ಸಾರಾಂಶ
ಆಂಧ್ರಪ್ರದೇಶದ ಜನತೆಗೆ ಉತ್ತಮ ಹಾಗೂ ಅನುಕೂಲಕರ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ‘ಮನ ಮಿತ್ರ’(ನನ್ನ ಗೆಳೆಯ) ಹೆಸರಿನ ವಾಟ್ಸಾಪ್ ಆಡಳಿತ ವೇದಿಕೆಯನ್ನು ಐಟಿ ಸಚಿವ ನಾರಾ ಲೋಕೇಶ್ ಅವರು ಸಿಎಂ ನಿವಾಸದಲ್ಲಿ ಬಿಡುಗಡೆ ಮಾಡಿದ್ದಾರೆ.
ಅಮರಾವತಿ: ಆಂಧ್ರಪ್ರದೇಶದ ಜನತೆಗೆ ಉತ್ತಮ ಹಾಗೂ ಅನುಕೂಲಕರ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ‘ಮನ ಮಿತ್ರ’(ನನ್ನ ಗೆಳೆಯ) ಹೆಸರಿನ ವಾಟ್ಸಾಪ್ ಆಡಳಿತ ವೇದಿಕೆಯನ್ನು ಐಟಿ ಸಚಿವ ನಾರಾ ಲೋಕೇಶ್ ಅವರು ಸಿಎಂ ನಿವಾಸದಲ್ಲಿ ಬಿಡುಗಡೆ ಮಾಡಿದ್ದಾರೆ.
36 ಸರ್ಕಾರಿ ಇಲಾಖೆಗಳನ್ನು ಸಂಯೋಜಿಸಿ ರಚಿಸಲಾಗಿರುವ ಮನ ಮಿತ್ರದಲ್ಲಿ ರಾಜ್ಯದ ಜನರು ದೇವಸ್ಥಾನದ ಭೇಟಿಗೆ ಸಮಯ ನಿಗದಿಪಡಿಸುವುದು, ರಾಜ್ಯ ಸಾರಿಗೆ ಬಸ್ ಟಿಕೆಟ್ ಕಾಯ್ದಿರಿಸುವುದು, ಜನನ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆಯುವುದು ಸೇರಿದಂತೆ 161 ಸೇವೆಗಳು ಲಭ್ಯವಿದೆ.ಇದರ ಬಿಡುಗಡೆ ಬಳಿಕ ಮಾತನಾಡಿದ ಸಚಿವ ಲೋಕೇಶ್, ‘ಮುಂದಿನ ದಿನಗಳಲ್ಲಿ ಇಂತಹ ಹಲವು ಸೌಲಭ್ಯಗಳನ್ನು ಪರಿಚಯಿಸಲಾಗುವುದು. ನಮ್ಮ ಉದ್ದೇಶಗಳು ಜನ ಕೇಂದ್ರಿತವಾಗಿವೆ. ಪ್ರತಿ ಬಾರಿ ದಾಖಲೆ ಪಡೆಯಲು ಜನ ಸರ್ಕಾರಿ ಕಚೇರಿಗಳಿಗೇಕೆ ಬರಬೇಕು? ಜನರು ಕ್ಷಣಾರ್ಧದಲ್ಲಿ ಕ್ಯಾಬ್ ಅಥವಾ ಸಿನಿಮಾ ಟಿಕೆಟ್ ಬುಕ್ ಮಾಡಬಹುದಾದರೆ, ದಾಖಲೆಗಳನ್ನೇಕೆ ಅಷ್ಟೇ ಸುಲಭದಲ್ಲಿ ಪಡೆಯಬಾರದು’ ಎಂದರು.
2ನೇ ಹಂತದಲ್ಲಿ ಮನ ಮಿತ್ರವು ಹೆಚ್ಚುವರಿ 360 ಸೇವೆಗಳನ್ನು ಒದಗಿಸಲಿದೆ. ಪ್ರಸ್ತುತ ತಿರುಮಲ ತಿರುಪತಿ ದೇವಸ್ಥಾನದ ಸೇವಗಳು ಇದ ಭಾಗವಾಗಿಲ್ಲವಾದರೂ ಮುಂದಿನ ದಿನಗಳಲ್ಲಿ ಇದನ್ನು ಸೇರಿಸಲಾಗುವುದು ಎಂದು ಲೋಕೇಶ್ ತಿಳಿಸಿದ್ದಾರೆ. 2024ರ ಅ.22ರಂದು ಆಂಧ್ರ ಸರ್ಕಾರ ಈ ಸಂಬಂಧ ಮೆಟಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.