ರಾಮೇಶ್ವರ ಕೆಫೆಗೆ ಅಸಾದುದ್ದಿನ್‌ ಒವೈಸಿ: ಆಹಾರದ ಬಗ್ಗೆ ಶ್ಲಾಘನೆ, ಬಾಂಬ್‌ ದಾಳಿಗೆ ಕಟುಟೀಕೆ

| Published : Mar 04 2024, 01:22 AM IST / Updated: Mar 04 2024, 08:16 AM IST

ರಾಮೇಶ್ವರ ಕೆಫೆಗೆ ಅಸಾದುದ್ದಿನ್‌ ಒವೈಸಿ: ಆಹಾರದ ಬಗ್ಗೆ ಶ್ಲಾಘನೆ, ಬಾಂಬ್‌ ದಾಳಿಗೆ ಕಟುಟೀಕೆ
Share this Article
  • FB
  • TW
  • Linkdin
  • Email

ಸಾರಾಂಶ

ಎಂಐಎಂ ಪಕ್ಷದ ಸ್ಥಾಪಕ ಅಸಾದುದ್ದಿನ್‌ ಒವೈಸಿ ಅವರು ಹೈದರಾಬಾದ್‌ನಲ್ಲಿ ನೂತನವಾಗಿ ಆರಂಭವಾಗಿರುವ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಅಲ್ಲಿನ ಆಹಾರದ ಗುಣಮಟ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಬೆಂಗಳೂರಿನಲ್ಲಿ ನಡೆದ ಬಾಂಬ್‌ ದಾಳಿ ಕುರಿತು ಟೀಕೆ ಮಾಡಿದರು.

ಹೈದರಾಬಾದ್‌: ಬೆಂಗಳೂರಿನಲ್ಲಿರುವ ರಾಮೇಶ್ವರಂ ಕೆಫೆ ಮೇಲೆ ಬಾಂಬ್‌ ದಾಳಿ ಬೆನ್ನಲ್ಲೇ, ಎಂಐಎಂ ಪಕ್ಷದ ನಾಯಕ, ಸಂಸದ ಅಸಾದುದ್ದೀನ್‌ ಒವೈಸಿ ಇತ್ತೀಚೆಗಷ್ಟೇ ಇಲ್ಲಿ ಆರಂಭವಾದ ರಾಮೇಶ್ವರ ಕೆಫೆಗೆ ಶನಿವಾರ ಭೇಟಿ ನೀಡಿದರು.

ಈ ವೇಳೆ ಪ್ರತಿಕ್ರಿಯಿಸಿದ ಅವರು ಇಲ್ಲಿ ಸಿಗುವ ಆಹಾರ ಆಹಾರ ತುಂಬಾ ಚೆನ್ನಾಗಿದ್ದು, ಈ ಕೆಫೆಗೆ ಎಪಿಜೆ ಅಬ್ದುಲ್‌ ಕಲಾಂ ಅವರ ಹುಟ್ಟೂರಿನ ಹೆಸರಿಟ್ಟಿರುವುದು ಶ್ಲಾಘನೀಯ.

ಆದರೆ ಕಿಡಿಗೇಡಿಗಳು ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್‌ ಇಟ್ಟಿರುವುದು ಹೇಡಿತನದ ಕೃತ್ಯ. ಇದು ಭಾರತದ ಮೌಲ್ಯದ ಮೇಲಿನ ದಾಳಿಯಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಎಐಎಂಐಎಂನ ಅಧ್ಯಕ್ಷ ಹಾಗೂ ಇಲ್ಲಿನ ಸಂಸದ ಅಸಾದುದ್ದೀನ್‌ ಓವೈಸಿ ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಾದ ಬಾಂಬ್ ಸ್ಫೋಟವನ್ನು ಖಂಡಿಸಿದ್ದಾರೆ. 

ರಾಮೇಶ್ವರ ಕೆಫೆಗೆ ಭಾನುವಾರ ಭೇಟಿ ನೀಡಿದ ಅವರು, ರಾಮೇಶ್ವರ ಕೆಫೆಯಲ್ಲಿ ಸಿಗುವ ಆಹಾರ ತುಂಬಾ ಚೆನ್ನಾಗಿದ್ದು, ಈ ಕೆಫೆಗೆ ಎಪಿಜೆ ಅಬ್ದುಲ್‌ ಕಲಾಂ ಅವರ ಹುಟ್ಟೂರಿನ ಹೆಸರಿಟ್ಟಿರುವುದು ಶ್ಲಾಘನೀಯ. 

ಆದರೆ ಕಿಡಿಗೇಡಿಗಳು ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್‌ ಇಟ್ಟಿರುವುದು ಹೇಡಿತನದ ಕೃತ್ಯ. ಇದು ಭಾರತದ ಮೌಲ್ಯದ ಮೇಲಿನ ದಾಳಿಯಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.