ಸಾರಾಂಶ
- ವಿಮಾನದೊಳಗೆ ಹೊಯ್ದಾಟ । ಕಂಗಾಲಾಗಿ ಕಿರುಚಾಡಿದ ಪ್ರಯಾಣಿಕರುಶ್ರೀನಗರ: ಬುಧವಾರ ದೆಹಲಿಯಿಂದ ಶ್ರೀನಗರಕ್ಕೆ 220 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನವು ಪ್ರತಿಕೂಲ ಹವಾಮಾನದಿಂದಾಗಿ ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿತು. ಇದರಿಂದಾಗಿ ವಿಮಾನದಲ್ಲಿ ಭಯಭೀತರಾದರು.ಈ ವೇಳೆ ವಿಮಾನದ ಮೂತಿ ಜಖಂಗೊಂಡಿದೆ. ಆದರೂ ವಿಮಾನವು ಸಂಜೆ 6:30 ಕ್ಕೆ ಶ್ರೀನಗರದಲ್ಲಿ ಸುರಕ್ಷಿತವಾಗಿ ಇಳಿಯಲು ಯಶಸ್ವಿಯಾಗಿದೆ. ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ
ವಿಮಾನವು ತೀವ್ರವಾಗಿ ಅಲುಗಾಡುತ್ತಿದ್ದಂತೆ ಪ್ರಯಾಣಿಕರು ಕಿರುಚುವುದು, ಅಳುವುದು ಮತ್ತು ಪ್ರಾರ್ಥಿಸುವುದನ್ನು ತೋರಿಸುವ ಭಯಾನಕ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಕ್ಯಾಬಿನ್ ಅಸ್ತವ್ಯಸ್ತವಾಗಿ ಕಾಣುತ್ತಿತ್ತು. ಮೇಲಿನ ಬಾಕ್ಸ್ಗಳು ಸದ್ದು ಮಾಡುತ್ತಿದ್ದವು ಮತ್ತು ಜನರು ಭಯದಿಂದ ತಮ್ಮ ಆಸನಗಳನ್ನು ಹಿಡಿದುಕೊಂಡಿದ್ದರು. ಭಯಾನಕ ಪರಿಸ್ಥಿತಿಯ ಹೊರತಾಗಿಯೂ, ವಿಮಾನ ಸುರಕ್ಷಿತವಾಗಿ ಇಳಿಯಿತು.
ದಿಲ್ಲಿಯಲ್ಲಿ ಭಾರಿ ಬಿರುಗಾಳಿ: ವಿದ್ಯುತ್, ವಿಮಾನ ಸೇವೆ ಅಸ್ತವ್ಯಸ್ತನವದೆಹಲಿ: ಬುಧವಾರ ಸಂಜೆ ದೆಹಲಿ ಮತ್ತು ನೋಯ್ಡಾದಲ್ಲಿ ಗಂಟೆಗೆ 79 ಕಿ.ಮೀ. ವೇಗದಲ್ಲಿ ಭಾರಿ ಬಿರುಗಾಳಿ ಬೀಸಿದ್ದು, ಹಲವಾರು ಪ್ರದೇಶಗಳಲ್ಲಿ ನೀರು ನಿಂತು ವಿದ್ಯುತ್ ಕಡಿತಗೊಂಡಿದೆ. ಹಲವೆಡೆ ಹೋರ್ಡಿಂಗ್ಗಳು ಬಿದ್ದು ಮರಗಳು ಬುಡಮೇಲಾಗಿವೆ. ವಿಮಾನಯಾನ ಸಂಸ್ಥೆಗಳು ಸಹ ಎಚ್ಚರಿಕೆ ನೀಡಿದ್ದು, ಹವಾಮಾನ ಬದಲಾವಣೆಯು ವಿಮಾನ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿವೆ. ದೆಹಲಿಯ ಕೆಲವು ಕಡೆ ಆಲಿಕಲ್ಲು ಮಳೆಯಾಗಿದೆ. ಬಲವಾದ ಗಾಳಿಯಿಂದಾಗಿ ಮರಗಳು ತೂಗಾಡುತ್ತಿರುವುದನ್ನು ದೃಶ್ಯಗಳು ತೋರಿಸಿವೆ. ಬಿರುಗಾಳಿ ಕಾರಣ ರಸ್ತೆ ಸಂಚಾರ ಕೂಡ ಅಸ್ತವ್ಯಸ್ತಗೊಂಡಿದೆ.