ಆಂಧ್ರ ಮಾಜಿ ಸಿಎಂ ಜಗನ್‌ ಕಾರು ಹರಿದು ಬೆಂಬಲಿಗ ಬಲಿ

| N/A | Published : Jun 22 2025, 11:48 PM IST / Updated: Jun 23 2025, 04:03 AM IST

ಆಂಧ್ರ ಮಾಜಿ ಸಿಎಂ ಜಗನ್‌ ಕಾರು ಹರಿದು ಬೆಂಬಲಿಗ ಬಲಿ
Share this Article
  • FB
  • TW
  • Linkdin
  • Email

ಸಾರಾಂಶ

ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಅವರಿದ್ದ ಕಾರು ಹರಿದು ಪಕ್ಷದ ಬೆಂಬಲಿಗ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

 ಗುಂಟೂರು: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಅವರಿದ್ದ ಕಾರು ಹರಿದು ಪಕ್ಷದ ಬೆಂಬಲಿಗ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. 

ಮೃತ ಸಿಂಘಯ್ಯ ಅವರು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಬೆಂಬಲಿಗರಾಗಿದ್ದು, ಭಾನುವಾರ ಗುಂಟೂರು ಜಿಲ್ಲೆಯ ರೆಂಟಪಲ್ಲಿ ಎಂಬಲ್ಲಿ ಜಗನ್‌ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದರು. 

ಜಗನ್‌ ಅವರು ಕಾರಿನ ಕಿಟಕಿಯಿಂದ ಹೊರಬಂದು ನೆರೆದಿರುವವರತ್ತ ಕೈ ಬೀಸಿ ಹಸ್ತಾಲಾಘವ ಮಾಡುತ್ತಿದ್ದರು. ಈ ವೇಳೆ ಕಾರಿನ ಚಾಲಕನ ಬದಿಯಲ್ಲಿ ಸಿಂಘಯ್ಯ ಆಯತಪ್ಪಿ ಕಾರಿನ ಕೆಳಗೆ ಬಿದ್ದಿದ್ದಾರೆ. 

ಸಿಂಘಯ್ಯ ಬಿದ್ದಿರುವುದನ್ನು ಗಮನಿಸದ ಚಾಲಕ ಕುತ್ತಿಗೆ ಮತ್ತು ತಲೆ ಮೇಲೆಯೇ ಕಾರನ್ನು ಚಲಾಯಿಸಿದ್ದಾನೆ. ಇದರಿಂದಾಗಿ ಸಿಂಘಯ್ಯ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Read more Articles on