಟ್‌ ಮಾಡಿದ್ದಾರೆ. ತಮಿಳುನಾಡಿನ ಆಭರಣ ಮಳಿಗೆಯೊಂದು 100 ಕೋಟಿ ರು. ಅಕ್ರಮ ಹಣ ವರ್ಗಾವಣೆ ನಡೆಸಿದ ಆರೋಪ ಹೊತ್ತಿದೆ. ಪ್ರಣವ್‌ ಜ್ಯೂವೆಲ್ಲರ್ಸ್‌ ಎಂಬ ಸಂಸ್ಥೆಗೆ ಪ್ರಕಾಶ್‌ ರೈ ಪ್ರಚಾರ ರಾಯಭಾರಿಯಾಗಿದ್ದ ಕಾರಣ ಅವರಿಗೆ ಇ.ಡಿ. ನೋಟಿಸ್‌ ನೀಡಲಾಗಿತ್ತು.