ಸಾರಾಂಶ
1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಸಾಧಿಸಿದ ಜಯದ ನೆನಪಿಗೆ ಆಚರಿಸಲಾಗುವ ‘ಕಾರ್ಗಿಲ್ ವಿಜಯ ದಿವಸ’ದ ನಿಮಿತ್ತ ಶನಿವಾರ ಸೇನೆಯು 3 ಯೋಜನೆಗಳ ಉದ್ಘಾಟನೆಗೆ ಸಜ್ಜಾಗಿದೆ.
ದ್ರಾಸ್: 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಸಾಧಿಸಿದ ಜಯದ ನೆನಪಿಗೆ ಆಚರಿಸಲಾಗುವ ‘ಕಾರ್ಗಿಲ್ ವಿಜಯ ದಿವಸ’ದ ನಿಮಿತ್ತ ಶನಿವಾರ ಸೇನೆಯು 3 ಯೋಜನೆಗಳ ಉದ್ಘಾಟನೆಗೆ ಸಜ್ಜಾಗಿದೆ.
ಮೊದಲನೆಯದಾಗಿ, ದೇಶಕ್ಕಾಗಿ ಮಡಿದ ಹುತಾತ್ಮರಿಗೆ ಸಾರ್ವಜನಿಕರು ಶ್ರದ್ಧಾಂಜಲಿ ಸಲ್ಲಿಸಲು ‘ಇ-ಶ್ರದ್ಧಾಂಜಲಿ’ ಎಂಬ ಪೋರ್ಟಲ್ ಆರಂಭಿಸಲಾಗುವುದು. ಈ ಮೂಲಕ, ಜನರಲ್ಲಿ ಯೋಧರ ತ್ಯಾಗ-ಬಲಿದಾನದ ಬಗ್ಗೆ ಅರಿವು ಮೂಡಿಸಲಾಗುವುದು.
ಇನ್ನೊಂದು ಯೋಜನೆಯಡಿ, ಕಾರ್ಗಿಲ್ ಯುದ್ಧದ ರೋಚಕ ಕತೆಗಳನ್ನು ಕೇಳಲು ಕ್ಯುಆರ್ ಕೋಡ್ ಆಧರಿತ ಆಡಿಯೋ ಆ್ಯಪ್ ಬಿಡುಗಡೆ ಮಾಡಲಾಗುವುದು.
ಅಂತೆಯೇ 3ನೇ ಯೋಜನೆಯಾದ ‘ಇಂಡಸ್ ಪಾಯಿಂಟ್’ ಅಡಿ, ಬಟಾಲಿಕ್ ಸೆಕ್ಟರ್ ವರೆಗೆ ಹೋಗಿ, ಭಾರತ-ಪಾಕ್ ನಡುವೆ ಇರುವ ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಯನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು. ಇದರಿಂದ ಸೈನಿಕರ ಎಂಥ ಸ್ಥಿತಿಯಲ್ಲಿ ಹಗಲಿರುಳು ದೇಶ ಕಾಯುತ್ತಿರುತ್ತಾರೆ ಎಂಬುದನ್ನು ಮನವರಿಕೆ ಮಾಡಿಸಲಾಗುವುದು.